ಶ್ರೀನಗರ: ರಾಜಕೀಯ ತಳಮಳದ ನಡುವೆಯೇ ಪುಲ್ವಾಮ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಜೈಷೆ ಮೊಹಮ್ಮದ್ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಜಮ್ಮು-ಕಾಶ್ಮೀರ ಡಿಜಿಪಿ ಎಸ್.ಪಿ.ವೈದ್ ತಿಳಿಸಿದ್ದಾರೆ. ಇನ್ನು ಕೆಲವು ಉಗ್ರರು ಅಡಗಿಕೊಂಡಿದ್ದು, ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರ ಬಂದ್ ಕರೆ: ಪ್ರತ್ಯೇಕತಾವಾದಿಗಳ ಉದ್ಧಟ ವರ್ತನೆ ಜಮ್ಮು-ಕಾಶ್ಮೀರದಲ್ಲಿ ಮುಂದುವರಿದಿದೆ. ಪತ್ರಕರ್ತ ಶುಜಾತ್ ಬುಖಾರಿ ಮತ್ತು ಯೋಧರಿಂದ ನಾಗರಿಕರ ಹತ್ಯೆ ಖಂಡಿಸಿ ಬುಧವಾರ ಸಂಪೂರ್ಣ ಕಾಶ್ಮೀರ ಬಂದ್ಗೆ ಪ್ರತ್ಯೇಕತಾವಾದಿ ನಾಯಕರು ಕರೆ ನೀಡಿದ್ದಾರೆ. ವಿವಿಧ ಪ್ರತ್ಯೇಕತಾವಾದಿ ಬಣಗಳು ಸೇರಿ ಈ ಪ್ರತಿಭಟನೆಗೆ ಕರೆ ನೀಡಿವೆ. ‘‘ಕಣಿವೆ ರಾಜ್ಯದಲ್ಲಿ ಸೇನೆ ಅಬ್ಬರ ಅತಿಯಾಗಿದೆ. ನಾಗರಿಕರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ರಮ್ಜಾನ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಹತ್ಯೆಗಳು ಹೆಚ್ಚಿದ್ದವು. ಈ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ನಡೆಯಬೇಕು ಎಂದು ಪ್ರತ್ಯೇಕತಾವಾದಿ ನಾಯಕರು ಆಗ್ರಹಿಸಿದ್ದಾರೆ.
ಕಾಶ್ಮೀರ ಬಂದ್ ಕರೆ: ಪ್ರತ್ಯೇಕತಾವಾದಿಗಳ ಉದ್ಧಟ ವರ್ತನೆ ಜಮ್ಮು-ಕಾಶ್ಮೀರದಲ್ಲಿ ಮುಂದುವರಿದಿದೆ. ಪತ್ರಕರ್ತ ಶುಜಾತ್ ಬುಖಾರಿ ಮತ್ತು ಯೋಧರಿಂದ ನಾಗರಿಕರ ಹತ್ಯೆ ಖಂಡಿಸಿ ಬುಧವಾರ ಸಂಪೂರ್ಣ ಕಾಶ್ಮೀರ ಬಂದ್ಗೆ ಪ್ರತ್ಯೇಕತಾವಾದಿ ನಾಯಕರು ಕರೆ ನೀಡಿದ್ದಾರೆ. ವಿವಿಧ ಪ್ರತ್ಯೇಕತಾವಾದಿ ಬಣಗಳು ಸೇರಿ ಈ ಪ್ರತಿಭಟನೆಗೆ ಕರೆ ನೀಡಿವೆ. ‘‘ಕಣಿವೆ ರಾಜ್ಯದಲ್ಲಿ ಸೇನೆ ಅಬ್ಬರ ಅತಿಯಾಗಿದೆ. ನಾಗರಿಕರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ರಮ್ಜಾನ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಹತ್ಯೆಗಳು ಹೆಚ್ಚಿದ್ದವು. ಈ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ನಡೆಯಬೇಕು ಎಂದು ಪ್ರತ್ಯೇಕತಾವಾದಿ ನಾಯಕರು ಆಗ್ರಹಿಸಿದ್ದಾರೆ.