ಆ್ಯಪ್ನಗರ

ಪಿಣರಾಯಿ ವಿಜಯನ್‌ ಹತ್ಯೆ ನಡೆಸುವುದಾಗಿ ನಕ್ಸಲರ ಬೆದರಿಕೆ ಪತ್ರ

ನಕ್ಸಲರ ಹತ್ಯೆಗೆ ಪ್ರತಿಯಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಜೀವ ತೆಗೆಯುವುದಾಗಿ ನಕ್ಸಲರು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಮಲಯಾಳಂ ನಲ್ಲಿ ಬರೆದಿರುವ ಪತ್ರದಲ್ಲಿ ಬೆದರ್‌ ಮೂಸಾ ಎಂಬ ನಕ್ಸಲ್‌ ಸಂಘಟನೆಯ ಸಹಿ ಇದೆ.

Vijaya Karnataka Web 16 Nov 2019, 8:00 am
ಕೊಯಿಕ್ಕೋಡ್‌: ನಕ್ಸಲರ ಹತ್ಯೆಗೆ ಪ್ರತಿಯಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಜೀವ ತೆಗೆಯುವುದಾಗಿ ನಕ್ಸಲರು ಬೆದರಿಕೆ ಹಾಕಿದ್ದಾರೆ. ''2016ರಿಂದ ರಾಜ್ಯದಲ್ಲಿ ಕೇರಳ ಸರಕಾರ ಏಳು ಮಾವೋವಾದಿಗಳ ಹತ್ಯೆ ಮಾಡಿದೆ. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳದೇ ನಾವು ವಿರಮಿಸುವುದಿಲ್ಲ. ಸಿಎಂ ವಿಜಯನ್‌ ಅವರ ಹತ್ಯೆ ನಡೆಸುತ್ತೇವೆ,'' ಎಂಬ ಒಕ್ಕಣೆಯ ಬೆದರಿಕೆ ಪತ್ರ ಕೊಯಿಕ್ಕೋಡ್‌ ಜಿಲ್ಲೆಯ ವಟಕಾರ ಪೊಲೀಸ್‌ ಠಾಣೆಗೆ ಬಂದಿದೆ.
Vijaya Karnataka Web Kerala Chief Minister Pinarayi Vijayan


ಮಲಯಾಳಂ ಭಾಷೆಯಲ್ಲಿರುವ ಪತ್ರಕ್ಕೆ ಬೆದರ್‌ ಮೂಸಾ ಎಂಬ ನಕ್ಸಲ್‌ ಸಂಘಟನೆಯ ಸಹಿ ಇದೆ. ಪತ್ರ ಬಂದಿರುವುದನ್ನು ಖಚಿತಪಡಿಸಿರುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು, ಕೊಯಿಕ್ಕೋಡ್‌ ಸುತ್ತಮುತ್ತಲಿನ ಪ್ರದೇಶದಿಂದ ಪೋಸ್ಟ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಅ.28ರಂದು ಪಾಲಕ್ಕಾಡ್‌ ಜಿಲ್ಲೆಯಲ್ಲಿನಾಲ್ವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ.

2016 ರಿಂದ ಇದುವರೆಗೂ ಕೇರಳದಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಒಟ್ಟು ಆರು ನಕ್ಸಲರನ್ನು ಪೊಲೀಸರು ಎನ್ ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ನವಂಬರ್ 25, 2016 ರಂದು ನಕ್ಸಲ್ ನಾಯಕರಾದ ಕುಪ್ಪು ದೇವರಾಜ್, ಅಜಿತಾ ಹತ್ಯೆಯಾಗಿದ್ದರು. ಮಾರ್ಚ್ 6, 2019 ರಂದು ಸಿಪಿ ಜಲೀಲ್ ಎಂಬಾತ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿದ್ದ. 2019ರ ಅಕ್ಟೋಬರ್ ಅ.28 ರಂದು ನಾಲ್ವರು ನಕ್ಸಲರನ್ನು ಹತ್ಯೆ ಮಾಡಲಾಗಿತ್ತು.

ಕರ್ನಾಟಕದಲ್ಲಿ ನಕ್ಸಲ್‌ ಚಟುವಟಿಕೆ ಸಕ್ರಿಯವಾಗಿದ್ದ ಸಂದರ್ಭದಲ್ಲಿ ಪಶ್ಚಿಮ ಘಟ್ಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಕ್ಸಲರು ಇತ್ತೀಚೆಗೆ ಕೇರಳದ ಕಡೆ ಮುಖಮಾಡಿದ್ದಾರೆ. ಕೇರಳದಲ್ಲಿ ಇತ್ತೀಚೆಗೆ ಮಾವೋವಾದಿಗಳು ಸಂಘಟನಾತ್ಮಕವಾಗಿ ಪ್ರಬಲಗೊಳ್ಳುತ್ತಿದ್ದು ಕರ್ನಾಟಕ, ಆಂಧ್ರ ಪ್ರದೇಶದ ನಕ್ಸಲರೂ ಜೊತೆ ಸೇರಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ