ಆ್ಯಪ್ನಗರ

ಮರಾಠ ಮೀಸಲು ಹೋರಾಟ: ಭುಗಿಲೆದ್ದ ಹಿಂಸಾಚಾರ, ಪ್ರತಿಭಟನಾಕಾರ ಆತ್ಮಹತ್ಯೆ

ಸರಕಾರಿ ಉದ್ಯೋಗ ಮತ್ತು ಶಿಕ್ಷ ಣದಲ್ಲಿ ಮೀಸಲು ಕಲ್ಪಿಸಬೇಕೆಂದು ಮರಾಠ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಸೋಮವಾರ ಮತ್ತೆ ಹಿಂಸೆಗೆ ತಿರುಗಿದೆ.

Vijaya Karnataka 30 Jul 2018, 10:15 pm
ಪುಣೆ: ಸರಕಾರಿ ಉದ್ಯೋಗ ಮತ್ತು ಶಿಕ್ಷ ಣದಲ್ಲಿ ಮೀಸಲು ಕಲ್ಪಿಸಬೇಕೆಂದು ಮರಾಠ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಸೋಮವಾರ ಮತ್ತೆ ಹಿಂಸೆಗೆ ತಿರುಗಿದ್ದು, ಪ್ರತಿಭಟನಾಕಾರರೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web ಪುಣೆಯಲ್ಲಿ ಪ್ರತಿಭಟನೆ
ಪುಣೆಯಲ್ಲಿ ಪ್ರತಿಭಟನೆ


ಪ್ರತಿಭಟನಾನಿರತ 35 ವರ್ಷದ ಪ್ರಮೋದ್‌ ಜೈಸಿಂಗ್‌ ಔರಂಗಾಬಾದ್‌ನಲ್ಲಿ ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಪುಣೆ ಮತ್ತು ಔರಂಗಾಬಾದ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಉದ್ರಿಕ್ತರು ಸರಕಾರಿ ಬಸ್‌ ಹಾಗೂ ಖಾಸಗಿ ವಾಹನಗಳಿಗೆ ಕಲ್ಲು ತೂರಿದ್ದಲ್ಲದೇ ಬೆಂಕಿ ಹಚ್ಚಿ ದಾಂಧಲೆ ನಡೆಸಿದರು. ಅಘೋಷಿತ ಬಂದ್‌ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಾಗೂ ಕ್ಷಿಪ್ರ ಕಾರ್ಯಪಡೆಗಳು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗಿಸಿದವು. ಗಲಭೆಯಲ್ಲಿ ಪೊಲೀಸರೂ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಹಿಂಸಾಚಾರ ತೀವ್ರಗೊಂಡ ಪುಣೆಯ ಚಕನ್‌ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ: ''ಮರಾಠ ಮೀಸಲು ಹೋರಾಟಕ್ಕಾಗಿ ನನ್ನ ಜೀವನ ಮುಡಿಪಾಗಿಡಲು ಇಚ್ಛಿಸಿದ್ದೇನೆ. ನಾನು ಮರಾಠಿಗರ ಒಳಿತಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ,'' ಎಂಬ ಸಂದೇಶವನ್ನು ಪ್ರಮೋದ್‌ ಜೈಸಿಂಗ್‌ ಭಾನುವಾರ ರಾತ್ರಿಯೇ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದ. ಆತನ ಸ್ನೇಹಿತರು ಬುದ್ಧಿವಾದ ಹೇಳಿದ್ದರು ಎಂಬ ಸಂಗತಿ ತನಿಖೆ ವೇಳೆ ಬಯಲಿಗೆ ಬಂದಿದೆ.

''ಮರಾಠಿಗರಿಗೆ ನ್ಯಾಯ ಸಿಗುವವರೆಗೂ ನಮ್ಮ ಮಗನ ಮೃತದೇಹ ಪಡೆಯುವುದಿಲ್ಲ. ಮೀಸಲು ವಿಚಾರದಲ್ಲಿ ಸರಕಾರ ಸ್ಪಷ್ಟ ನಿಲುವು ಪ್ರದರ್ಶಿಸಬೇಕು,'' ಎಂದು ಪ್ರಮೋದ್‌ ಕುಟುಂಬ ಸದಸ್ಯರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ