ಆ್ಯಪ್ನಗರ

ಲಿಫ್ಟಿನೆಂಟ್ ಆಗಿ ಸೈನ್ಯ ಸೇರಿದ ಹುತಾತ್ಮ ಸೈನಿಕನ ಪತ್ನಿ

ದೇಶದ ಗಡಿ ಕಾಯುತ್ತಿದ್ದ ತನ್ನ ಪತಿ ಹುತಾತ್ಮನಾದಾಗ ಬದುಕು ಮುಗಿಯಿತೆಂದು ಕುಸಿದು ಕುಳಿತುಕೊಳ್ಳಲಿಲ್ಲ ಆಕೆ. ಆತ ನಡೆದ ಹಾದಿಯಲ್ಲೇ ನಡೆದು ಮಾತೃಭೂಮಿಗಾಗಿ ಬದುಕು ಮೀಸಲಾಗಿಡಲು ನಿರ್ಧರಿಸಿದಳು.

Times Now 24 Sep 2018, 10:52 am
ಸಾಂಬಾ: ಚಿಕ್ಕಚಿಕ್ಕ ಸಮಸ್ಯೆ, ನೋವಿಗೆ ಕೈ ಚೆಲ್ಲಿ ಕುಳಿತು ಬಿಡುತ್ತೇವೆ. ಬದುಕೇ ಮುಗಿದು ಹೋಯಿತೆಂದುಕೊಂಡುಬಿಡುತ್ತೇವೆ. ಆದರೆ ಇದಕ್ಕೆ ವಿರುದ್ಧವಾಗಿ ಕೆಲವರಿರುತ್ತಾರೆ. ಬದುಕು ಅವರನ್ನು ಮಕಾಡೆ ಮಲಗಿಸಿದರೂ ಸೋಲನ್ನು ಸೋಲಿಸಿ ಮತ್ತೆ ಎದ್ದು ನಿಲ್ಲುತ್ತಾರೆ. ಅಂತವರ ಸಾಲಿಗೆ ಸೇರುತ್ತಾರೆ ಲಿಫ್ಟಿನೆಂಟ್ ನೀರು ಸಂಭಾಲ್.
Vijaya Karnataka Web Liftiment


ಹುತಾತ್ಮ ಸೈನಿಕ ರವೀಂದರ್ ಸಂಭಾಲ್, ಅವರ ಪತ್ನಿ ಈ ನೀರು. ರೈಫಲ್‌ಮ್ಯಾನ್ ಆಗಿದ್ದ ರವೀಂದರ್ 2015ರಲ್ಲಿ ಹುತಾತ್ಮರಾಗಿದ್ದರು. 2013ರಲ್ಲಿ ಮದುವೆಯಾಗಿದ್ದ ರವೀಂದರ್ ಮತ್ತು ನೀತುಗೆ 2 ವರ್ಷದ ಮಗಳಿದ್ದಾಳೆ. ಪತಿ ಹುತಾತ್ಮನಾದ ಸುದ್ದಿ ಬರಸಿಡಿಲಂತೆ ಬಡಿದಾಗ ನೀರು ಎಲ್ಲವೂ ಮುಗಿದುಹೋಯಿತೆಂದು ಕುಸಿದು ಕುಳಿತುಕೊಳ್ಳಲಿಲ್ಲ. ಪುತ್ರಿ ಮತ್ತು ಕುಟುಂಬದ ಜವಾಬ್ದಾರಿ ಅವರ ಹೆಗಲಿಗಿತ್ತು. ಪತಿ ನಡೆದುಕೊಟ್ಟ ಹಾದಿಯಲ್ಲಿ ನಡೆದುಕೊಂಡೇ ಜವಾಬ್ದಾರಿ ಹೊರುವ ನಿರ್ಧಾರ ಮಾಡಿದ ಅವರು ಆಯ್ದುಕೊಂಡಿದ್ದು ಸೈನಿಕ ವೃತ್ತಿ.


ಸೈನ್ಯಕ್ಕೆ ಸೇರಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ನೀರು ಮತ್ತೀಗ ಲಿಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ.

''ನನ್ನ ಪತಿ ಇನ್ನಿಲ್ಲವೆಂಬ ಸತ್ಯವನ್ನು ಒಪ್ಪಿಕೊಳ್ಳುವುದು ತುಂಬ ಕಷ್ಟವೆನಿಸಿತ್ತು. ಆದರೆ ನನ್ನ ಮಗಳೇ ನನಗೆ ಸ್ಪೂರ್ತಿಯಾದಳು. ಆಕೆಗೆ ತಾಯಿ ಅಷ್ಟೇ ಅಲ್ಲ ತಂದೆ ಕೂಡ ಆಗಬೇಕು. ಎರಡು ಪಾತ್ರವನ್ನು ನಿರ್ವಹಿಸಬೇಕು ಎಂಬ ನಿರ್ಧಾರವೇ ನಾನು 49ವಾರಗಳ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಲು ಪ್ರೇರಣೆ ನೀಡಿತು,''ಎನ್ನುತ್ತಾರೆ ನೀರು.

ತಮ್ಮ ಈ ಯಶಸ್ಸಿನ ಹಿಂದೆ ಪತಿಯ ಪೋಷಕರು ಮತ್ತು ತವರು ಮನೆಯವರ ಬೆಂಬಲ ಎಷ್ಟು ಮಹತ್ವ ವಹಿಸಿದೆ ಎಂಬುದನ್ನು ಸ್ಮರಿಸಲು ಮರೆಯುವುದಿಲ್ಲ ನೀರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ