ಆ್ಯಪ್ನಗರ

ಮಸೂದ್‌ ಅಜರ್‌ಗೆ ತಕ್ಕ ಶಾಸ್ತಿ ಆಗುವವರೆಗೂ ಸುಮ್ಮನಿರಲ್ಲ: ಭಾರತ

ಜೈಷೆ ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ ವಿರುದ್ಧ ಭಾರತ ಕಿಡಿಕಾರಿದೆ.

TNN 18 Sep 2017, 8:25 am
ನ್ಯೂಯಾರ್ಕ್‌: ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ, ಜೈಷೆ ಮೊಹಮ್ಮದ್‌ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಲಿದೆ ಎಂಬ ವಿಶ್ವಾಸವನ್ನು ಭಾರತ ವ್ಯಕ್ತಪಡಿಸಿದೆ.
Vijaya Karnataka Web masood azhar will be pursued until justice is met syed akbaruddin
ಮಸೂದ್‌ ಅಜರ್‌ಗೆ ತಕ್ಕ ಶಾಸ್ತಿ ಆಗುವವರೆಗೂ ಸುಮ್ಮನಿರಲ್ಲ: ಭಾರತ


ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಸುಮ್ಮನಿರುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಕಳೆದ ಜನವರಿ 2, 2016ರಲ್ಲಿ ಪಠಾಣ್‌ಕೋಟ್‌ ಮೇಲೆ ನಡೆದ ದಾಳಿಯ ಪ್ರಮುಖ ರೂವಾರಿ ಮಸೂದ್‌ ಅಜರ್‌ ಎಂದು ಭಾರತ ವಾದಿಸಿದೆ. ಅಜರ್‌ ಸಹೋದರ ರೌಫ್‌ ಹಾಗೂ ಇತರ ಐವರು ಪಠಾಣ್‌ಕೋಟ್‌ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದಾರೆ. ಭಾರತದ ಏಳು ಯೋಧರು ಹಾಗೂ ದಾಳಿ ನಡೆಸಿದ ಆರೂ ಉಗ್ರರು ಹತರಾಗಿದ್ದಾರೆ.

ಇದಲ್ಲದೇ ಮಸೂದ್‌ ಅಜರ್‌ ಹಲವಾರು ದಾಳಿಯ ಪ್ರಮುಖ ರೂವಾರಿಯಾಗಿದ್ದಾನೆ. ಈತನನ್ನು ಕಾನೂನು ಕಟಕಟೆಗೆ ತಂದು ನಿಲ್ಲಿಸುವವರೆಗೂ ಸುಮ್ಮನಿರುವುದಿಲ್ಲ ಎಂದು ಭಾರತ ತಿಳಿಸಿದೆ.

ಸದ್ಯ ಅಜರ್‌ ಮಸೂದ್‌ ವಿಷಯ ವಿಶ್ವಸಂಸ್ಥೆ ಸಮಿತಿಯ ಮುಂದಿದೆ. ಈ ಸಮಿತಿಯ ಮುಂದೆ ಬಹುತೇಕ ಎಲ್ಲ ಸಾಕ್ಷ್ಯಗಳು, ವರದಿಗಳನ್ನು ಸಲ್ಲಿಸಲಾಗಿದೆ. ಸಮಿತಿಯು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ಭರವಸೆ ಇದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್‌ ತಿಳಿಸಿದ್ದಾರೆ.

ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಭಾರತದ ಪ್ರಸ್ತಾವಕ್ಕೆ ಚೀನಾ ಅಡ್ಡಿಪಡಿಸಿತ್ತು. ಆಗ ಸಮಿತಿಯು ಈ ವಿಷಯಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.

ನವೆಂಬರ್‌ 2ರಂದು ಸಮಿತಿಯ ತಡೆಯಾಜ್ಞೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ಸೂಕ್ತ ನಿರ್ಧಾರ ಹೊರಬೀಳಲಿದೆ ಎಂದು ಭಾರತ ವಿಶ್ವಾಸ ವ್ಯಕ್ತಪಡಿಸಿದೆ.

Masood Azhar will be pursued until justice is met: Syed Akbaruddin

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ