ಆ್ಯಪ್ನಗರ

ಸಾಮೂಹಿಕ ಮತಾಂತರಕ್ಕೆ ತಡೆ ಅಗತ್ಯ: ರಾಜನಾಥ್ ಸಿಂಗ್‌

ಸಾಮೂಹಿಕ ಮತಪರಿವರ್ತನೆ ನಡೆಯುತ್ತಿದ್ದರೆ, ಹೆಚ್ಚಿನ ಸಂಖ್ಯೆಯ ಜನರು ತಮ್ಮ ಧರ್ಮವನ್ನು ಬದಲಿಸಲು ಪ್ರಾರಂಭಿಸಿದರೆ, ಆಗ ಅದು ಯಾವುದೇ ದೇಶವಿರಲಿ ಕಳವಳವನ್ನುಂಟು ಮಾಡುವ ವಿಷಯವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಹೇಳಿದರು.

Vijaya Karnataka 16 Jan 2019, 11:35 am
ಹೊಸದಿಲ್ಲಿ: ಸಾಮೂಹಿಕ ಮತಾಂತರ ಭಾರತಕ್ಕೆ ಕಳವಳದ ವಿಷಯವಾಗಿದೆ. ಅಲ್ಲದೆ ಈ ಕುರಿತು ಪರಿಶೀಲನೆ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ.
Vijaya Karnataka Web rajanath


ಕ್ರೈಸ್ತ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್‌, ''ನೀವು ಹಿಂದೂ ಆಗಿದ್ದರೆ ಹಿಂದೂ ಆಗಿಯೇ ಇರಿ. ಮುಸ್ಲಿಂ ಆಗಿದ್ದರೆ ಮುಸ್ಲಿಂ ಆಗಿಯೇ ಇರಿ. ಕ್ರಿಶ್ಚಿಯನ್‌ ಆಗಿದ್ದರೆ ಕ್ರಿಶ್ಚಿಯನ್‌ ಆಗಿಯೇ ಇರಿ. ನೀವು ಇಡೀ ಪ್ರಪಂಚವನ್ನೇ ಪರಿವರ್ತನೆ ಮಾಡಲು ಏಕೆ ಬಯಸುತ್ತೀರಿ?. ಯಾರಾದರೊಬ್ಬರು ಒಂದು ಧರ್ಮವನ್ನು ಸ್ವೀಕರಿಸಲು ಬಯಸಿದರೆ, ಅವರು ಅದನ್ನು ಮಾಡಬೇಕು. ಇದಕ್ಕೆ ಯಾವುದೇ ಆಕ್ಷೇಪಣೆ ಇರಬಾರದು. ಆದರೆ ಸಾಮೂಹಿಕ ಮತಪರಿವರ್ತನೆ ನಡೆಯುತ್ತಿದ್ದರೆ, ಹೆಚ್ಚಿನ ಸಂಖ್ಯೆಯ ಜನರು ತಮ್ಮ ಧರ್ಮವನ್ನು ಬದಲಿಸಲು ಪ್ರಾರಂಭಿಸಿದರೆ, ಅದು ಯಾವುದೇ ದೇಶಕ್ಕಾದರೂ ಕಳವಳದ ವಿಷಯವಾಗುತ್ತದೆ,' ಎಂದು ಹೇಳಿದರು.

'ಧರ್ಮದ ಆಧಾರದಲ್ಲಿ ಬಿಜೆಪಿ ಎಂದೂ ವಿಭಜನೆ ಮಾಡುವುದಿಲ್ಲ. ಭಯದ ವಾತಾವರಣ ಉಂಟುಮಾಡುವ ಮೂಲಕ ದೇಶವನ್ನು ನಡೆಸಲು ನಾವು ಬಯಸುವುದಿಲ್ಲ. ಜನರಲ್ಲಿ ಆತ್ಮವಿಶ್ವಾಸ ಉಂಟುಮಾಡುವ ಮೂಲಕ ದೇಶ ಮುನ್ನೆಡೆಸಲು ಬಯಸುತ್ತೇವೆ. ದೇಶದಲ್ಲಿ ಯಾರೂ ಪರಕೀಯ ಭಾವನೆ ಹೊಂದಬಾರದು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನವಾಗಿದೆ. ಎಲ್ಲರಿಗೂ ನಮ್ಮ ದೇಶಕ್ಕೆ ಮುಕ್ತ ಆಹ್ವಾನವಿದೆ' ಎಂದು ಹೇಳಿದರು.

'ಅಮೆರಿಕ, ಬ್ರಿಟನ್‌ನಲ್ಲಿ ಇರುವಂತೆ ಭಾರತದಲ್ಲಿ ಮತಪರಿವರ್ತನೆ ವಿರೋಧಿ ಕಾನೂನು ಜಾರಿಗೆ ಅನೇಕರು ಒತ್ತಾಯಿಸುತ್ತಾರೆ. ಹಾಗಾಗಿ ಇದು ಕಾಳಜಿಯ ವಿಷಯವಾಗಿದೆ' ಎಂದು ರಾಜ್‌ನಾಥ್‌ ಸಿಂಗ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ