ಆ್ಯಪ್ನಗರ

ಗಡಿಯಲ್ಲಿ ಮುಂದುವರೆದ ಪಾಕ್ ಸೇನೆಯ ಫಿರಂಗಿ ದಾಳಿ: ಭಾರತೀಯ ಸೇನೆಯಿಂದ ದಿಟ್ಟ ಉತ್ತರ!

ಗಡಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸುವುವದನ್ನೇ ಚಾಳಿ ಮಾಡಿಕೊಂಡಿರುವ ಪಾಕಿಸ್ತಾನ, ಇಂದೂ(ಗುರುವಾರ) ಕೂಡ ಭಾರೀ ಪ್ರಮಾಣದಲ್ಲಿ ಫಿರಂಗಿ ದಾಳಿ ನಡೆಸುತ್ತಿದೆ. ಭಾರತೀಯ ಸೇನೆ ಈ ದಾಳಿಗೆ ದಿಟ್ಟ ಉತ್ತರ ನೀಡುತ್ತಿದೆ.

Vijaya Karnataka Web 1 Oct 2020, 9:43 pm
ಶ್ರೀನಗರ: ಗಡಿಯಲ್ಲಿ ಕದನ ವಿರಾಮವನ್ನು ಉಲ್ಲಂಘಿಸುವುವದನ್ನೇ ಚಾಳಿ ಮಾಡಿಕೊಂಡಿರುವ ಪಾಕಿಸ್ತಾನ, ಇಂದೂ(ಗುರುವಾರ) ಕೂಡ ಭಾರೀ ಪ್ರಮಾಣದಲ್ಲಿ ಫಿರಂಗಿ ದಾಳಿ ನಡೆಸುತ್ತಿದೆ.
Vijaya Karnataka Web LOC
ಸಂಗ್ರಹ ಚಿತ್ರ


ಗಡಿಯ ಮಾನ್‌ಕೋಟೆ ಮತ್ತು ಕೃಷ್ಣಾ ಘಾಟಿಯಲ್ಲಿ ನಿನ್ನೆ(ಬುಧವಾರ)ಯಿಂದ ಅಪ್ರಚೋದಿತ ದಾಳಿ ನಡೆಸುತ್ತಿರುವ ಪಾಕಿಸ್ತಾನ, ಫಿರಂಗಿ ದಾಳಿಯನ್ನು ಇಂದೂ ಮುಂದುವರೆಸಿದೆ.

ಜಮ್ಮು-ಕಾಶ್ಮೀರ: ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ, ಗಡಿ ಕಾಯುತ್ತಿದ್ದ ಯೋಧ ಹುತಾತ್ಮ!

ಪಾಕಿಸ್ತಾನದ ಫಿರಂಗಿ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿರುವ ಭಾರತೀಯ ಸೇನೆ, ಪಾಕ್ ಸೇನೆಗೆ ದಿಟ್ಟತನದ ಉತ್ತರ ನೀಡುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.



ಪಾಕ್ ಸೇನೆಯ ಫಿರಂಗಿ ದಾಳಿಯಲ್ಲಿ ಮೂವರು ಭಾರತೀಯ ಸೇನೆಯ ಯೋಧರು ಹುತಾತ್ಮರಾಗಿದ್ದು, ನಾಲ್ವರು ಯೋಧರು ಗಂಭೀರಾವಗಿ ಗಾಯಗೊಂಡಿದ್ದಾರೆ.

ಪಾಕ್‌ನಿಂದ ನಿರಂತರ ಕದನ ವಿರಾಮ ಉಲ್ಲಂಘನೆ; ಮೂವರು ಭಾರತೀಯ ಯೋಧರು ಹುತಾತ್ಮ

ಕುಪ್ವಾರಾ ಜಿಲ್ಲೆಯ ನೌಗಾಮ್‌ ಸೆಕ್ಟರ್‌ನಲ್ಲಿ ಭಾರೀ ಪ್ರಮಾಣದ ಫಿರಂಗಿ ದಾಳಿ ನಡೆಸುತ್ತಿರುವ ಪಾಕ್ ಸೇನೆ, ಖೆರಾನ್ ಮತ್ತು ಮಚ್ಚಲ್ ಸೆಕ್ಟರ್‌ನಲ್ಲೂ ದಾಳಿ ಮುಂದುವರೆಸಿದೆ.

ಇನ್ನು ಪಾಕ್ ಸೇನೆಯ ದಾಳಿಯನ್ನು ಒಂದು ದಿನದ ಯುದ್ಧ ಎಂದೇ ವಿಶ್ಲೇಷಿಸಲಾಗಿದ್ದು, ಗಡಿಯ ಗ್ರಾಮಸ್ಥರು ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದಾರೆ.

ಪಾಕ್‌ ಸೈನ್ಯಕ್ಕೆ ಏನಾಗಿದೆ? ಗಡಿಯಲ್ಲಿ ಒಂದೇ ದಿನ 2 ಬಾರಿ ಶೆಲ್‍ ದಾಳಿ

ಕೇವಲ ಫಿರಂಗಿ ದಾಳಿ ಮಾತ್ರವಲ್ಲದೇ ಮಶಿನ್ ಗನ್ ಮತ್ತು ಇತರ ಆಧುನಿಕ ಶಸ್ತ್ರಾಸ್ತ್ರಗಳ ಬಳಕೆ ಗಡಿಯಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ