ಆ್ಯಪ್ನಗರ

ಉಗ್ರನಾದ ಎಂಬಿಎ ಪದವೀಧರ: ಹಿಜ್ಬುಲ್‌ ಮುಜಾಹಿದ್ದೀನ್‌ ನಿಷೇಧಿಸಲು ಸಂಬಂಧಿ ಮನವಿ

ದೋಡಾ ಜಿಲ್ಲೆಯ ಎಂಬಿಎ ಪದವೀಧರನೊಬ್ಬ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಗೆ ಸೇರಿಕೊಂಡಿದ್ದಾನೆಂದು ಸಂಬಂಧಿಯೊಬ್ಬರು ಹೇಳಿದ್ದು, ಆ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

TIMESOFINDIA.COM 5 Sep 2018, 12:50 pm
[This story originally published in times of India on sept 5, 2018]
Vijaya Karnataka Web 1


ಜಮ್ಮು:
ಇಲ್ಲಿನ ದೋಡಾ ಜಿಲ್ಲೆಯ ಎಂಬಿಎ ಪದವೀಧರನೊಬ್ಬ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಗೆ ಸೇರಿಕೊಂಡಿದ್ದಾನೆಂದು ಸಂಬಂಧಿಯೊಬ್ಬರು ಹೇಳಿದ್ದು, ಆ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಹರುನ್‌ ಅಬ್ಬಾಸ್‌ ವನಿ ಎಂಬ ಈ ಯುವಕ ರೈಫಲ್‌ ದಾಳಿ ನಡೆಸುತ್ತಿರುವ ಪೋಟೊ ವೈರಲ್‌ ಆಗಿದೆ. ಈತ ಶ್ರೀ ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಗಳಿಸಿದ್ದ. ಜಮ್ಮುವಿನ ನಗರವೊಂದರಲ್ಲಿರುವ ಫಾರ್ಮಾಸ್ಯುಟಿಕಲ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ತಂದೆ ಎಂಜಿನಿಯರ್‌, ಸೋದರರು ಎಂಎ ಪದವೀಧರರು. ಉತ್ತಮ ಕುಟುಂಬದಿಂದ ಬಂದವನು. ಉಗ್ರ ಸಂಘಟನೆಗೆ ಸೇರಿದ್ದಾನೆ ಎಂಬುದು ಆಶ್ಚರ್ಯ ಹುಟ್ಟಿಸಿದೆ ಎಂದು ಸ್ಥಳೀಯ ಡಿಐಜಿ ರಫೀಕ್‌ ಉಲ್‌ ಹಸನ್‌ ಖಾದ್ರಿ ಹೇಳಿದ್ದಾಗಿ ಮಾಧ್ಯಮ ವರದಿ ತಿಳಿಸಿದೆ.

ಕಾಶ್ಮೀರದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಉಗ್ರ ಸಂಘಟನೆಗೆ ಸೇರುತ್ತಿರುವುದು ಭದ್ರತೆ ವಿಚಾರದಲ್ಲಿ ಆತಂಕ ಹುಟ್ಟಿಸಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪ್ರತ್ಯೇಕತಾವಾದಿ ನಾಯಕ , ತೆಹ್ರಿಕ್‌ ಇ ಹುರಿಯತ್‌ನ ಮುಖ್ಯಸ್ಥನ ಮಗ ಜುನೈದ್‌ ಅಶ್ರಫ್‌ ಖಾನ್‌ ಮಾರ್ಚ್‌ನಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆ ಸೇರಿದ್ದಾನೆ. ಆತ ಕಾಶ್ಮೀರ ಯುನಿವರ್ಸಿಟಿಯಿಂದ ಎಂಬಿಎ ಪದವಿ ಗಳಿಸಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ