ಆ್ಯಪ್ನಗರ

ಕುಮಾರಸ್ವಾಮಿ ಆಯ್ತು, ಮಾಧ್ಯಮಗಳು ಈಗ ನನ್ನ ಹಿಂದೆ ಬಿದ್ದಿವೆ: ದೇವೇಗೌಡ ಕಿಡಿ

''ಮಾಧ್ಯಮಗಳ ಮೇಲೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಿಡಿ ಕಾರಿದ್ದು, ಕುಮಾರಸ್ವಾಮಿ ಆಯ್ತು, ಈಗ ನನ್ನ ಹಿಂದೆ ಬಿದ್ದಿದ್ದಾರೆ'' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Vijaya Karnataka 31 Jul 2018, 7:47 am
ಹೊಸದಿಲ್ಲಿ: ''ಮಾಧ್ಯಮಗಳ ಮೇಲೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಿಡಿ ಕಾರಿದ್ದು, ಕುಮಾರಸ್ವಾಮಿ ಆಯ್ತು, ಈಗ ನನ್ನ ಹಿಂದೆ ಬಿದ್ದಿದ್ದಾರೆ'' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web DEVEGOWDA


ಸೋಮವಾರ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಅವರು,''ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕೋ ಬೇಡವೋ, ಸ್ಪರ್ಧೆ ಮಾಡುವುದಾದರೆ ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ನಾನು ಇನ್ನೂ ಯೋಚನೆ ಮಾಡಿಯೇ ಇಲ್ಲವೆಂದ ಮೇಲೆ ತೀರ್ಮಾನದ ಪ್ರಶ್ನೆ ಎಲ್ಲಿಂದ ಬರುತ್ತದೆ,'' ಎಂದು ಕೇಳಿದರು.

''ನಾನು ಹಾಸನದಿಂದ, ಮೈಸೂರಿನಿಂದ ಪ್ರಜ್ವಲ್‌ ರೇವಣ್ಣ ಸ್ಪರ್ಧೆ ಮಾಡುತ್ತಾರೆ ಎಂದು ಊಹಾಪೋಹದ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಹಾಗೇನಾದರೂ ಇದ್ದರೆ ನಾನೇ ನಿಮ್ಮೆದುರು ಹೇಳುತ್ತೇನೆ,'' ಎಂದು ಹೇಳಿದರು.

ಪ್ರತ್ಯೇಕ ರಾಜ್ಯದ ಬೇಡಿಕೆ ಪ್ರಶ್ನೆಗೆ,''ಇದೂ ಮಾಧ್ಯಮಗಳ ಸ್ಪಷ್ಟಿ. ನನ್ನ ಸ್ಪರ್ಧೆ ಮತ್ತು ಉತ್ತರ ಕರ್ನಾಟಕದ ಬಗ್ಗೆ ಮಾಧ್ಯಮಗಳೇ ವದಂತಿ ಹರಡುತ್ತಿವೆ,'' ಎಂದು ಅಸಮಾಧಾನ ಹೊರಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ