ಆ್ಯಪ್ನಗರ

ಕಳೆದ 27 ವರ್ಷದಲ್ಲಿ ಈತ ಉಳಿಸಿದ್ದು 60 ಜೀವ!

ಕಳೆದ 27 ವರ್ಷದಲ್ಲಿ 60ಕ್ಕೂ ಅಧಿಕ ಜನರನ್ನು ರಕ್ಷಿಸಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಮನೋಜ್ ಸಿಂಗ್, ಶಾಲೆಯಲ್ಲಿ ಮಕ್ಕಳಿಗೂ ನೆರವಿನ ಪಾಠ ಹೇಳಿಕೊಡುತ್ತಾರೆ.

Navbharat Times 19 Nov 2018, 9:18 pm
ಲಖ್ನೋ: ಆತ್ಮೀಯ ಗೆಳೆಯ ಅಪಘಾತದಲ್ಲಿ ಸಿಲುಕಿದ್ದಾಗ ಯಾರೂ ರಕ್ಷಣೆಗೆ ಬಾರದೇ ಆತ ಮೃತಪಟ್ಟಿದ್ದರಿಂದ ನೊಂದುಕೊಂಡ ಆತ ಅಂದೇ ಅಪಘಾತದಲ್ಲಿ ಸಿಲುಕಿರುವವರು ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ದೃಢಸಂಕಲ್ಪ ಮಾಡಿದ್ದ. ಅಂದಿನಿಂದ ಇಂದಿನವರೆಗೆ 27 ವರ್ಷಗಳಲ್ಲಿ ಆತ ರಕ್ಷಿಸಿದ್ದು 60ಕ್ಕೂ ಅಧಿಕ ಮಂದಿಯನ್ನು!
Vijaya Karnataka Web Manoj


ಆತನ ಹೆಸರು ಮನೋಜ್ ಸಿಂಗ್. 1991ರಲ್ಲಿ ಉಂಟಾಗಿದ್ದ ರಸ್ತೆ ಅಪಘಾತವೊಂದರಲ್ಲಿ ಗೆಳೆಯನ್ನು ಕಳೆದುಕೊಂಡಿದ್ದ. ಗೆಳೆಯ ಅಪಘಾತಕ್ಕೆ ಸಿಲುಕಿ ರಸ್ತೆಯಲ್ಲೇ ಒದ್ದಾಡುತ್ತಿದ್ದರೂ, ಯಾರೊಬ್ಬರೂ ಸಹಾಯಕ್ಕೆ ಬಂದಿರಲಿಲ್ಲ. ಅಪಾರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದ. ಅಂದು ಸೂಕ್ತ ಸಮಯಕ್ಕೆ ಸಹಾಯ ದೊರತಿದ್ದರೆ ಆತ ಬದುಕುತ್ತಿದ್ದ.

ಅಂದಿನ ಅಪಘಾತದ ಚಿತ್ರಣ ಮನೋಜ್‌ ಸಿಂಗ್‌ನನ್ನು ತುಂಬಾ ಕಾಡಿತು. ಅಂದಿನಿಂದ ಮನೋಜ್ ಸಿಂಗ್ ತನ್ನ ಪ್ರದೇಶದಲ್ಲಿ ಸುತ್ತಮುತ್ತ ಎಲ್ಲಿಯೇ ಅವಘಡ, ಅಪಘಾತ ಉಂಟಾದರೆ ಮನೋಜ್ ಅಲ್ಲಿಗೆ ಧಾವಿಸಿ ನೆರವಾಗುತ್ತಾರೆ.

ಹೀಗೆ ಕಳೆದ 27 ವರ್ಷದಲ್ಲಿ 60ಕ್ಕೂ ಅಧಿಕ ಜನರನ್ನು ರಕ್ಷಿಸಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಮನೋಜ್ ಸಿಂಗ್, ಶಾಲೆಯಲ್ಲಿ ಮಕ್ಕಳಿಗೂ ನೆರವಿನ ಪಾಠ ಹೇಳಿಕೊಡುತ್ತಾರೆ.

ಮೂಲ ವರದಿ: ನವಭಾರತ್ ಟೈಮ್ಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ