ತೆಲಂಗಾಣದಲ್ಲಿದ್ದಾನೆ ಟ್ರಂಪ್ ಭಕ್ತ; ನಿತ್ಯ ನಡೆಯತ್ತೆ ಮೂರ್ತಿ ಪೂಜೆ
ತೆಲಂಗಾಣದ ಜಂಗಾಮ ನಿವಾಸಿಯಾಗಿರುವ ಬುಸ್ಸಾ ಕೃಷ್ಣ (31)ಗೆ ಮೊದಲಿನಿಂದಲೂ ಟ್ರಂಪ್ ಎಂದರೆ ಹುಚ್ಚು ಅಭಿಮಾನ. ಟ್ರಂಪ್ 73ನೇ ಜನ್ಮದಿನವಾದ ಜೂನ್ 14ರಂದು ಅವರ 6 ಅಡಿ ಎತ್ತರ ಪ್ರತಿಮೆ ಸ್ಥಾಪಿಸಿರುವ ಆತ ಅದಕ್ಕೆ ಪ್ರತಿನಿತ್ಯ ಹಾಲಿನಿಂದ ಅಭಿಷೇಕ ಮಾಡುತ್ತಾನೆ.
Times Now 19 Jun 2019, 10:41 am
ಹೈದರಾಬಾದ್: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಅವರದೇ ದೇಶದಲ್ಲಿ ವ್ಯಾಪಕ ವಿರೋಧಕ್ಕೊಳಗಾಗುತ್ತ ಇರಬಹುದು. ಆದರೆ ಭಾರತದಲ್ಲಿ ಅವರಿಗೊಬ್ಬ ಭಕ್ತನಿದ್ದಾನೆ. ಆತ ಟ್ರಂಪ್ ಪ್ರತಿಮೆ ಸ್ಥಾಪಿಸಿ ದಿನನಿತ್ಯ ಪೂಜೆ ಮಾಡುತ್ತಾನೆ.
ತೆಲಂಗಾಣದ ಜಂಗಾಮ ನಿವಾಸಿಯಾಗಿರುವ ಬುಸ್ಸಾ ಕೃಷ್ಣ (31)ಗೆ ಮೊದಲಿನಿಂದಲೂ ಟ್ರಂಪ್ ಎಂದರೆ ಹುಚ್ಚು ಅಭಿಮಾನ. ಟ್ರಂಪ್ 73ನೇ ಜನ್ಮದಿನವಾದ ಜೂನ್ 14ರಂದು ಅವರ 6 ಅಡಿ ಎತ್ತರ ಪ್ರತಿಮೆ ಸ್ಥಾಪಿಸಿರುವ ಆತ ಅದಕ್ಕೆ ಪ್ರತಿನಿತ್ಯ ಹಾಲಿನಿಂದ ಅಭಿಷೇಕ ಮಾಡುತ್ತಾನೆ.
ರೈತನಾಗಿರುವ ಕೃಷ್ಣ ಟ್ರಂಪ್ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿ ಆರತಿ ಎತ್ತುತ್ತಾನೆ. ಬಳಿಕ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೂಜೆ ಸಲ್ಲಿಸಿದ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ.
ಅವರಿಗೆ ಟ್ರಂಪ್ ಬಗ್ಗೆ ಹೆಚ್ಚಿನದೇನೂ ಗೊತ್ತಿಲ್ಲ. ಜಗತ್ತಿನ ಶಕ್ತಿಶಾಲಿ ನಾಯಕರಲ್ಲಿ ಅವರು ಒಬ್ಬರು. ಅವರ ದಿಟ್ಟತನ ನನಗಿಷ್ಟ ಎನ್ನುತ್ತಾರೆ ಕೃಷ್ಣ.
ಪೂಜೆ ಏಕೆ?
2017ಲ್ಲಿ ತೆಲಂಗಾಂಣದ ಎಂಜಿನಿಯರ್ ಶ್ರೀನಿವಾಸ ಕೋಚಿಭೊಟ್ಲ ಅಮೇರಿಕದಲ್ಲಿ ಹತ್ಯೆಯಾಗಿದ್ದರು. ಆಗ ಟ್ರಂಪ್ ಈ ಕುರಿತು ಪ್ರತಿಕ್ರಿಯಿಸದೇ ಮೌನಕ್ಕೆ ಶರಣಾಗಿದ್ದರು. ಅದರ ಬಳಿಕ ಕೃಷ್ಣ ಟ್ರಂಪ್ ಪೂಜೆ ಆರಂಭಿಸಿದ್ದಾರೆ.
ಈ ಹತ್ಯೆ ನನಗೆ ನೋವು ತಂದಿದೆ. ಅಮೆರಿಕಾದ ಜನರ ಮೇಲೆ ಭಾರತೀಯರಿಗೆ ಯಾವ ರೀತಿ ಪ್ರೀತಿ, ವಿಶ್ವಾಸ ಇದೆ ಎಂದು ಟ್ರಂಪ್ ಮತ್ತು ಅವರ ದೇಶದವರಿಗೆ ತಿಳಿಯಬೇಕು. ನನ್ನ ಪ್ರಾರ್ಥನೆ ಒಂದು ದಿನ ಅವರಿಗೆ ತಲುಪುತ್ತದೆ. ಆಧ್ಯಾತ್ಮದಿಂದ ಎಲ್ಲವನ್ನು ಗೆಲ್ಲಬಹುದು ಎಂಬ ನಂಬಿಕೆಯಿಂದ ಹೀಗೆ ಮಾಡುತ್ತಿದ್ದೇನೆ. ನನ್ನನ್ನು ಜನ ಹುಚ್ಚ ಎಂದರೂ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಕೃಷ್ಣ.
ಅನ್ಯ ದೇಶದ ಅಧ್ಯಕ್ಷನನ್ನು ಭಗವಂತನ ರೀತಿಯಲ್ಲಿ ಪೂಜಿಸುತ್ತಿರುವುದು ಭಾರತದಲ್ಲಿ ಇದೇ ಮೊದಲಿರಬೇಕು.
ತೆಲಂಗಾಣದ ಜಂಗಾಮ ನಿವಾಸಿಯಾಗಿರುವ ಬುಸ್ಸಾ ಕೃಷ್ಣ (31)ಗೆ ಮೊದಲಿನಿಂದಲೂ ಟ್ರಂಪ್ ಎಂದರೆ ಹುಚ್ಚು ಅಭಿಮಾನ. ಟ್ರಂಪ್ 73ನೇ ಜನ್ಮದಿನವಾದ ಜೂನ್ 14ರಂದು ಅವರ 6 ಅಡಿ ಎತ್ತರ ಪ್ರತಿಮೆ ಸ್ಥಾಪಿಸಿರುವ ಆತ ಅದಕ್ಕೆ ಪ್ರತಿನಿತ್ಯ ಹಾಲಿನಿಂದ ಅಭಿಷೇಕ ಮಾಡುತ್ತಾನೆ.
ರೈತನಾಗಿರುವ ಕೃಷ್ಣ ಟ್ರಂಪ್ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿ ಆರತಿ ಎತ್ತುತ್ತಾನೆ. ಬಳಿಕ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೂಜೆ ಸಲ್ಲಿಸಿದ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ.
ಅವರಿಗೆ ಟ್ರಂಪ್ ಬಗ್ಗೆ ಹೆಚ್ಚಿನದೇನೂ ಗೊತ್ತಿಲ್ಲ. ಜಗತ್ತಿನ ಶಕ್ತಿಶಾಲಿ ನಾಯಕರಲ್ಲಿ ಅವರು ಒಬ್ಬರು. ಅವರ ದಿಟ್ಟತನ ನನಗಿಷ್ಟ ಎನ್ನುತ್ತಾರೆ ಕೃಷ್ಣ.
ಪೂಜೆ ಏಕೆ?
2017ಲ್ಲಿ ತೆಲಂಗಾಂಣದ ಎಂಜಿನಿಯರ್ ಶ್ರೀನಿವಾಸ ಕೋಚಿಭೊಟ್ಲ ಅಮೇರಿಕದಲ್ಲಿ ಹತ್ಯೆಯಾಗಿದ್ದರು. ಆಗ ಟ್ರಂಪ್ ಈ ಕುರಿತು ಪ್ರತಿಕ್ರಿಯಿಸದೇ ಮೌನಕ್ಕೆ ಶರಣಾಗಿದ್ದರು. ಅದರ ಬಳಿಕ ಕೃಷ್ಣ ಟ್ರಂಪ್ ಪೂಜೆ ಆರಂಭಿಸಿದ್ದಾರೆ.
ಈ ಹತ್ಯೆ ನನಗೆ ನೋವು ತಂದಿದೆ. ಅಮೆರಿಕಾದ ಜನರ ಮೇಲೆ ಭಾರತೀಯರಿಗೆ ಯಾವ ರೀತಿ ಪ್ರೀತಿ, ವಿಶ್ವಾಸ ಇದೆ ಎಂದು ಟ್ರಂಪ್ ಮತ್ತು ಅವರ ದೇಶದವರಿಗೆ ತಿಳಿಯಬೇಕು. ನನ್ನ ಪ್ರಾರ್ಥನೆ ಒಂದು ದಿನ ಅವರಿಗೆ ತಲುಪುತ್ತದೆ. ಆಧ್ಯಾತ್ಮದಿಂದ ಎಲ್ಲವನ್ನು ಗೆಲ್ಲಬಹುದು ಎಂಬ ನಂಬಿಕೆಯಿಂದ ಹೀಗೆ ಮಾಡುತ್ತಿದ್ದೇನೆ. ನನ್ನನ್ನು ಜನ ಹುಚ್ಚ ಎಂದರೂ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಕೃಷ್ಣ.
ಅನ್ಯ ದೇಶದ ಅಧ್ಯಕ್ಷನನ್ನು ಭಗವಂತನ ರೀತಿಯಲ್ಲಿ ಪೂಜಿಸುತ್ತಿರುವುದು ಭಾರತದಲ್ಲಿ ಇದೇ ಮೊದಲಿರಬೇಕು.