ಆ್ಯಪ್ನಗರ

ತಮ್ಮ ಹೆಸರಲ್ಲಿದ್ದ 3.2 ಕೋಟಿ ವಿಮೆ ಪಡೆಯಲು ಮತ್ತಿಬ್ಬರನ್ನು ಜೀವಂತ ಸುಟ್ಟರು!

ಮೊದಲೇ ಯೋಜನೆ ರೂಪಿಸಿದ ಸ್ನೇಹಿತರು, ಕಾರಿನಲ್ಲಿ ಇಬ್ಬರನ್ನು ಜೀವಂತ ದಹಿಸಿದ್ದಾರೆ. ಆ ಮೂಲಕ ಮೃತದೇಹಗಳ ಗುರುತು ಪತ್ತೆಯಾಗದಂತೆ ಮಾಡಿ ನಕಲಿ ಮರಣ ದಾಖಲೆ ಸೃಷ್ಟಿಸಿ ತಮ್ಮ ಹೆಸರಲ್ಲಿದ್ದ ವಿಮಾ ಹಣ ಪಡೆಯುವುದು ಅವರ ಯೋಜನೆಯಾಗಿತ್ತು.

TIMESOFINDIA.COM 12 Feb 2019, 12:58 pm
ಆಗ್ರಾ: ತಮ್ಮ ಹೆಸರಲ್ಲಿದ್ದ 3.2 ಕೋಟಿ ಜೀವ ವಿಮೆ ಪಡೆಯಲು ಇಬ್ಬರು ಗೆಳೆಯರು ಸೇರಿಕೊಂಡು ಮತ್ತಿಬ್ಬರನ್ನು ಸಜೀವವಾಗಿ ದಹಿಸಿದ ಬೆಚ್ಚಿಬೀಳಿಸುವ ಘಟನೆ ತಾಜ್ ನಗರಿ ಆಗ್ರಾದಲ್ಲಿ ನಡೆದಿದೆ.
Vijaya Karnataka Web fire


ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಲಾಲಾರಾಮ್ (35) ಮತ್ತು ರೋಹತಾಶ್ (34) ಎಂದು ಗುರುತಿಸಲಾಗಿದೆ.

ಇಬ್ಬರು ಆರೋಪಿಗಳು ತಾವಿಬ್ಬರು ಸತ್ತಿದ್ದೇವೆ ಎಂದು ಬಿಂಬಿಸಿ ವಿಮಾ ಕಂಪನಿಗೆ ಪಂಗನಾಮ ಹಾಕಿಸಲು ತಂತ್ರ ರೂಪಿಸಿದ್ದರು. ಇದಕ್ಕಾಗಿ ಅವರು ಮಾಡಿದ್ದು ಮಾತ್ರ ಘನಘೋರ ಕೃತ್ಯ.

ಮೊದಲೇ ಯೋಜನೆ ರೂಪಿಸಿದ ಸ್ನೇಹಿತರು, ಕಾರಿನಲ್ಲಿ ಇಬ್ಬರನ್ನು ಜೀವಂತ ದಹಿಸಿದ್ದಾರೆ. ಆ ಮೂಲಕ ಮೃತದೇಹಗಳ ಗುರುತು ಪತ್ತೆಯಾಗದಂತೆ ಮಾಡಿ ನಕಲಿ ಮರಣ ದಾಖಲೆ ಸೃಷ್ಟಿಸಿ ತಮ್ಮ ಹೆಸರಲ್ಲಿದ್ದ ವಿಮಾ ಹಣ ಪಡೆಯುವುದು ಅವರ ಯೋಜನೆಯಾಗಿತ್ತು. ಆದರೆ ಪೊಲೀಸ್ ಕಾರ್ಯಾಚರಣೆಯಲ್ಲಿ ಅವರಿಬ್ಬರು ಸಿಕ್ಕಿ ಹಾಕಿಕೊಂಡಿದ್ದು ಮತ್ತೀಗ ಕಂಬಿ ಎಣಿಸುತ್ತಿದ್ದಾರೆ.

ಮೃತರನ್ನು ಕುನ್ವರ್‌ಪಾಲ್ (40) ಮತ್ತು ಲೇಖನ್ (38) ಎಂದು ಗುರುತಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ