ಆ್ಯಪ್ನಗರ

ನಮ್ಮ ಮಾತು ಕೇಳದಿದ್ರೆ ಜೀವನ ನರಕ, ಅಸ್ಥಾನ ಬೆದರಿಕೆ: ಕೋರ್ಟ್‌ಗೆ ಮೈಕೆಲ್ ಹೇಳಿಕೆ

ಗಡಿಪಾರಿಗೂ ಮುನ್ನ ಆಸ್ಥಾನಾ ನನ್ನನ್ನು ದುಬೈನಲ್ಲಿ ಭೇಟಿಯಾಗಿದ್ದರು. ತನಿಖೆ ಸಂಬಂಧ ಈಗ ಏನು ನಡೆಯುತ್ತಿದೆಯೂ ಅದಕ್ಕೆ ತಕ್ಕಂತೆ ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಜೈಲಿನಲ್ಲಿ ನಿನ್ನ ಜೀವನ ನರಕವಾಗಲಿದೆ ಎಂದು ಬೆದರಿಸಿದ್ದರು,'' ಎಂದು ಮೈಕೆಲ್‌ ಆರೋಪಿಸಿದ್ದಾನೆ.

TIMESOFINDIA.COM 12 Mar 2019, 9:33 pm
ಹೊಸದಿಲ್ಲಿ: ಕಾಪ್ಟರ್‌ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ನಡೆಸುತ್ತಿದ್ದ ಸಿಬಿಐ ಹೇಳಿದಂತೆ ಕೇಳದಿದ್ದರೆ ಜೈಲಿನೊಳಗೆ ಜೀವನ ನರಕ ಮಾಡುವುದಾಗಿ ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್‌ ಅಸ್ಥಾನಾ ತಮಗೆ ಬೆದರಿಕೆ ಹಾಕಿದ್ದರು ಎಂದು ಹಗರಣದ ಮಧ್ಯವರ್ತಿ ಮೈಕೆಲ್‌ ಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದಾರೆ.
Vijaya Karnataka Web michcel


'ಗಡಿಪಾರಿಗೂ ಮುನ್ನ ಆಸ್ಥಾನಾ ನನ್ನನ್ನು ದುಬೈನಲ್ಲಿ ಭೇಟಿಯಾಗಿದ್ದರು. ತನಿಖೆ ಸಂಬಂಧ ಈಗ ಏನು ನಡೆಯುತ್ತಿದೆಯೂ ಅದಕ್ಕೆ ತಕ್ಕಂತೆ ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಜೈಲಿನಲ್ಲಿ ನಿನ್ನ ಜೀವನ ನರಕವಾಗಲಿದೆ ಎಂದು ಬೆದರಿಸಿದ್ದರು,'' ಎಂದು ಮೈಕೆಲ್‌ ಆರೋಪಿಸಿದ್ದಾನೆ.

'ನನ್ನ ಮುಂದಿನ ಬಾಗಿಲು ಚೋಟಾ ರಾಜನ್. ಅನೇಕ ಜನರನ್ನು ಕೊಂದಿರುವ ರಾಜನ್ ಜತೆಗೆ ನಾನು ಯಾವ ಅಪರಾಧ ಮಾಡುತ್ತೇನೋ ಗೊತ್ತಿಲ್ಲ ಎಂದು ಹೇಳಿರುವುದಾಗಿ ಮೈಕೆಲ್ ಹೇಳಿದ್ದಾನೆ.

''ಜೈಲಿನಲ್ಲಿ ಮೈಕೆಲ್‌ ವಿಚಾರಣೆಗೆ ಕೋರ್ಟ್‌ ಅಸ್ತು

ಯುಪಿಎ ಸರಕಾರದ ಅವಧಿಯಲ್ಲಿ ನಡೆದ ಬಹುಕೋಟಿ ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಹಗರಣ ಸಂಬಂಧ ಜೈಲು ಪಾಲಾಗಿರುವ ಆರೋಪಿ ಕ್ರಿಶ್ಚಿಯನ್‌ ಮೈಕೆಲ್‌ನನ್ನು ತಿಹಾರ್‌ ಜೈಲಿನಲ್ಲಿಯೇ ವಿಚಾರಣೆ ನಡೆಸಲು ದಿಲ್ಲಿ ನ್ಯಾಯಾಲಯ, ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿದೆ.

ಮೈಕೆಲ್‌ ಹೆಚ್ಚಿನ ವಿಚಾರಣೆಗೆ ಅನುಮತಿ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಅರವಿಂದ್‌ ಕುಮಾರ್‌ ಅವರು, ಆರೋಪಿಯನ್ನು ಎರಡು ದಿನ ವಿಚಾರಣೆಗೆ ಒಳಪಡಿಸಲು ಅನಮತಿ ನೀಡಿದೆ.

12 ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಭಾರತೀಯ ವಾಯುಪಡೆ ಮಾಜಿ ಮುಖ್ಯಸ್ಥ ಎಸ್‌ಪಿ ತ್ಯಾಗಿ ಹಾಗೂ ಕ್ರಿಶ್ಚಿಯನ್‌ ಮೈಕೆಲ್‌ ಸೇರಿ 9 ಆರೋಪಿಗಳ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಿದ್ದು, ಪ್ರತ್ಯೇಕ ತನಿಖೆ ನಡೆಸುತ್ತಿವೆ. ಮೈಕೆಲ್‌ನನ್ನು ಕಳೆದ ಡಿಸೆಂಬರ್‌ 22ರಂದು ದುಬೈನಿಂದ ಭಾರತಕ್ಕೆ ಕರೆತರಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ