ಆ್ಯಪ್ನಗರ

ಕೊನೆಗೂ ಪತ್ತೆಯಾದ ಲಾಲು ಪುತ್ರ: ವಿಚ್ಛೇದನ ವಿವಾದಕ್ಕೆ ಬೇಸತ್ತು 'ಶಾಂತಿ' ಅರಸಿ ವಾರಣಾಸಿಗೆ

ತೇಜ್ ಪ್ರತಾಪ್ ಕಾಣೆಯಾಗಿದ್ದಾರೆ ಎಂದು ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಶನಿವಾರ ತಂದೆಯನ್ನು ಭೇಟಿಯಾಗಿ ಸೋಮವಾರ ಮನೆಗೆ ಹೋಗುತ್ತೇನೆಂದು ರಾಂಚಿ ಬಿಟ್ಟಿದ್ದ ಅವರು, ಅರ್ಧ ದಾರಿಯಲ್ಲೇ ತಮ್ಮ ಪಥ ಬದಲಿಸಿದ್ದರು ಎಂದು ಹೇಳಲಾಗುತ್ತಿತ್ತು. ಬಳಿಕ ಅವರೆಲ್ಲಿ ಹೋದರು ಎಂಬ ಬಗ್ಗೆ ಸುಳಿವಿರಲಿಲ್ಲ.

TIMESOFINDIA.COM 8 Nov 2018, 10:56 am
ಪಟನಾ: ವಿಚ್ಛೇದನಕ್ಕೆ ಸಂಬಂಧಿಸಿದಂತೆ ತಂದೆಯ ಜತೆ ಚರ್ಚೆ ನಡೆಸಿದ ಬಳಿಕ ನಾಪತ್ತೆಯಾಗಿದ್ದ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ವಾರಣಾಸಿಯಲ್ಲಿ ಪತ್ತೆಯಾಗಿದ್ದಾರೆ. ಸಾಂಸಾರಿಕ ಜಂಜಾಟಕ್ಕೆ ಬೇಸತ್ತು ಶಾಂತಿ ಅರಸಿಕೊಂಡು ಧಾರ್ಮಿಕ ಕ್ಷೇತ್ರ ವಾರಣಾಸಿಗೆ ಹೋಗಿದ್ದಾರೆಂದು ತಿಳಿದು ಬಂದಿದೆ.
Vijaya Karnataka Web Tej Pratap


ತೇಜ್ ಪ್ರತಾಪ್ ಕಾಣೆಯಾಗಿದ್ದಾರೆ ಎಂದು ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಶನಿವಾರ ತಂದೆಯನ್ನು ಭೇಟಿಯಾಗಿ ಸೋಮವಾರ ಮನೆಗೆ ಹೋಗುತ್ತೇನೆಂದು ರಾಂಚಿ ಬಿಟ್ಟಿದ್ದ ಅವರು, ಅರ್ಧ ದಾರಿಯಲ್ಲೇ ತಮ್ಮ ಪಥ ಬದಲಿಸಿದ್ದರು ಎಂದು ಹೇಳಲಾಗುತ್ತಿತ್ತು. ಬಳಿಕ ಅವರೆಲ್ಲಿ ಹೋದರು ಎಂಬ ಬಗ್ಗೆ ಸುಳಿವಿರಲಿಲ್ಲ.

ರಾಂಚಿಯ ರಾಜೇಂದ್ರ ವೈದ್ಯಕೀಯ ಸಂಸ್ಥೆಯಲ್ಲಿ ತನ್ನ ತಂದೆಯನ್ನು ಭೇಟಿಯಾಗಿ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ ತೇಜ್ ಪ್ರತಾಪ್ ಬಳಿಕ ಬೋಧ ಗಯಾ ವಸತಿ ನಿಲಯಕ್ಕೆ ಹೋಗಿ ಶನಿವಾರ ಮತ್ತು ಭಾನುವಾರ ರಾತ್ರಿಯನ್ನು ಅಲ್ಲೇ ಕಳೆದಿದ್ದರು. ಸೋಮವಾರ ಮಧ್ಯಾಹ್ನ ಪಟಾನಾಕ್ಕೆ ತೆರಳುವುದಾಗಿ ಹೇಳಿ ಹೊರಟಿದ್ದರು. ''ಇತರ ನಾಯಕರೊಂದಿಗೆ ನಾನು ಭಾನುವಾರ ರಾತ್ರಿ ತೇಜ್ ಪ್ರತಾಪ್ ಅವರೊಂದಿಗೆ ರಾತ್ರಿ ಊಟ ಮಾಡಿದೆ. ಅವರು ಅತಿಯಾಗಿ ದಣಿದಂತೆ ಕಾಣುತ್ತಿದ್ದರು. ಸೋಮವಾರ ಮಧ್ಯಾಹ್ನ ಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ರಾಯಲ್ ರೆಸಿಡೆನ್ಸಿ ಹೋಟೆಲ್‌ನಿಂದ ಹೊರಟ ಬಳಿಕ ಅವರೆಲ್ಲಿಗೆ ಹೋದರು ಎಂದು ನನಗೆ ತಿಳಿದಿಲ್ಲ ಎಂದು ಸ್ಥಳೀಯ ಶಾಸಕ ಕುಮಾರ್ ಸರ್ವಜಿತ್ ಹೇಳಿದ್ದರು.

ದೀಪಾವಳಿ ಹಬ್ಬವನ್ನಾಚರಿಸಲು ಮಗನಿಗಾಗಿ ಕಾಯುತ್ತ ಬೇಸತ್ತಿದ್ದ ರಾಬ್ರಿದೇವಿ, ಆತನಲ್ಲಿದ್ದಾನೆ ಎಂದು ತಿಳಿಯದೇ ವಿಚಲಿತಳಾಗಿದ್ದರು. ಮತ್ತೀಗ ಅವರು ವಾರಣಾಸಿಯಲ್ಲಿದ್ದು, ತಮ್ಮ ಆಪ್ತರಾದ ಕೆಲವರ ಜತೆ ಸಂಪರ್ಕವನ್ನಿಟ್ಟುಕೊಂಡಿದ್ದಾರೆ ಎಂದು ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.

ತಮ್ಮ ವಿಚ್ಛೇದನದ ನಿರ್ಧಾರವನ್ನು ಬೆಂಬಲಿಸದಿದ್ದಕ್ಕೆ ತೇಜ್ ಪ್ರತಾಪ್ ತಂದೆ- ತಾಯಿ ಸೇರಿದಂತೆ ಕುಟುಂಬದವರ ಮೇಲೆ ಕೋಪಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಧಾರ್ಮಿಕ ವ್ಯಕ್ತಿಯಾಗಿರುವ ತೇಜ್ ಪ್ರತಾಪ್, ನಾನು ಮನ ಶಾಂತಿಗಾಗಿ ವಾರಣಾಸಿಗೆ ತೆರಳಿದ್ದಾರೆ, ಸದ್ಯವೇ ಅವರು ಮರಳಲಿದ್ದಾರೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

ನಿರ್ಧಾರಕ್ಕೆ ಬದ್ಧ

ತನ್ನ ತಂದೆಯನ್ನು ಭೇಟಿಯಾದ ಬಳಿಕ ವರದಿಗಾರರೊಂದಿಗೆ ಮಾತನಾಡಿದ್ದ ತೇಜ್ ಪ್ರತಾಪ್, ತಮ್ಮ ವಿಚ್ಛೇದನ ನಿರ್ಧಾರಕ್ಕೆ ಬದ್ಧ, ತಂದೆಯ ವಿರೋಧವನ್ನು ಲೆಕ್ಕಿಸಲಾರೆ ಎಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ