ಆ್ಯಪ್ನಗರ

ಡೋಕ್ಲಾಮ್ ಬಳಿಕ ಮತ್ತೊಂದು ಮಿಲಿಟರಿ ಮುಖಾಮುಖಿಗೆ ಚೀನಾ ಕುಮ್ಮಕ್ಕು?: 'ಗಡಿ'ಬಿಡಿ ಡ್ರ್ಯಾಗನ್!

ಚೀನಾದ ಗಡಿ ಉಪಟಳಕ್ಕೆ ಬೇರೆಯದ್ದೆ ಕಾರಣ ಇದೆ ಎಂದು ಅಂದಾಜಿಸಿರುವ ಭಾರತೀಯ ಮಿಲಿಟರಿ ಅಧಿಕಾರಿಗಳು, 2017ರಲ್ಲಿ ಸಂಭವಿಸಿದ್ದ ಡೋಕ್ಲಾಮ್ ಮಿಲಿಟರಿ ಮುಖಾಮುಖಿಯಂತಹ ಘಟನೆಯನ್ನು ಮರುಕಳಿಸಲು ಚೀನಾ ಬಯಸಿದೆ ಎಂದು ಅನುಮಾನಿಸಿದ್ದಾರೆ.

Vijaya Karnataka Web 26 May 2020, 6:24 pm
ಲಡಾಖ್: ಭಾರತದೊಂದಿಗೆ ಗಡಿ ತಂಟೆ ತೆಗೆಯದಿದ್ದರೆ ಚೀನಾಗೆ ತಿಂದ ಅನ್ನ ಮೈಗೆ ಹತ್ತುವುದಿಲ್ಲ ಎಂದೆನಿಸುತ್ತದೆ. ಆಗಾಗಾ ಭಾರತದ ಗಡಿ ದಾಟಿ ಬಂದು ಉಪಟಳ ನೀಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಚೀನಾ, ಇದೀಗ ಲಡಾಖ್‌ನಲ್ಲಿ ಸಮಸ್ಯೆ ಸೃಷ್ಟಿಸಿದೆ.
Vijaya Karnataka Web jpg
ಸಂಗ್ರಹ ಚಿತ್ರ


ಸಿಕ್ಕಿಂ ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಕೈ ಕೈ ಮಿಲಾಯಿಸಿದ ಚೀನಿ ಸೈನಿಕರು, ಇದೀಗ ಲಡಾಖ್ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ. ಮೂಲಗಳ ಪ್ರಕಾರ ಗಲ್ವಾನ್ ನದಿಪಾತ್ರದ ಗುಂಟ ಸುಮಾರು 5,000 ಚೀನಿ ಸೈನಿಕರು ಬೀಡು ಬಿಟ್ಟಿದ್ದಾರೆ.

ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಕೂಡ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ. ಪ್ರಮುಖವಾಗಿ ಪ್ಯಾಂಗ್ಯಾಂಗ್ ತ್ಸೋ ಸರೋವರದ ಬಳಿ ಚೀನಿ ಸೈನಿಕರ ಚಟುವಟಿಕೆಗಳು ಅಧಿಕವಾಗಿರುವುದರಿಂದ ಆ ಪ್ರದೇಶಕ್ಕೆ ಹೆಚ್ಚಿನ ಸೈನಿಕರನ್ನು ರವಾನಿಸಲಾಗಿದೆ.

ಗಡಿಯಲ್ಲಿ ಚೀನಾದಿಂದ 5 ಸಾವಿರ ಸೈನಿಕರ ನಿಯೋಜನೆ: ಭಾರತದಿಂದಲೂ ಸೈನ್ಯ ಬಲವರ್ಧನೆ!

ಇತ್ತ ಗಲ್ವಾನ್ ನದಿಪಾತ್ರದಲ್ಲೂ ಹೆಚ್ಚುವರಿ ಸೇನೆಯನ್ನು ನಿಯೋಜಿಸಿರುವ ಭಾರತ, ಚೀನಿ ಸೈನಿಕರ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಿದೆ.

ಆದರೆ ಚೀನಾದ ಗಡಿ ಉಪಟಳಕ್ಕೆ ಬೇರೆಯದ್ದೆ ಕಾರಣ ಇದೆ ಎಂದು ಅಂದಾಜಿಸಿರುವ ಭಾರತೀಯ ಮಿಲಿಟರಿ ಅಧಿಕಾರಿಗಳು, 2017ರಲ್ಲಿ ಸಂಭವಿಸಿದ್ದ ಡೋಕ್ಲಾಮ್ ಮಿಲಿಟರಿ ಮುಖಾಮುಖಿಯಂತಹ ಘಟನೆಯನ್ನು ಮರುಕಳಿಸಲು ಚೀನಾ ಬಯಸಿದೆ ಎಂದು ಅನುಮಾನಿಸಿದ್ದಾರೆ.


2017ರಲ್ಲಿ ಕ್ಲಾಮ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಭಾರೀ ಸಂಘರ್ಷವೇರ್ಪಟ್ಟಿತ್ತು. ಕೈ ಕೈ ಮಿಲಾಯಿಸಿದ್ದ ಉಭಯ ಸೈನಿಕರು ಪರಸ್ಪರರ ವಿರುದ್ಧ ಗಡಿ ದಾಟಿ ಬಂದ ಆರೋಪ ಹೊರಿಸಿದ್ದರು.

ಇದೀಗ ಡೋಕ್ಲಾಮ್ ಸಂಘರ್ಷವನ್ನು ಮರುಕಳಿಸುವ ಯೋಜನೆಯಲ್ಲಿರುವ ಚೀನಾ, ಇದೇ ಕಾರಣಕ್ಕೆ ಲಡಾಖ್ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೈನಿಕರನ್ನು ಜಮಾವಣೆಗೊಳಿಸಿದೆ.

ಲಡಾಖ್ ಗಡಿಯಲ್ಲಿ ನಿಂತಿರುವ ವೀರ ಸೈನಿಕರು: ನಡೆಯದಿನ್ನು ಚೀನಿ ಕುತಂತ್ರಗಳು!

ಆದರೆ ಚೀನಾದ ಈ ಕುತಂತ್ರ ಅರಿತಿರುವ ಭಾರತೀಯ ಸೇನೆ, ಪ್ರತ್ಯುತ್ತರವಾಗಿ ಗಡಿಯಲ್ಲಿ ಸೈನ್ಯ ಬಲವರ್ಧನೆ ಮಾಡಿದೆ. ಇದೇ ಕಾರಣಕ್ಕೆ ಚೀನಾ ಇದುವರೆಗೂ ಆಕ್ರಮಣಕಾರಿ ಪ್ರವೃತ್ತಿ ತೋರಿಲ್ಲ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ