ಆ್ಯಪ್ನಗರ

ಸರಕಾರಕ್ಕೆ ತಾಕತ್ತಿಲ್ಲ ಎಂಬ ಪ್ರತಿಪಕ್ಷ ಹೇಳಿಕೆ: ತಾಕತ್ತು ತೋರಿಸಲು ಕುಸ್ತಿಗೆ ಬಂದಿಲ್ಲ ಎಂದ ಸಿಸಿ ಪಾಟೀಲ್‌

ಕೇಂದ್ರ ಸರಕಾರದಿಂದ ನೆರೆ ಪರಿಹಾರ ಅನುದಾನ ಬಿಡುಗಡೆಯಾಗಿಲ್ಲ ಎಂಬ ವಿಷಯ ರಾಜಕೀಯ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

Vijaya Karnataka Web 14 Dec 2022, 11:27 am
ದಾವಣಗೆರೆ: ರಾಜ್ಯಕ್ಕೆ ಕೇಂದ್ರದಿಂದ ನೆರವು ಪಡೆಯಲು ಬಿಜೆಪಿ ಸರಕಾರಕ್ಕೆ ತಾಕತ್ತಿಲ್ಲ ಎಂಬ ಪ್ರತಿಪಕ್ಷ ಗಳ ಟೀಕೆಗೆ ಪ್ರತಿಕ್ರಿಯಿಸಿರುವ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್‌, ತಾಕತ್ತು ತೋರಿಸಲು ಇದು ಕುಸ್ತಿ ಮೈದಾನ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
Vijaya Karnataka Web cc patil fb
ಕೆಂಪಣ್ಣ ಯಾರದೋ ನಿರ್ದೇಶನದ ಮೇರೆಗೆ ಕೆಲಸ ಮಾಡ್ತಿದ್ದಾರೆ: ಸಿ. ಸಿ. ಪಾಟೀಲ್ ಆರೋಪ


ನಗರದಲ್ಲಿ ಗುರುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವ ಕೇಂದ್ರ ಸರಕಾರದ ಬಳಿ ಸರ್ವ ಪಕ್ಷ ಗಳ ನಿಯೋಗ ಕೊಂಡೊಯ್ಯಲು ಮುಖ್ಯಮಂತ್ರಿಗೆ ತಾಕತ್ತಿಲ್ಲ ಎಂಬ ಪ್ರತಿಪಕ್ಷ ನಾಯಕರ ಟೀಕೆಗೆ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಬಿಜೆಪಿ ಸರಕಾರವು ಕೇಂದ್ರದ ನೆರವಿನ ನಿರೀಕ್ಷೆಯಲ್ಲಿ ಕೈಕಟ್ಟಿ ಕುಳಿತಿಲ್ಲ. ಈಗಾಗಲೇ ರಾಜ್ಯದ ಬೊಕ್ಕಸದಿಂದಲೇ ಪ್ರವಾಹ ಸಂತ್ರಸ್ತರಿಗೆ 15 ಸಾವಿರ ಕೋಟಿ ರೂ. ಪರಿಹಾರ ನೀಡಲಾಗಿದೆ. ಸಂತ್ರಸ್ತರಿಗೆ ಮೊದಲ ಹಂತವಾಗಿ ತಲಾ 10 ಸಾವಿರ ರೂ. ಕೊಡಲಾಗಿದೆ. ಮನೆ ಕಳೆದುಕೊಂಡವರಿಗೆ ಪ್ರಾಥಮಿಕವಾಗಿ 1 ಲಕ್ಷ ರೂ. ಸಹಾಯಧನವನ್ನು ಫಲಾನುಭವಿಗಳ ಖಾತೆಗೆ ಹಾಕಲಾಗಿದೆ ಎಂದರು.

ನಾನಾ ಕಾರಣಗಳಿಂದಾಗಿ ಕೇಂದ್ರದ ಪರಿಹಾರ ವಿಳಂಬವಾಗಿದ್ದು, ನಾವೂ ನೆರವಿನ ನಿರೀಕ್ಷೆಯಲ್ಲಿದ್ದೇವೆ. ಇದರಲ್ಲಿ ತಾಕತ್ತು ತೋರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವ ಸಿಸಿ ಪಾಟೀಲ್‌ ಸಮರ್ಥಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ