ಆ್ಯಪ್ನಗರ

ಸಚಿವನಾದರೂ ಸಾಮಾನ್ಯ ಪ್ರಯಾಣಿಕನಂತೆ ದರ್ಪ ತೋರದ ಜಯಂತ್‌ ಸಿನ್ಹಾ

ಇತರರಿಗೆ ಮಾದರಿಯಾದ ಕೇಂದ್ರ ಸಚಿವ

Vijaya Karnataka Web 21 Nov 2018, 4:25 pm
ಹೊಸದಿಲ್ಲಿ: ಜನಪ್ರತಿನಿಧಿಗಳು ತಮಗೆ ಸಿಕ್ಕಿರುವ ಅಧಿಕಾರವನ್ನು ಮನಬಂದಂತೆ ವರ್ತಿಸುವವರ ಪೈಕಿ ಕೇಂದ್ರ ಸಚಿವರು ಎಲ್ಲರಿಗೂ ಮಾದರಿಯಾಗಿದ್ದಾರೆ.
Vijaya Karnataka Web ಜಯಂತ್‌ ಸಿನ್ಹಾ
ಜಯಂತ್‌ ಸಿನ್ಹಾ


ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ ವರ್ತನೆಗೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜಯಂತ್‌ ಸಿನ್ಹಾಗೆ ಲೈಕ್‌ಗಳು ಹೆಚ್ಚಾಗಿವೆ.

ಕೇಂದ್ರ ಸಚಿವ ಜಯಂತ್‌ ಸಿನ್ಹಾ ಮಂಗಳವಾರ ಹೊಸದಿಲ್ಲಿಯಿಂದ ರಾಂಚಿಗೆ ಏರ್‌ ಏಷ್ಯಾದ I5-545 ವಿಮಾನದಲ್ಲಿ ಬಜೆಟ್‌ ಟಿಕೆಟ್‌ ಪಡೆದೇ ಪ್ರಯಾಣಿಸಿದರು.

ಒಂದು ಹಂತದಲ್ಲಿ ಗಗನಸಖಿಯನ್ನು ಕರೆದು ತಮಗೆ ನಿರ್ದಿಷ್ಟ ಊಟ ನೀಡುವಂತೆ ಕೇಳಿದರು. ಆದರೆ ಗಗನಸಖಿ ಇದಕ್ಕೆ ವಿರೋಧ ವ್ಯಕ್ತಪಡಿಸಿ, ನೀವು ಟಿಕೆಟ್‌ ಬುಕ್‌ ಮಾಡುವಾಗ ದಕ್ಷಿಣ ಭಾರತದ ಊಟವನ್ನು ಆರ್ಡರ್‌ ಮಾಡಿದ್ದೀರಿ. ಈಗ ಅದನ್ನುಬದಲಿಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಇದಕ್ಕೆ ಮರು ಮಾತನಾಡದೇ ಸಚಿವರು ಹೆಚ್ಚುವರಿ ಹಣವನ್ನು ನೀಡಿ ತಮಗೆ ಬೇಕಾದ ತಿನಿಸು ತರಿಸಿಕೊಂಡು ತಿಂದರು.

ಇದೆಲ್ಲವನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


ಅತ್ಯಂತ ಸಿಂಪಲ್‌ ಮ್ಯಾನ್‌ ಜಯಂತ್‌ ಸಿನ್ಹಾ ಎಂದು ಹೊಗಳಿದ್ದಾರೆ. ಅಲ್ಲದೇ ನಾಗರಿಕ ವಿಮಾನಯಾನ ಖಾತೆ ಸಚಿವರುನ್ನು ಗಗನಸಖಿ ಗುರುತಿಸಬೇಕಾಗಿತ್ತು ಎಂದೂ ಹೇಳಿದ್ದಾರೆ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರತಿಕ್ರಯೆಯೂ ವ್ಯಕ್ತವಾಗಿದೆ. ಜತೆಗೆ ಏರ್‌ ಏಷ್ಯಾದ ಗಗನ ಸಖಿಯ ಕರ್ತವ್ಯ ಪ್ರಜ್ಞೆ ಹಾಗೂ ವೃತ್ತಿಪತೆಗೂ ಮೆಚ್ಚುಗೆ ವ್ಯಕ್ತವಾಗಿದೆ.

ಹಲವಾರು ಮಂದಿ ಟ್ವಿಟರ್‌ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಳದ ಕೆಲವು ವರ್ಷಗಳಿಂದ ಜನಪ್ರತಿನಿಧಿಗಳ ದರ್ಪದ ಹಾಗೂ ದುರ್ವರ್ತನೆ ಬಗ್ಗೆ ವರದಿಗಳಾಗಿವೆ. ಆದರೆ ಹಿಂದಿನ ನಾಗರಿಕ ವಿಮಾನಯಾನ ಸಚಿವರಾಗಿದ್ದ ಅಶೋಕ್‌ ಗಜಪತಿ ರಾಜು ಹಾಗೂ ಹಾಲಿ ಜಯಂತ್‌ ಸಿನ್ಹಾ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್‌ ಪಡೆದಿದ್ದಾರೆ. ಅಲ್ಲದೇ ತಮ್ಮ ಉತ್ತಮ ನಡವಳಿಕೆಯ ಮೂಲಕ ಇತತರಿಗೂ ಮಾದರಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ