ಆ್ಯಪ್ನಗರ

ಕರ್ನಾಟಕ, ಕೇರಳದಲ್ಲಿ ಐಸಿಸ್‌ ಉಗ್ರರು ಇಲ್ಲ: ವಿಶ್ವಸಂಸ್ಥೆ ವರದಿಯನ್ನು ತಳ್ಳಿ ಹಾಕಿದ ಕೇಂದ್ರ ಗೃಹ ಇಲಾಖೆ

​​ವಿಶೇಷವಾಗಿ ಕರ್ನಾಟಕ ಮತ್ತು ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಉಗ್ರರು ಅಡಗಿದ್ದಾರೆ,'' ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿತ್ತು. ''ಈ ವರದಿ ಬಗ್ಗೆ ಸರಕಾರಕ್ಕೆ ತಿಳಿದಿದೆ. ಆದರೆ, ಐಸಿಸ್‌ ಉಗ್ರರಿಗೆ ಯಾವುದೇ ರಾಜ್ಯದಲ್ಲಿಯೂ ಅವಕಾಶ ನೀಡಿಲ್ಲ. ಸಂಪೂರ್ಣ ನಿಗಾ ವ್ಯವಸ್ಥೆ ಇರುವುದರಿಂದ ಅದು ಸಾಧ್ಯವೂ ಇಲ್ಲ.

Vijaya Karnataka Web 21 Sep 2020, 7:03 am
ಹೊಸದಿಲ್ಲಿ: ಕರ್ನಾಟಕ ಮತ್ತು ಕೇರಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಐಸಿಸ್‌ ಉಗ್ರರು ನೆಲೆಸಿದ್ದಾರೆ ಎನ್ನುವ ವಿಶ್ವಸಂಸ್ಥೆಯ ವರದಿ ತಪ್ಪು ಮಾಹಿತಿಯನ್ನು ಒಳಗೊಂಡಿದೆ ಎಂದು ಕೇಂದ್ರ ಸರಕಾರ ಭಾನುವಾರ ಸ್ಪಷ್ಟಪಡಿಸಿದೆ. ''ದಕ್ಷಿಣ ರಾಜ್ಯಗಳಲ್ಲಿಐಸಿಸ್‌ ಉಗ್ರರ ಚಟುವಟಿಕೆ ತೀವ್ರ ಪ್ರಮಾಣದಲ್ಲಿ ಹೆಚ್ಚಿದೆ.
Vijaya Karnataka Web isis
Representative picture (File photo)


ವಿಶೇಷವಾಗಿ ಕರ್ನಾಟಕ ಮತ್ತು ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಉಗ್ರರು ಅಡಗಿದ್ದಾರೆ,'' ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿತ್ತು. ''ಈ ವರದಿ ಬಗ್ಗೆ ಸರಕಾರಕ್ಕೆ ತಿಳಿದಿದೆ. ಆದರೆ, ಐಸಿಸ್‌ ಉಗ್ರರಿಗೆ ಯಾವುದೇ ರಾಜ್ಯದಲ್ಲಿಯೂ ಅವಕಾಶ ನೀಡಿಲ್ಲ. ಸಂಪೂರ್ಣ ನಿಗಾ ವ್ಯವಸ್ಥೆ ಇರುವುದರಿಂದ ಅದು ಸಾಧ್ಯವೂ ಇಲ್ಲ.

ವರದಿ ತಪ್ಪು ಮಾಹಿತಿ ಒಳಗೊಂಡಿದೆ,'' ಎಂದು ಲೋಕಸಭೆಗೆ ಗೃಹ ಖಾತೆ ಸಹಾಯಕ ಸಚಿವ ಜಿ.ಕಿಶನ್‌ ರೆಡ್ಡಿ ತಿಳಿಸಿದರು. ''ದೇಶದಲ್ಲಿಐಸಿಸ್‌ ಸಂಘಟನೆಗೆ ಸಂಬಂಧಿಸಿ 20 ಮತ್ತು ಲಷ್ಕರೆ ತಯ್ಬಾ ಸಂಘಟನೆಗೆ ಸಂಬಂಧಿಸಿ 14 ಪ್ರಕರಣಗಳನ್ನು ಎನ್‌ಐಎ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಈವರೆಗೆ 240 ಉಗ್ರರನ್ನು ಬಂಧಿಸಲಾಗಿದೆ,'' ಎಂದು ವಿವರಿಸಿದರು.

ಪಾಕ್‌ನಿಂದ ಡ್ರೋನ್‌ ಮೂಲಕ ಶಸ್ತ್ರಾಸ್ತ್ರ, ಡ್ರಗ್ಸ್‌ ಪೂರೈಕೆ..! ಗಡಿ ಭದ್ರತಾ ಪಡೆಗೆ ಹೊಸ ಸವಾಲು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ