ಆ್ಯಪ್ನಗರ

'ಟಿಫಿನ್ ಬೈಠಕ್': ಪ್ರಧಾನಿ ಮೋದಿ ಸಲಹೆಗಳ ಚರ್ಚೆಗೆ ಉಪಾಹಾರದ ಜತೆ ಸಭೆ

PM Narendra Modi: ಸಚಿವರು ಮತ್ತು ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಬದಲಾವಣೆಗಳು ಮತ್ತು ಪ್ರಗತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಸಲಹೆಗಳ ಆಧಾರದಲ್ಲಿ ವರದಿ ಸಲ್ಲಿಸಲು ಸಚಿವರಿಗೆ ಸೂಚಿಸಲಾಗಿದೆ.

Edited byಅಮಿತ್ ಎಂ.ಎಸ್ | TIMESOFINDIA.COM 23 Aug 2022, 4:03 pm

ಹೈಲೈಟ್ಸ್‌:

  • ದಕ್ಷತೆ ಹೆಚ್ಚಿಸಲು ಮತ್ತು ಉತ್ತಮ ಆಡಳಿತಾತ್ಮಕ ಅಭ್ಯಾಸ ಅಳವಡಿಕೆ
  • ಸಚಿವರ ಮಂಡಳಿಗೆ ಸಲಹೆಗಳನ್ನು ನೀಡಿದ್ದ ಪ್ರಧಾನಿ ನರೇಂದ್ರ ಮೋದಿ
  • ಅಧಿಕಾರಿಗಳ ಜತೆಗೆ 'ಟಿಫಿನ್ ಬೈಠಕ್' ಸಭೆ ನಡೆಸಲು ಉದ್ದೇಶ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web PM Modi narendra
ಹೊಸದಿಲ್ಲಿ: ಸಚಿವರು ತಮ್ಮ ದಕ್ಷತೆ ಹೆಚ್ಚಿಸಿಕೊಳ್ಳಲು ಮತ್ತು ಅತ್ಯುತ್ತಮ ಆಡಳಿತ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರ ತಂಡಕ್ಕೆ ಸಲಹೆಗಳನ್ನು ನೀಡಿದ ಕೆಲವು ತಿಂಗಳ ಬಳಿಕ, ಮೋದಿ ಅವರ ಸಲಹೆಗಳ ಆಧಾರದಲ್ಲಿ ಜಾರಿಗೆ ತರಬಹುದಾದ ಅಂಶಗಳ ಪಾಲನೆ ಮತ್ತು ಪ್ರಗತಿ ಬಗ್ಗೆ ವಿವರ ನೀಡುವಂತೆ ಸಚಿವರಿಗೆ ಸೂಚಿಸಲಾಗಿದೆ.
ಸರ್ಕಾರಿ ಇ- ಮಾರುಕಟ್ಟೆ ಸ್ಥಳ (ಜಿಇಎಂ) ಪೋರ್ಟಲ್ ಮೂಲಕ ಸರಕು ಮತ್ತು ಸೇವಾ ಖರೀದಿ ಮಾಡುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಸಚಿವರು ಹಾಗೂ ಅವರ ಇಲಾಖೆಗಳಿಗೆ ಇತ್ತೀಚೆಗೆ ನಿರ್ದೇಶಿಸಲಾಗಿದೆ. ಅಧಿಕಾರಿಗಳ ಜತೆ 'ಟಿಫಿನ್ ಬೈಠಕ್' ನಡೆಸುವುದು ಮತ್ತು ಸರ್ಕಾರದ ನಿರ್ಧಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು ಮುಂತಾದ ಸಲಹೆಗಳನ್ನು ಪ್ರಧಾನಿ ನೀಡಿದ್ದರು.
75th Independence Day: ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು

ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಟಿಫಿನ್ ಬೈಠಕ್ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದರು. ಆಹಾರ ಸೇವನೆ ಜತೆಗೆ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು ಇದರ ಉದ್ದೇಶ. ಅಧಿಕಾರಿಗಳು ಸಭೆಗೆ ಉಪಾಹಾರ ತರುತ್ತಾರೆ. ಇಲ್ಲಿ ಅವರು ಆಹಾರದ ಜತೆಗೆ ತಮ್ಮ ಆಲೋಚನೆಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ತಂಡ ಕಟ್ಟುವ ಮತ್ತು ಅಧಿಕಾರಿಗಳು ಹಾಗೂ ಸಚಿವರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಸುವ ಸಲುವಾಗಿ ಈ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವಂತೆ ಸಚಿವರಿಗೆ ಹೇಳಲಾಗಿದೆ.

"ಸರ್ಕಾರವು ನಿಗಾವಣೆ ಮತ್ತು ಪರಿಶೀಲನೆಯ ಮೇಲೆ ಹೆಚ್ಚಿನ ಗಮನ ಹರಿಸಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವರ ಮಂಡಳಿಯ ಹಲವು ಸುತ್ತುಗಳ ಸಭೆಯಲ್ಲಿ, ಜಾರಿಗೆ ತರಬಹುದಾದ ಸಲಹೆಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ನಾವು ನಮಗೆ ಸಂಬಂಧಿಸಿದ ನಮ್ಮ ಇಲಾಖೆಗಳ ವಿವರಗಳನ್ನು ಹಂಚಿಕೊಂಡಿದ್ದೇವೆ" ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ