ಆ್ಯಪ್ನಗರ

ತ್ರಿಪುರಾದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಬಾಯ್‌ಫ್ರೆಂಡ್‌ನಿಂದಲೇ ಅಪ್ರಾಪ್ತೆಯ ಸಜೀವ ದಹನ!

ಅಪ್ರಾಪ್ತ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ನಡೆಸಿ ಜೀವಂತವಾಗಿ ಸುಟ್ಟುಹಾಕಿರುವ ಬರ್ಬರ ಘಟನೆ ತ್ರಿಪುರಾದಲ್ಲಿ ನಡೆದಿದೆ. ಹೈದರಾಬಾದ್‌ ಅತ್ಯಾಚಾರ ಪ್ರಕರಣದ ಬಳಿಕ ದೇಶದಲ್ಲಿ ಅತ್ಯಾಚಾರ ಕೇಸ್‌ಗಳ ಬಗ್ಗೆ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

TIMESOFINDIA.COM 8 Dec 2019, 12:51 pm
ಅಗರ್ತಲಾ: ತೆಲಂಗಾಣದ ಪಶುವೈದ್ಯೆ ಮೇಲೆ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ದೇಶದಲ್ಲಿ ಮತ್ತೊಂದು ಗ್ಯಾಂಗ್‌ರೇಪ್‌ ಪ್ರಕರಣ ವರದಿಯಾಗಿದೆ. ತ್ರಿಪುರಾದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಸಜೀವದಹನ ಮಾಡಲಾಗಿದೆ.
Vijaya Karnataka Web rape voice toi


ಬಾಲಕಿಯ ಬಾಯ್‌ಫ್ರೆಂಡ್‌ ಹಾಗೂ ಗೆಳೆಯರು ಸತತ 4 ದಿನಗಳ ಕಾಲ ಅಪ್ರಾಪ್ತೆಯನ್ನು ಸೆರೆಯಾಳುವಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಬಾಯ್‌ಫ್ರೆಂಡ್‌ ಹಾಗೂ ಆತನ ತಾಯಿ ಬಾಲಕಿಗೆ ದಕ್ಷಿಣ ತ್ರಿಪುರಾದ ಶಾಂತಿರ್‌ಬಜಾರ್‌ನಲ್ಲಿ ಶುಕ್ರವಾರ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ನಂತರ ಶನಿವಾರ ಬೆಳ್ಳಂಬೆಳಗ್ಗೆಯೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆಯ ದೇಹದ ಶೇ. 90 ರಷ್ಟು ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದರಿಂದ ಅತ್ಯಾಚಾರಕ್ಕೊಳಗಾದ ಬಾಲಕಿ ಮೃತಪಟ್ಟಿದ್ದಾಳೆ.

ಆರೋಪಿಯ ನೆರೆಹೊರೆಯವರು ಬಾಲಕಿಯನ್ನು ರಕ್ಷಿಸಿ ಇಲ್ಲಿನ ಜಿಬಿ ಪಂತ್ ಆಸ್ಪತ್ರೆಗೆ ಕರೆದೊಯ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೂ ಹಣಕ್ಕಾಗಿ ಡಿಮ್ಯಾಂಡ್‌ ಮಾಡಿ ಬಾಲಕಿಯನ್ನು ಆತನ ಬಾಯ್‌ಫ್ರೆಂಡ್‌ ಎರಡು ತಿಂಗಳು ಸೆರೆಯಾಗಿಟ್ಟುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಗಳನ್ನು ಬಿಡಬೇಡಿ, ಗಲ್ಲಿಗೇರಿಸಿ: ಉನ್ನಾವ್‌ ರೇಪ್‌ ಸಂತ್ರಸ್ತೆ ಕೊನೆಯಾಸೆ

ಬಾಲಕಿಯ ಸಾವಿನ ಸುದ್ದಿ ಹರಡುತ್ತಿದ್ದಂತೆ, ಜನಸಮೂಹ ಆಸ್ಪತ್ರೆಗೆ ಜಮಾಯಿಸಿ ಆರೋಪಿ ಯುವಕ ಮತ್ತು ಆತನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಅಜೋಯ್ ರುದ್ರಪಾಲ್ ಎಂಬ ಆರೋಪಿ ಬಾಲಕಿಯ ಬಿಡುಗಡೆಗಾಗಿ 50,000 ರೂ. ಬೇಡಿಕೆ ಇಟ್ಟಿದ್ದರು. ಆದರೆ ಶುಕ್ರವಾರ ಕೇವಲ 17,000 ರೂಗಳನ್ನು ಮಾತ್ರ ನೀಡಿದ್ದೇವೆ ಎಂದು ಬಾಲಕಿಯ ಕುಟುಂಬ ತಿಳಿಸಿದೆ. ಇದರಿಂದ ಕೋಪಗೊಂಡ ಅಜೋಯ್ ಆಕೆಗೆ ಬೆಂಕಿ ಹಚ್ಚಿದ ಎಂದು ಪೊಲೀಸರು ಹೇಳಿದ್ದಾರೆ.

Disha Rape Case: ಪಶುವೈದ್ಯೆಯನ್ನು ಹತ್ಯೆ ಮಾಡಿದ ಜಾಗದಲ್ಲೇ ಎಲ್ಲ ನಾಲ್ವರು ಆರೋಪಿಗಳ ಎನ್‌ಕೌಂಟರ್‌!

ಪ್ರಕರಣದ ಮುಖ್ಯ ಆರೋಪಿ ಅಜೋಯ್‌ನನ್ನು ಆಸ್ಪತ್ರೆಯಲ್ಲಿ ಬಂಧಿಸಿ ನಂತರ ಶಾಂತಿರ್‌ಬಜಾರ್ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಶುಕ್ರವಾರ ಸಂಜೆ ಬಾಲಕಿಗೆ ಬೆಂಕಿ ಹಚ್ಚಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ದಕ್ಷಿಣ ತ್ರಿಪುರದ ಎಸ್‌ಪಿ ಜಲ್ ಸಿಂಗ್ ಮೀನಾ ಮಾಹಿತಿ ನೀಡಿದ್ದಾರೆ.

ಹೈದರಾಬಾದ್‌ ಎನ್‌ಕೌಂಟರ್‌ ಬಗ್ಗೆ ನಿರ್ಭಯಾ ತಾಯಿಯ ಪ್ರತಿಕ್ರಿಯೆ ಹೀಗಿದೆ

ಸಾಮಾಜಿಕ ಜಾಲತಾಣದಲ್ಲಿ ಆರೋಪಿಯನ್ನು ಪರಿಚಯ ಮಾಡಿಕೊಂಡ ಬಾಲಕಿಯನ್ನು ದೀಪಾವಳಿಯ ನಂತರ ಯುವಕ ತನ್ನ ಮನೆಗೆ ಭೇಟಿ ನೀಡಿ ಮದುವೆಯನ್ನು ಪ್ರಸ್ತಾಪಿಸಿದಾಗ ಅವನೊಂದಿಗೆ ಓಡಿಹೋದಳು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆರೋಪಿಗಳು ಅವಳನ್ನು ಬಲವಂತವಾಗಿ ವಶಕ್ಕೆ ತೆಗೆದುಕೊಂಡಿದ್ದು, ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದೂ ಹೇಳಿದ್ದಾರೆ.

ಇನ್ನು, ಬಾಲಕಿ ಕಾಣೆಯಾದ ಕೂಡಲೇ ತಾವು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ನಂತರ ಆರೋಪಿ ಎರಡನೇ ಬಾರಿಗೆ ಹಣ ಕೇಳಿದಾಗ, ಮತ್ತೆ ಪೊಲೀಸ್ ಸಹಾಯವನ್ನು ಕೋರಿದ್ದರೂ, ಯಾವುದೇ ಸಹಾಯ ದೊರೆತಿಲ್ಲ ಎಂದು ಆರೋಪಿಸಿದ್ದಾರೆ. ಆದರೆ, ಇದಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಅಧಿಕಾರಿಗಳು ತಕ್ಷಣ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ