ಆ್ಯಪ್ನಗರ

ಕಾಣೆಯಾಗಿದ್ದ ತೃತೀಯ ಲಿಂಗಿ ಅಭ್ಯರ್ಥಿ ಪೊಲೀಸರ ಮುಂದೆ ಹಾಜರು

ನಾಪತ್ತೆಯಾಗಿದ್ದ ತೆಲಂಗಾಣ ವಿಧಾನಸಭೆ ಚುನಾವಣಾ ಅಭ್ಯರ್ಥಿ, ತೃತೀಯಲಿಂಗಿ ಚಂದ್ರಮುಖಿ ಎಂ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದಾರೆ

Vijaya Karnataka 30 Nov 2018, 5:00 am
ಹೈದರಾಬಾದ್‌: ನಾಪತ್ತೆಯಾಗಿದ್ದ ತೆಲಂಗಾಣ ವಿಧಾನಸಭೆ ಚುನಾವಣಾ ಅಭ್ಯರ್ಥಿ, ತೃತೀಯಲಿಂಗಿ ಚಂದ್ರಮುಖಿ ಎಂ. ಅವರು ಬುಧವಾರ ರಾತ್ರಿ ಪೊಲೀಸ್‌ ಠಾಣೆಯಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದಾರೆ.
Vijaya Karnataka Web chandramukhi

ತೆಲಂಗಾಣದಲ್ಲಿ ಡಿ.7ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಗೋಶಮಹಲ್‌ ಕ್ಷೇತ್ರದಿಂದ ಬಹುಜನ ಲೆಫ್ಟ್‌ ಫ್ರಂಟ್‌(ಬಿಎಲ್‌ಎಫ್‌) ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 32 ವರ್ಷ ಪ್ರಾಯದ ಚಂದ್ರಮುಖಿ ಅವರು, ಬಂಜಾರ ಹಿಲ್ಸ್‌ನ ತಮ್ಮ ನಿವಾಸದಿಂದ ಮಂಗಳವಾರ ರಾತ್ರಿ ಕಾಣೆಯಾಗಿದ್ದರು. ಅವರು ಅಪಹರಣಕ್ಕೆ ಒಳಗಾಗಿರಬಹುದು ಎಂದು ಅವರ ತೃತೀಯಲಿಂಗಿ ಸಂಗಾತಿ ದೂರು ದಾಖಲಿಸಿದ್ದರು.
''ಚಂದ್ರಮುಖಿ ಅವರು ಬುಧವಾರ ತಡರಾತ್ರಿ ಪೊಲೀಸರ ಮುಂದೆ ಹಾಜರಿಯಾಗಿದ್ದಾರೆ. ತಾವು ಸುರಕ್ಷಿತವಾಗಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಕಾಣೆಯಾಗಿದ್ದರ ಕುರಿತು ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ,'' ಎಂದು ಎಸಿಪಿ ಕೆ.ಶ್ರೀನಿವಾಸ್‌ ರಾವ್‌ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
'ತೆಲಂಗಾಣ ಹಿಜ್ರಾ ಟ್ರಾನ್ಸ್‌ಜೆಂಡರ್‌ ಸಮಿತಿ'ಯ ಸಕ್ರಿಯ ಕಾರ್ಯಕರ್ತೆಯಾಗಿರುವ ಚಂದ್ರಮುಖಿ, ತೃತೀಯಲಿಂಗಿ ಸಮುದಾಯದ ಪರವಾದ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ