ಆ್ಯಪ್ನಗರ

ನಟ ಮಿಥುನ್‌ ಚಕ್ರವರ್ತಿ ಪುತ್ರನ ಮದುವೆ ರದ್ದು

ಮಹಿಳೆಯೊಬ್ಬರು ಅತ್ಯಾಚಾರ ಹಾಗೂ ವಂಚನೆ ದೂರು ನೀಡಿರುವ ಹಿನ್ನೆಲೆಯಲ್ಲಿ ಶನಿವಾರ ನಡೆಯಬೇಕಿದ್ದ ಖ್ಯಾತ ನಟ ಮಿಥುನ್‌ ಚಕ್ರವರ್ತಿ ಅವರ ಪುತ್ರನ ಮದುವೆ ರದ್ದಾಗಿದೆ.

Vijaya Karnataka 8 Jul 2018, 10:34 am
ಊಟಿ: ಮಹಿಳೆಯೊಬ್ಬರು ಅತ್ಯಾಚಾರ ಹಾಗೂ ವಂಚನೆ ದೂರು ನೀಡಿರುವ ಹಿನ್ನೆಲೆಯಲ್ಲಿ ಶನಿವಾರ ನಡೆಯಬೇಕಿದ್ದ ಖ್ಯಾತ ನಟ ಮಿಥುನ್‌ ಚಕ್ರವರ್ತಿ ಅವರ ಪುತ್ರನ ಮದುವೆ ರದ್ದಾಗಿದೆ.
Vijaya Karnataka Web Mirhun Family


ಊಟಿಯಲ್ಲಿರುವ ಮಿಥುನ್‌ ಚಕ್ರವರ್ತಿ ಅವರ ಐಷಾರಾಮಿ ಹೋಟೆಲ್‌ನಲ್ಲಿ ಮದುವೆಗೆ ಸಕಲ ಸಿದ್ಧತೆ ನಡೆದಿತ್ತು. ಪೊಲೀಸರು ಅಲ್ಲಿಗೆ ತೆರಳಿ ಮದುವೆ ನಿಲ್ಲಿಸಿದರು. ವಧುವಿನ ಕಡೆಯವರು ಹೋಟೆಲ್‌ನಿಂದ ತೆರಳಿದರು. ಪ್ರಕರಣಕ್ಕೆ ಸಂಬಂಸಿ ಮಿಥುನ್‌ ಪತ್ನಿ ಯೋಗಿತಾ ಬಾಲಿ ಮತ್ತು ಪುತ್ರ ಮಹಾಅಕ್ಷಯ್‌ ಅವರಿಗೆ ದಿಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದರಿಂದ ಇಬ್ಬರೂ ಬಂಧನದಿಂದ ಪಾರಾಗಿದ್ದಾರೆ.

ಗುರುವಾರ ಬಾಲಿ ಹಾಗೂ ಮಹಾಅಕ್ಷಯ್‌ ಅವರಿಗೆ ಬಾಂಬೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಅದಾದ ಬಳಿಕ ತಾಯಿ-ಮಗ ದಿಲ್ಲಿ ಹೈಕೋರ್ಟ್‌ ಮೊರೆಹೋಗಿದ್ದರು. ವಿಶೇಷ ನ್ಯಾಯಮೂರ್ತಿ ಆಶುತೋಶ್‌ ಕುಮಾರ್‌ ಶನಿವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದರು.

ಮಹಿಳೆ ನೀಡಿದ ದೂರಿನಲ್ಲಿ ಏನಿದೆ?

''ಮದುವೆಯಾಗುತ್ತೇನೆಂದು ನಂಬಿಸಿ ಕಳೆದ ನಾಲ್ಕು ವರ್ಷಗಳಿಂದ ನನ್ನ ಜತೆ ಲೈಂಗಿಕ ಸಂಬಂಧ ಹೊಂದಿದ್ದ ಮಹಾಅಕ್ಷಯ್‌ ಈಗ ಬೇರೆ ಹುಡುಗಿ ಜತೆ ಮದುವೆಯಾಗಲು ಹೊರಟಿದ್ದಾನೆ,'' ಎಂದು ಮಹಿಳೆ ದೂರಿನಲ್ಲಿ ದಾಖಲಿಸಿದ್ದಾರೆ. ''ನಾನು ಗರ್ಭಿಣಿಯಾದಾಗ ಮಹಾಅಕ್ಷಯ್‌ ಕೆಲವು ಮಾತ್ರೆಗಳನ್ನು ಕೊಟ್ಟು ಗರ್ಭಪಾತ ಮಾಡಿಸಿದ್ದಾನೆ. ಅದಾದ ಬಳಿಕ, ಸಂಬಂಧ ಮುಂದುವರಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಆತನ ತಾಯಿ ಬಾಲಿ ನನಗೆ ಬೆದರಿಕೆ ಒಡ್ಡತೊಡಗಿದರು. ತಾಯಿ-ಮಗನ ಬೆದರಿಕೆ ಹಿನ್ನೆಲೆಯಲ್ಲಿ ನಾನು ಮುಂಬಯಿ ತೊರೆದು ದಿಲ್ಲಿಗೆ ವಾಸ್ತವ್ಯ ಬದಲಿಸಿದೆ,'' ಎಂದೂ ಆಕೆ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ