ಆ್ಯಪ್ನಗರ

ಸಾರ್ವಜನಿಕವಾಗಿ ಕಾಲೊತ್ತಿಸಿಕೊಂಡು ವಿವಾದಕ್ಕೀಡಾದ ಶಾಸಕ

ಎಐಎಡಿಎಂಕೆ ಶಾಸಕ ವಿ.ಟಿ ಕಲೈಸೆಲ್ವನ್‌ ಅವರು ಸಾರ್ಜನಿಕವಾಗಿಯೇ ಪಕ್ಷದ ಸದಸ್ಯರ ಕೈಯಿಂದ ಕಾಲೊತ್ತಿಸಿಕೊಂಡು ವಿವಾದಕ್ಕೆ ಗ್ರಾಸವಾಗಿದ್ದಾರೆ.

ಏಜೆನ್ಸೀಸ್ 21 Aug 2017, 2:51 pm
ವಿರುಧಾಚಲಂ: ಎಐಎಡಿಎಂಕೆ ಶಾಸಕ ವಿ.ಟಿ ಕಲೈಸೆಲ್ವನ್‌ ಅವರು ಸಾರ್ಜನಿಕವಾಗಿಯೇ ಪಕ್ಷದ ಸದಸ್ಯರ ಕೈಯಿಂದ ಕಾಲೊತ್ತಿಸಿಕೊಂಡು ವಿವಾದಕ್ಕೆ ಗ್ರಾಸವಾಗಿದ್ದಾರೆ.
Vijaya Karnataka Web mla publicly asked party members to massage his legs
ಸಾರ್ವಜನಿಕವಾಗಿ ಕಾಲೊತ್ತಿಸಿಕೊಂಡು ವಿವಾದಕ್ಕೀಡಾದ ಶಾಸಕ


ಸ್ಥಳದಲ್ಲಿದ್ದ ಯಾರೋ ಒಬ್ಬರು ಶಾಸಕರ ಕಾಲೊತ್ತುತ್ತಿದ್ದ ದೃಶ್ಯದ ಫೋಟೋ ತೆಗೆದಿದ್ದು, ಅದು ಈಗ ವೈರಲ್‌ ಆಗಿದೆ.

ಮಣಿಮುಕ್ತ ನದಿಯ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲೈಸೆಲ್ವನ್‌ ಅವರು, ನದಿ ದಡದಲ್ಲಿರುವ ವಿರುಧಾಚಲಂ ಪಟ್ಟಣದ ಶಿವ ದೇಗುಲದ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಜತೆಗಿದ್ದ ಪಕ್ಷದ ಸದಸ್ಯರಲ್ಲಿ ಕಾಲೊತ್ತುವಂತೆ ಕೇಳಿದ್ದಾರೆ.

ಸಾವಿರಾರು ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡುವುದಕ್ಕಾಗಿ ಈ ಪ್ರದೇಶಕ್ಕೆ ಬರುತ್ತಿರುತ್ತಾರೆ. ಹೀಗಾಗಿ ಈ ಸಾರ್ವಜನಿಕ ಸ್ಥಳದಲ್ಲಿ ಶಾಸಕರು ಕಾಲೊತ್ತಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ