ಆ್ಯಪ್ನಗರ

ಉಗ್ರ ಮಸೂದ್ ಅಜರ್‌ನನ್ನು ಸಾಹೇಬ ಎಂದು ಸಂಬೋಧಿಸಿದ ಶಾಸಕ

ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಅವರು ಮೋದಿ ಅವರ ವಿರುದ್ಧ ಹರಿಹಾಯುವ ಪ್ರಯತ್ನದಲ್ಲಿ ವಿವಾದವನ್ನು ತಲೆಗೆಳೆದುಕೊಂಡಿದ್ದಾರೆ. ಅಜರ್‌ ಸಾಹೇಬರನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ಕರಡು ನಿರ್ಣಯಕ್ಕೆ ಚೀನಾ ತಡೆ ಹಿಡಿದಿದ್ದರೂ ಮೋದಿ ಮಾತನಾಡಲೇ ಇಲ್ಲ ಎಂದವರು ಹೇಳಿದ್ದಾರೆ.

TIMESOFINDIA.COM 31 Mar 2019, 3:06 pm
ಕಿಶಾನ್‌ಗಂಜ್: ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಸಾಹೇಬ ಎಂದು ಉಲ್ಲೇಖಿಸುವ ಮೂಲಕ ಆರ್‌ಜೆಡಿ ಶಾಸಕ ಹಾಜಿ ಸುಭಾನ್ ವಿವಾದ ಸೃಷ್ಟಿಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ನಾಯಕ ತೇಜಸ್ವಿ ಯಾದವ್ ಕೂಡ ಉಪಸ್ಥಿತರಿದ್ದರು.
Vijaya Karnataka Web Masood


ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಅವರು ಮೋದಿ ಅವರ ವಿರುದ್ಧ ಹರಿಹಾಯುವ ಪ್ರಯತ್ನದಲ್ಲಿ ವಿವಾದವನ್ನು ತಲೆಗೆಳೆದುಕೊಂಡಿದ್ದಾರೆ. ಅಜರ್‌ ಸಾಹೇಬರನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ಕರಡು ನಿರ್ಣಯಕ್ಕೆ ಚೀನಾ ತಡೆ ಹಿಡಿದಿದ್ದರೂ ಮೋದಿ ಮಾತನಾಡಲೇ ಇಲ್ಲ ಎಂದವರು ಹೇಳಿದ್ದಾರೆ.

ಪ್ರತಿವರ್ಷ ಚೀನಾ ಭಾರತದಿಂದ 50ಸಾವಿರ ಕೋಟಿ ಆದಾಯ ಗಳಿಸುತ್ತದೆ. ಇದನ್ನು ನಿಲ್ಲಿಸಲು ಯಾವ ನಾಯಕನೂ ಯತ್ನಿಸುತ್ತಿಲ್ಲ. ಅಷ್ಟೇ ಅಲ್ಲ 3 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಏಕತೆಯ ಪ್ರತಿಮೆಯನ್ನು ಕೂಡ ಚೀನಾದಿಂದಲೇ ನಿರ್ಮಿಸಲಾಯಿತು. ಅಂತರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನವನ್ನು ಟೀಕಿಸುವ ಮೋದಿ ಚೀನಾದ ಬಗ್ಗೆ ಮಾತೆತ್ತುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಮಾರ್ಚ್ 12ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರನ್ನು ಟೀಕಿಸುವ ಭರದಲ್ಲಿ 'ಅಜರ್‌ ಮಸೂದ್‌ ಜೀ' ಎಂದು ಕರೆದು ಎಡವಟ್ಟು ಮಾಡಿಕೊಂಡಿದ್ದರು. ಕಂದಹಾರ್‌ ವಿಮಾನ ಅಪಹರಣ ಪ್ರಸ್ತಾಪಿಸಿ, ''ಈ ಹಿಂದಿನ ಎನ್‌ಡಿಎ ಸರಕಾರದ ಅವಧಿಯಲ್ಲಿ ಅಜಿತ್‌ ಧೋವಲ್‌ ಅವರು 'ಮಸೂದ್‌ ಅಜರ್‌ ಜೀ' ಜತೆ ವಿಮಾನದಲ್ಲಿ ಅಫಘಾನಿಸ್ತಾನದ ರಾಜಧಾನಿ ಕಂದಹಾರ್‌ಗೆ ತೆರಳಿ ಆತನನ್ನು ಬಿಟ್ಟು ಬಂದರು,'' ಎಂದು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ