ಆ್ಯಪ್ನಗರ

ಪೊಲೀಸರನ್ನೇ ಸುಡಲು ಮುಂದಾದ ಇರಾನಿ ಗ್ಯಾಂಗ್‌

ಸರಗಳ್ಳರನ್ನು ಹಿಡಿಯಲು ಹೋದ ಪೊಲೀಸರ ಮೇಲೆ ತಂಡದ ಮಹಿಳೆಯರು ದಾಳಿ ನಡೆಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 10 Apr 2017, 2:21 pm
ಕಲ್ಯಾಣ್‌: ಕುಖ್ಯಾತ ಇರಾನಿ ಗ್ಯಾಂಗ್‌ನ ಸರಗಳ್ಳರನ್ನು ಹಿಡಿಯಲು ಹೋದ ಪೊಲೀಸರ ಮೇಲೆ ತಂಡದ ಮಹಿಳೆಯರು ದಾಳಿ ನಡೆಸಿದ್ದು, ಪೇದೆಯನ್ನು ಜೀವಂತ ಸುಡಲು ಯತ್ನಿಸಿದ ಘಟನೆ ನಡೆದಿದೆ.
Vijaya Karnataka Web mob attacks 26 cops chasing snatchers tries to set 1 ablaze
ಪೊಲೀಸರನ್ನೇ ಸುಡಲು ಮುಂದಾದ ಇರಾನಿ ಗ್ಯಾಂಗ್‌


ಡಿಸಿಪಿ ಸುನಿಲ್‌ ಭಾರಾದ್ವಜ್‌ ಅವರ ನೇತೃತ್ವದ ತಂಡ ಅಂಬಿವ್ಲಿ ಬಳಿ ಭಾನುವಾರ ಮುಂಜಾನೆ ಇರಾನಿ ಗ್ಯಾಂಗ್‌ನ ಸಮಿರ್‌ ಇರಾನಿ ಹಾಗೂ ಹಸನ್‌ ಇರಾನಿ ಸಯ್ಯದ್‌ ಎಂಬವರನ್ನು ಬಂಧಿಸಿದ್ದರು. ಆದರೆ, ದಾರಿ ಮಧ್ಯದಲ್ಲಿ ಪೊಲೀಸರು ಹಾಗೂ ಇಬ್ಬರು ಆರೋಪಿಗಳ ನಡುವೆ ಮಾತನಿ ಚಕಮಕಿ ನಡೆದಿದೆ. ಈ ವೇಳೆ ತಪ್ಪಿಸಿಕೊಂಡ ಆರೋಪಿಗಳೂ ಅಂಬಿವ್ಲಿ ಕಡೆ ಓಡಿದ್ದರು.

ಕಳ್ಳರ ಬೆನ್ನಟ್ಟಿ ಬಂದ ಪೊಲೀಸರ ಮೇಲೆ ಮುಗಿಬಿದ್ದ 25 ಮಂದಿಯ ತಂಡ, ಕಲ್ಲು ಹೊಡೆದು ಪೊಲೀಸರನ್ನೇ ಅಟ್ಟಾಡಿಸಿಕೊಂಡು ಥಳಿಸಿದ್ದಾರೆ. ನಂತರ ಪೊಲೀಸ್‌ ಪೇದೆ ದಾಜೀ ಗಾಯಕ್‌ವಾಡ್‌ ಎಂಬವರ ಮೇಲೆ ಸೀಮೆ ಎಣ್ಣೆಯಿಂದ ಸುರಿದು ಕೊಲ್ಲಲು ಯತ್ನಿಸಿದ್ದಾರೆ.

'ಪೇದೆ ನೀಡಿದ ದೂರಿನ ಆದಾರದಲ್ಲಿ 25 ಮಂದಿಯ ವಿರುದ್ಧವು ಪ್ರಕರಣ ದಾಖಲಿಸಲಾಗಿದೆ,' ಎಂದು ಖದಕ್‌ಪಾಡಾದ ಎನಿಸಿ ಅಜಿತ್‌ ಜಾಧವ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ