ಆ್ಯಪ್ನಗರ

ಪ್ರಧಾನಿ ಮೋದಿಗಾಗಿ ನವೀಕರಣಗೊಂಡ ಗುಹೆ

ಪ್ರಧಾನಿ ನರೇಂದ್ರ ಮೋದಿ ಮುಂದಿನ ತಿಂಗಳು ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಯೋಗ ಮತ್ತು ಧ್ಯಾನ ಕೈಗೊಳ್ಳಲಿದ್ದಾರೆ. ಅವರಿಗಾಗಿ ಅಲ್ಲಿನ ಗುಹೆಯನ್ನು ನವೀಕರಿಸಲಾಗಿದ್ದು, ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ.

Navbharat Times 17 Sep 2018, 5:28 pm
ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಮುಂದಿನ ತಿಂಗಳು ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಯೋಗ ಮತ್ತು ಧ್ಯಾನ ಕೈಗೊಳ್ಳಲಿದ್ದಾರೆ. ಅವರಿಗಾಗಿ ಅಲ್ಲಿನ ಗುಹೆಯನ್ನು ನವೀಕರಿಸಲಾಗಿದ್ದು, ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ.
Vijaya Karnataka Web modern cave prepared for narendra modi ahead of his visit to kedarnath
ಪ್ರಧಾನಿ ಮೋದಿಗಾಗಿ ನವೀಕರಣಗೊಂಡ ಗುಹೆ


ಗುಹೆಯಲ್ಲಿ ಶೌಚಗೃಹ, ವಿದ್ಯುತ್ ಮತ್ತು ಟೆಲಿಫೋನ್ ಸಂಪರ್ಕ ಸಹಿತ ಎಲ್ಲ ಅಗತ್ಯ ಸೌಲಭ್ಯ ವ್ಯವಸ್ಥೆ ಮಾಡಲಾಗುತ್ತಿದೆ. ಕೇದಾರನಾಥ ಧಾಮದ ಸಮೀಪ ಗರುಡಾಚಟ್ಟಿ ಇದ್ದು, ಅಲ್ಲಿಗೆ ಮೋದಿ ತೆರಳಲು ಎಟಿವಿ ವಾಹನ ಬಳಸಬೇಕಿದೆ. ವಾಹನ ಸಾಗಲು ಅನುಕೂಲವಾಗುವಂತೆ ಸ್ಥಳೀಯಾಡಳಿತ ಎರಡೂವರೆ ಕಿ.ಮೀ ರಸ್ತೆ ಸಿದ್ಧಪಡಿಸಿದೆ.

33 ವರ್ಷದ ಹಿಂದೆ ಪ್ರಧಾನಿ ಮೋದಿ ಹಿಮಾಲಯದಲ್ಲಿ ಯೋಗ ಮತ್ತು ಧ್ಯಾನ ಕೈಗೊಂಡಿದ್ದು, ಈ ಬಾರಿ ಮತ್ತೆ ಯೋಗ ಮತ್ತು ಧ್ಯಾನ ನಡೆಸಲಿದ್ದಾರೆ. ಗುಹೆಯಲ್ಲಿ ಧ್ಯಾನ ನಿರತರಾಗಿದ್ದ ಬಳಿಕ ಬಾಬಾ ಕೇದಾರನಾಥ ದರ್ಶನಕ್ಕೆ ಅವರು 2 ಕಿ.ಮೀ ದೂರ ಬರಿಗಾಲಿನಲ್ಲಿ ನಡೆದುಕೊಂಡು ಹೋಗಿದ್ದರು. ಆರ್‌ಎಸ್‌ಎಸ್ ಸೇರಿದ ಬಳಿಕವೂ ಪ್ರಧಾನಿ ಮೋದಿ ಗುಹೆಗೆ ಭೇಟಿ ನೀಡಿದ್ದರು. ಕಳೆದ ಬಾರಿಯೂ ಅವರು ಕೇದಾರನಾಥ ದರ್ಶನದ ಸಂದರ್ಭ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದರು.

ಮುಂದಿನ ತಿಂಗಳು ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಚೌರಾಬದಿ ತಾಲ್‌ ಸಮೀಪವಿದ್ದ ಹಳೆಯ ಗುಹೆಯನ್ನು ಸ್ಥಳೀಯಾಡಳಿತ ನವೀಕರಿಸಿದ್ದು, 8.5 ಲಕ್ಷ ರೂ. ವೆಚ್ಚ ಮಾಡಿ ವಿವಿಧ ಸೌಲಭ್ಯ ಕಲ್ಪಿಸಿದೆ.

ಮೂಲ ವರದಿ: ನವಭಾರತ್ ಟೈಮ್ಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ