ಆ್ಯಪ್ನಗರ

ಮೋದಿ, ಶಾ ಪ್ರಜಾಪ್ರಭುತ್ವಕ್ಕೆ ಮಾನ್ಯತೆ ನೀಡ್ತಿಲ್ಲ: ದಿಗ್ವಿಜಯ್ ಸಿಂಗ್ ಆಕ್ರೋಶ

ಬಿಜೆಪಿ ಕಾರ್ಯಕರ್ತರಂತೆ ನಡೆದುಕೊಳ್ಳಬೇಡಿ. ಪೊಲೀಸರ ಬಗ್ಗೆ ಇನ್ನೂ ಗೌರವವಿದೆ ಅಂತ ನಾನು ಪೊಲೀಸರಿಗೆ ಹೇಳಿದ್ದೇನೆ. ದಿಗ್ವಿಜಯ್‌ ಸಿಂಗ್‌ರನ್ನು ಬಂಧಿಸಿದ್ದೇಕೆ? ಇವರೇನಾದ್ರು ಯಾರಿಗಾದ್ರು ತೊಂದರೆ ಕೊಡಲು ಹೋಗಿದ್ರಾ ಎಂಬುದನ್ನು ಹೇಳಬೇಕು ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

Vijaya Karnataka 18 Mar 2020, 4:41 pm

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಪ್ರಜಾಪ್ರಭುತ್ವಕ್ಕೆ ಮಾನ್ಯತೆ ನೀಡುತ್ತಿಲ್ಲ. ಅಟಲ್‌ ಬಿಹಾರಿ ವಾಜಪೇಯಿಯಂತ ನಾಯಕರು ಬಿಜೆಪಿಯಲ್ಲಿದ್ದರು. ಆದರೆ ಇಂದು ಆ ಪಕ್ಷದಲ್ಲಿ ಇವರದ್ದೇ ಕಾರುಬಾರಾಗಿದೆ ಎಂದು ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web Karnataka Congress


ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಕಚೇರಿಯಲ್ಲಿ ದಿಗ್ವಿಜಯ್‌ ಸಿಂಗ್‌, ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಬೆಂಗಳೂರಿನಲ್ಲಿರೋ ಮಧ್ಯ ಪ್ರದೇಶದ ಕಾಂಗ್ರೆಸ್‌ ಶಾಸಕರ ಭೇಟಿಗೆ ನಮ್ಮ ಪಕ್ಷದ ನಾಯಕರಿಗೆ ಅವಕಾಶ ಕೊಟ್ಟಿಲ್ಲ. ದಿಗ್ವಿಜಯ್‌ ಸಿಂಗ್ ಹಾಗೂ ಇತರ ನಮ್ಮ ಮುಖಂಡರನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.‌ ಇದು ಎಷ್ಟರಮಟ್ಟಿಗೆ ಸರಿ? ಎಂದು ಡಿಕೆ ಶಿವಕುಮಾರ್‌ ಪ್ರಶ್ನಿಸಿದರು.

ರೆಸಾರ್ಟ್‌ ಮುಂದಿರುವ ಬಿಜೆಪಿಗರನ್ನು ಖಾಲಿ ಮಾಡಿಸದಿದ್ದರೆ ನಾವೇ ಹೊರದಬ್ಬುತ್ತೇವೆ: ಪೊಲೀಸರ ವಿರುದ್ಧ ಗುಡುಗಿದ ಡಿಕೆಶಿ

“ಬಿಜೆಪಿ ಕಾರ್ಯಕರ್ತರಂತೆ ನಡೆದುಕೊಳ್ಳಬೇಡಿ. ಪೊಲೀಸರ ಬಗ್ಗೆ ಇನ್ನೂ ಗೌರವವಿದೆ ಅಂತ ನಾನು ಪೊಲೀಸರಿಗೆ ಹೇಳಿದ್ದೇನೆ. ದಿಗ್ವಿಜಯ್‌ ಸಿಂಗ್‌ರನ್ನು ಬಂಧಿಸಿದ್ದೇಕೆ? ಇವರೇನಾದ್ರು ಯಾರಿಗಾದ್ರು ತೊಂದರೆ ಕೊಡಲು ಹೋಗಿದ್ರಾ ಹೇಳಬೇಕು. ಬಿಜೆಪಿ ಸರಕಾರ, ಮುಖಂಡರ ವರ್ತನೆ ಜನರಿಗೆ ಗೊತ್ತಾಗ್ತಿದೆ," ಎಂದು ಅವರು ಕಿಡಿಕಾರಿದರು.

ನಂತರ ಮಾತನಾಡಿದ ದಿಗ್ವಿಜಯ್‌ ಸಿಂಗ್‌, “ವ್ಯಾಪಂ ಕೇಸ್, ಅಕ್ರಮ ಹಣಕಾಸು ವ್ಯವಹಾರ, ಹನಿಟ್ರ್ಯಾಪ್ ಪ್ರಕರಣಗಳು ಮಧ್ಯ ಪ್ರದೇಶದನಲ್ಲಿ ನಡೆದಿವೆ. ಇದೆಲ್ಲದರ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ. ಮೈನಿಂಗ್ ಮಾಫಿಯಾಗೆ ಕಮಲ್‌ನಾಥ್ ಕಡಿವಾಣ ಹಾಕಿದ್ದರು. ಆಡಳಿತದಲ್ಲಿ ಪಾರದರ್ಶಕತೆಯನ್ನು ತಂದಿದ್ದರು. ಹೀಗಾಗಿ ಮೊದಲ ದಿನದಿಂದಲೂ ಅವರ ಸರಕಾರಕ್ಕೆ ಬಿಜೆಪಿ ವಿರೋಧವಿತ್ತು,” ಎಂದು ಮಾಹಿತಿ ನೀಡಿದರು.

ಬಿಜೆಪಿ ಸರ್ಕಾರದ ಉಸ್ತುವಾರಿಯಲ್ಲಿ ಕೈ ಶಾಸಕರ ಅಕ್ರಮ ಬಂಧನ, ಸಿದ್ದರಾಮಯ್ಯ ಆರೋಪ

ಸರಕಾರ ರಚನೆ ಆದಂದಿನಿಂದಲೂ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು. ಕರ್ನಾಟಕದಲ್ಲೂ ಕುದುರೆ ವ್ಯಾಪಾರ ಮಾಡಿದ್ದು ಗೊತ್ತಿದೆ. ಅದನ್ನು ಬಿಜೆಪಿ ಈಗಲೂ ಮುಂದುವರಿಸಿಕೊಂಡು ಬರುತ್ತಿದೆ. ನಮ್ಮದು ಸಿದ್ಧಾಂತದ ಮೇಲೆ ನಂಬಿಕೆಯಿಟ್ಟಿರುವ ಪಕ್ಷ. ಮಹಾತ್ಮಾ ಗಾಂಧಿ, ನೆಹರು ಸಿದ್ಧಾಂತದ ಮೇಲೆ ನಿಂತಿರುವ ಪಕ್ಷ ಎಂದು ಅವರು ವಿವರಿಸಿದರು.

“ದೇಶದಲ್ಲಿ ಇಂದು ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಉದ್ಯೋಗವಿಲ್ಲದೆ ಜನ ಪರದಾಡುತ್ತಿದ್ದಾರೆ. ಕೊರೊನಾ ವೈರಸ್ ಇಂದು ತಲ್ಲಣವನ್ನೇ ಮೂಡಿಸಿದೆ. ಇದರ ಬಗ್ಗೆ ಗಮನ ಹರಿಸೋಕೆ ಪ್ರಧಾನಿಗೆ ಬಿಡುವಿಲ್ಲ. ಬಿಜೆಪಿ ನಾಯಕರು ಶಾಸಕರ ಖರೀದಿಗೆ ಒತ್ತು ನೀಡಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ಬಂದ ಸರಕಾರಗಳನ್ನು ಉರುಳಿಸುತ್ತಿದ್ದಾರೆ," ಎಂದು ಬಿಜೆಪಿ ನಾಯಕರ ವಿರುದ್ಧ ದಿಗ್ವಿಜಯ್ ಸಿಂಗ್ ಆಕ್ರೋಶ ಹೊರಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ