ಆ್ಯಪ್ನಗರ

ಮೋದಿ-ಶಾ ದೇಶಕ್ಕೆ ಮಾರಕ ಜೋಡಿ: ಕಾಂಗ್ರೆಸ್‌

ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಜೋಡಿ ದೇಶಕ್ಕೆ ಮಾರಕ ಎಂಬುದು ಈಗ ಜನರಿಗೆ ಗೊತ್ತಾಗಿದೆ ಎಂದಿರುವ ಕಾಂಗ್ರೆಸ್‌, ಪ್ರಧಾನಿ ಮೋದಿ ಸರಕಾರದ ನಾಲ್ಕು ವರ್ಷಗಳ ಆಡಳಿತವನ್ನು 'ವಿಶ್ವಾಸಘಾತುಕತನ, ಮೋಸಗಾರಿಕೆ, ದ್ವೇಷ ಮತ್ತು ಸುಳ್ಳು'ಗಳ ಯುಗ ಎಂದು ಬಣ್ಣಿಸಿದೆ.

Vijaya Karnataka 27 May 2018, 7:23 am
ಹೊಸದಿಲ್ಲಿ: ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಜೋಡಿ ದೇಶಕ್ಕೆ ಮಾರಕ ಎಂಬುದು ಈಗ ಜನರಿಗೆ ಗೊತ್ತಾಗಿದೆ ಎಂದಿರುವ ಕಾಂಗ್ರೆಸ್‌, ಪ್ರಧಾನಿ ಮೋದಿ ಸರಕಾರದ ನಾಲ್ಕು ವರ್ಷಗಳ ಆಡಳಿತವನ್ನು 'ವಿಶ್ವಾಸಘಾತುಕತನ, ಮೋಸಗಾರಿಕೆ, ದ್ವೇಷ ಮತ್ತು ಸುಳ್ಳು'ಗಳ ಯುಗ ಎಂದು ಬಣ್ಣಿಸಿದೆ.
Vijaya Karnataka Web congress


ಮೋದಿ ಸರಕಾರ ನಾಲ್ಕು ವರ್ಷದ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ ನಾಯಕರು ಹೊಸದಿಲ್ಲಿಯಲ್ಲಿ ಶನಿವಾರ 'ಇಂಡಿಯಾ ಬಿಟ್ರೇಯ್ಡ…' (ಭಾರತಕ್ಕೆ ವಂಚನೆ) ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆ ಮಾಡಿದರು. ಇಂಗ್ಲೀಷ್‌ ಮತ್ತು ಹಿಂದಿ ಆವೃತ್ತಿಯಲ್ಲಿ ಬಿಡುಗಡೆಯಾದ ಈ ಪುಸ್ತಕದಲ್ಲಿ ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್‌ 40 ಪ್ರಶ್ನೆಗಳನ್ನು ಕೇಳುವ ಮೂಲಕ ಆಡಳಿತದ ಮೌಲ್ಯಮಾಪನ ಮಾಡಿದೆ.

ಪುಸ್ತಕ ಬಿಡುಗಡೆ ಸಂದರ್ಭ ಬಿಜೆಪಿ ಹಾಗೂ ಮೊದಿ ಸರಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್‌ ನಾಯಕರಾದ ಗುಲಾಂ ನಬಿ ಅಜಾದ್‌, ಅಶೋಕ್‌ ಗೆಹ್ಲೋಟ್‌ ಮತ್ತು ರಣದೀಪ್‌ ಸುರ್ಜೇವಾಲ, ''ಎನ್‌ಡಿಎ ಆಡಳಿತದಲ್ಲಿ ಭಯ, ದ್ವೇಷದ ವಾತಾವರಣ ಸೃಷ್ಟಿಯಾಗಿದೆ,'' ಎಂದರು. ''ವಿಶ್ವಾಸಘಾತುಕತನ, ಮೋಸಗಾರಿಕೆ, ದ್ವೇಷ ಮತ್ತು ಸುಳ್ಳು- ಎಂಬ 4 ಶಬ್ದಗಳಲ್ಲಿ ಮೋದಿ ಸರಕಾರದ ನಾಲ್ಕು ವರ್ಷಗಳನ್ನು ವರ್ಣಿಸಬಹುದು,'' ಎಂದು ಸುರ್ಜೇವಾಲ ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ