ಆ್ಯಪ್ನಗರ

ಪಾಕಿಸ್ತಾನಿಗಳಿಗೂ ದೇಶದ 'ಪೌರತ್ವ' ಭರವಸೆ ನೀಡಿ: ಕಾಂಗ್ರೆಸ್‌ಗೆ ಮೋದಿ ಸವಾಲು

ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಅನಗತ್ಯ ಭಯ ಸೃಷ್ಟಿಸುತ್ತಿರುವ ಕಾಂಗ್ರೆಸ್‌ ಪಾಕಿಸ್ತಾನಿಗಳೆಲ್ಲರಿಗೂ ಭಾರತದ ಪೌರತ್ವ ಕಲ್ಪಿಸುವ ಭರವಸೆ ನೀಡಲಿ,'' ಎಂದು ಬಹಿರಂಗ ಸವಾಲು ಹಾಕಿದರು.

Vijaya Karnataka Web 17 Dec 2019, 10:09 pm
ರಾಂಚಿ: ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಅನಗತ್ಯ ಭಯ ಸೃಷ್ಟಿಸುತ್ತಿರುವ ಕಾಂಗ್ರೆಸ್‌ ಪಾಕಿಸ್ತಾನಿಗಳೆಲ್ಲರಿಗೂ ಭಾರತದ ಪೌರತ್ವ ಕಲ್ಪಿಸುವ ಭರವಸೆ ನೀಡಲಿ,'' ಎಂದು ಬಹಿರಂಗ ಸವಾಲು ಹಾಕಿದರು.
Vijaya Karnataka Web modi


ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿಹಿಂಸಾತ್ಮಕ ಪ್ರತಿಟನೆಗಳು ಮುಂದುವರಿದಿರುವ ನಡುವೆಯೇ ಪ್ರಧಾನಿ ಅವರು ಜನರ ಕಳವಳ ನಿವಾರಿಸುವ ಪ್ರಯತ್ನ ಮಾಡಿದರು. ಜಾರ್ಖಂಡ್‌ನ ಭೋಗ್ನದಿಯಾದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ''ಈ ಕಾಯಿದೆಯಿಂದ ಭಾರತೀಯರಿಗೆ ಯಾವುದೇ ತೊಂದರೆ ಇಲ್ಲ. ವಿದೇಶಿ ನಿರಾಶ್ರಿತರು, ಅದರಲ್ಲೂನಿರ್ದಿಷ್ಟ ಕೋಮಿನ ಅಕ್ರಮ ವಲಸಿಗರಿಗೆ ಮಾತ್ರ ಇದು ಅನ್ವಯವಾಗುತ್ತದೆ. ಹೀಗಿರುವಾಗ ಭಯ ಏಕೆ,'' ಎಂದು ಪ್ರಶ್ನಿಸಿದರು.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನದಿಂದ ಧರ್ಮದ ಕಾರಣಕ್ಕೆ ಓಡಿ ಬಂದವರಿಗೆ ಈ ಕಾಯಿದೆ ಅನ್ವಯಿಸುತ್ತದೆ. ನಿರಾಶ್ರಿತರಿಗೆ ನೆಲೆ ಕಲ್ಪಿಸಲಾಗುತ್ತಿದೆ. ಆದರೆ, ತಮ್ಮದೇ ಸ್ವಂತ ದೇಶ ಇದ್ದೂ ಅದನ್ನು ತೊರೆದು ಬಂದವರನ್ನು ಪೋಷಿಸುವ ಅಗತ್ಯ ಇಲ್ಲಎಂದರು. ''ಯಾರಿಗೆ ಪೌರತ್ವ ನೀಡಬೇಕು, ಯಾರಿಗೆ ನೀಡಬಾರದು ಎನ್ನುವ ವಿಷಯದಲ್ಲಿನಮ್ಮ ನಿರ್ಧಾರ ಅಚಲವಾಗಿದೆ,'' ಎಂದೂ ಪ್ರಧಾನಿ ಸ್ಪಷ್ಟಪಡಿಸಿದರು.

ಟೈಮ್ಸ್‌ ನೌ ಸಂದರ್ಶನ: ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯುವ ಮಾತೇ ಇಲ್ಲ: ಅಮಿತ್‌ ಶಾ ಸ್ಪಷ್ಟೋಕ್ತಿ

ನಗರ ನಕ್ಸಲರ ಪಿತೂರಿ: ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶ ಇದೆ. ಆದರೆ, ಅದರ ಹೆಸರಲ್ಲಿ ಹಿಂಸೆಗೆ ಇಳಿಯುವುದು ಸರಿಯಲ್ಲ. ವಿದ್ಯಾರ್ಥಿಗಳು ತಮ್ಮ ಕುಂದುಕೊರೆತೆ, ಭಿನ್ನಾಭಿಪ್ರಾಯ ಏನೇ ಇದ್ದರೂ ಅದನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಸರಕಾರ ನಿಮ್ಮ ಅಭಿಪ್ರಾಯ ಕೇಳಲು ಸಿದ್ಧವಿದೆ ಎಂದು ಪ್ರಧಾನಿ ತಿಳಿಸಿದರು.

ದೇಶದ ಮುಸ್ಲಿಮರಿಗೂ ‘ಸಿಎಎ’ಗೂ ಏನು ಸಂಬಂಧ? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

''ದೇಶದ ಕಾಲೇಜುಗಳಲ್ಲಿಓದುತ್ತಿರುವ ವಿದ್ಯಾರ್ಥಿ ಸಮುದಾಯದ ಜತೆಗೆ ಚರ್ಚೆಗೆ ಸರಕಾರ ಸಿದ್ಧವಿದೆ. ಆದರೆ ಕೆಲವು ಪಕ್ಷಗಳು, ನಗರ ನಕ್ಸಲರು ನಿಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುತ್ತಿದ್ದಾರೆ. ಅದನ್ನು ಅರ್ಥ ಮಾಡಿಕೊಂಡು ಹಿಂಸಾತ್ಮಕ ಪ್ರತಿಭಟನೆ ಕೈ ಬಿಡಿ,'' ಎಂದು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ