ಆ್ಯಪ್ನಗರ

5 ತಿಂಗಳ ಮಗುವಿನ ಚಿಕಿತ್ಸೆಗೆ ಮಿಡಿದ ಪ್ರಧಾನಿ ಹೃದಯ: ಪೋಷಕರಿಗೆ 6 ಕೋಟಿ ಹೊರೆ ಇಳಿಸಿದ ಮೋದಿ

ಮುಂಬಯಿ ನಗರದ ತೀರಾ ಕಾಮತ್‌ ಕಾಯಿಲೆ ಪೀಡಿತ ಮಗು. ಸ್ಪೈನಲ್‌ ಮಸ್ಕ್ಯೂಲರ್‌‌ ಅಟ್ರೋಫಿ ಎನ್ನುವ ಮಾಂಸಖಂಡ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿರುವ ಈ ಮಗುವಿಗೆ ದುಬಾರಿ ಚಿಕಿತ್ಸೆ ಅಗತ್ಯ ಇದೆ. ಅಂದಾಜು 16 ಕೋಟಿ ರೂ. ವೆಚ್ಚ ತಗುಲಬಹುದು ಎಂದು ವೈದ್ಯರು ತಿಳಿಸಿದ್ದಾರೆ.

Vijaya Karnataka Web 12 Feb 2021, 2:28 pm
ಮುಂಬಯಿ: ಮಾಂಸಖಂಡ ದೌರ್ಬಲ್ಯದ ಕಾಯಿಲೆಯಿಂದ ಬಳಲುತ್ತಿರುವ ಮುಂಬಯಿನ ಐದು ತಿಂಗಳ ಬಾಲಕಿಯ ಚಿಕಿತ್ಸೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಔಷಧಗಳ ಮೇಲಿನ ಆಮದು ಶುಲ್ಕ ರದ್ದು ಮಾಡುವ ಮೂಲಕ ನೆರವಾಗಿದ್ದಾರೆ.
Vijaya Karnataka Web PM Modi Teera Kamat


ಮುಂಬಯಿ ನಗರದ ತೀರಾ ಕಾಮತ್‌ ಕಾಯಿಲೆ ಪೀಡಿತ ಮಗು. ಸ್ಪೈನಲ್‌ ಮಸ್ಕ್ಯೂಲರ್‌‌ ಅಟ್ರೋಫಿ ಎನ್ನುವ ಮಾಂಸಖಂಡ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿರುವ ಈ ಮಗುವಿಗೆ ದುಬಾರಿ ಚಿಕಿತ್ಸೆ ಅಗತ್ಯ ಇದೆ. ಅಂದಾಜು 16 ಕೋಟಿ ರೂ. ವೆಚ್ಚ ತಗುಲಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಈ ಬೃಹತ್‌ ಮೊತ್ತದಲ್ಲಿ 23% ಆಮದು ಸುಂಕ ಮತ್ತು 12% ಜಿಎಸ್‌ಟಿ ಸೇರಿ 6 ಕೋಟಿ ರೂ. ಆಗುತ್ತದೆ. ವೈದ್ಯಕೀಯ ಖರ್ಚು ಎಷ್ಟೇ ದುಬಾರಿಯಾದರೂ ಮಗಳನ್ನು ಉಳಿಸಿಕೊಳ್ಳುವ ಹಠಕ್ಕೆ ಬಿದ್ದಿರುವ ಪೋಷಕರು, ಆಮದು ಔಷಧಗಳ ಮೇಲಿನ 6 ಕೋಟಿ ರೂ. ಶುಲ್ಕ ಮನ್ನಾ ಮಾಡಲು ಸಾಮಾಜಿಕ ಮಾಧ್ಯಮ ತಾಣಗಳ ಮೂಲಕ ಪ್ರಧಾನಿ ಮೋದಿ ಅವರನ್ನು ಕೋರಿದ್ದರು.

ರಾಜ್ಯ ಸುಡುತ್ತಿರುವಾಗ ಇಲ್ಲಿದ್ದು ನಾನೇನು ಮಾಡಲಿ?: ರಾಜ್ಯಸಭೆಗೆ ಗುಡ್‌ಬೈ ಹೇಳಿದ ಟಿಎಂಸಿ ಸಂಸದ!

ಈ ನಡುವೆ, ಮಗುವಿನ ಸ್ಥಿತಿಗೆ ಮಿಡಿದ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್‌ ಕೂಡ ಪ್ರಧಾನಿಗೆ ಪತ್ರ ಬರೆದು ಶುಲ್ಕ ವಿನಾಯಿತಿ ನೀಡುವಂತೆ ವಿನಂತಿಸಿದ್ದರು. ಇದೆಲ್ಲವನ್ನೂ ಗಮನಿಸಿದ ಪ್ರಧಾನಿ, ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾಔಷಧಗಳ ಆಮದು ಶುಲ್ಕವನ್ನು ತಕ್ಷಣ ರದ್ದುಗೊಳಿಸಿ ಆದೇಶ ಮಾಡಿದ್ದಾರೆ. ಇದರಿಂದ ನೆಮ್ಮದಿಯ ನಿಟ್ಟುಸಿರುಬಿಟ್ಟಿರುವ ಬಾಲಕಿಯ ಪೋಷಕರಾದ ಪ್ರಿಯಾಂಕಾ ಮತ್ತು ಮಿಹಿರ್‌ ಕಾಮತ್‌, ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜಾಲತಾಣಗಳಲ್ಲೂ ಪ್ರಧಾನಿ ಕ್ರಮಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ