ಆ್ಯಪ್ನಗರ

ಕೇಂದ್ರದ ಪ್ಯಾಕೇಜ್‌ನ್ನು 'ಜುಮ್ಲಾ ಪ್ಯಾಕೇಜ್' ಎಂದು ಕುಹುಕವಾಡಿದ ಕಾಂಗ್ರೆಸ್!

ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ.ಗಳ ಹೆಸರಲ್ಲಿ ಜನರ ಕಣ್ಣಿಗೆ ಮಣ್ಣೆರಚುವ ತಂತ್ರಕ್ಕೆ ಮೊರೆ ಹೋಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಇದು ಮೋದಿ ಸರ್ಕಾರದ 'ಜುಮ್ಲಾ ಪ್ಯಾಕೇಜ್' ಎಂದು ಕುಹುಕವಾಡಿದೆ.

Vijaya Karnataka Web 14 May 2020, 8:11 pm
ನವದೆಹಲಿ: ಮಾರಕ ಕೊರೊನಾ ವೈರಸ್ ನೀಡಿರುವ ಆರ್ಥಿಕ ಹೊಡೆತದಿಂದ ತಪ್ಪಿಸಿಕೊಳ್ಳಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬರೋಬ್ಬರಿ 20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದೆ.
Vijaya Karnataka Web migrant workers
ಸಂಗ್ರಹ ಚಿತ್ರ


ಒಟ್ಟು ಎರಡು ಹಂತದಲ್ಲಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿರುವ ಕೇಂದ್ರ ಸರ್ಕಾರ, ಎಲ್ಲ ಜನ ಸಮುದಾಯಕ್ಕೆ ಅನುಕೂಲವಾಗುವಂತ ಯೋಜನೆಗಳನ್ನು ರೂಪಿಸಿದೆ.

ಆದರೆ ಕೇಂದ್ರ ಸರ್ಕಾರದ ಈ ವಿಶೇಷ ಆರ್ಥಿಕ ಪ್ಯಾಕೇಜ್‌ನ್ನು 'ಜುಮ್ಲಾ ಪ್ಯಾಕೇಜ್'(ಪೊಳ್ಳು ಭರವಸೆಯ ಪ್ಯಾಕೇಜ್) ಎಂದು ಕಾಂಗ್ರೆಸ್ ಕುಹುಕವಾಡಿದೆ.

ಆತ್ಮ ನಿರ್ಭರ ಭಾರತ ಸಂಕಲ್ಪ: 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ!

ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ.ಗಳ ಹೆಸರಲ್ಲಿ ಜನರ ಕಣ್ಣಿಗೆ ಮಣ್ಣೆರಚುವ ತಂತ್ರಕ್ಕೆ ಮೊರೆ ಹೋಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೇ ಈ 20 ಲಕ್ಷ ಕೋಟಿ ರೂ.ಗಳಲ್ಲಿ ಬಡವರ ಕೈಗೆ ಒಂದೂ ನಯಾ ಪೈಸೆಯೂ ದೊರಕದು ಹರಿಹಾಯ್ದಿದೆ.

Video: ವಿಕೆ ಸುದ್ದಿ ಸಮಗ್ರ: ದಿನದ ಟಾಪ್‌ 10 ಸುದ್ದಿಗಳ ರೌಂಡ್‌ ಅಪ್‌
ದೇಶದ ರಸ್ತೆಗಳಲ್ಲಿ ಲಕ್ಷಾಂತರ ಕಾರ್ಮಿಕರು ಅನ್ನ ಆಹಾರವಿಲ್ಲದೇ ಪರದಾಡುತ್ತಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ನೆಲ ಕಚ್ಚಿದೆ. ಇದಕ್ಕೆಲ್ಲಾ ಪರಿಹಾರ ಕೇಳಿದರೆ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಎಂಬ ಕನಸನ್ನು ಮೋದಿ ಸರ್ಕಾರ ತೋರಿಸುತ್ತದೆ ಎಂದು ಕಾಂಗ್ರೆಸ್ ಹರಿಹಾಯ್ದಿದೆ.

ಆರ್ಥಿಕತೆ ಮೇಲೆತ್ತಲು ಮೋದಿ ಸರ್ಕಾರದ ಹೊಸ ಸೂತ್ರ: ಏನಿದು RRR ಪ್ಲ್ಯಾನ್?

ಅಲ್ಲದೇ 20 ಲಕ್ಷ ಕೋಟಿ. ರೂ. ಪ್ಯಾಕೇಜ್ ಅಸಲಿಯತ್ತೇನು ಎಂಬುದರ ಪಟ್ಟಿ ಮಾಡಿರುವ ಕಾಂಗ್ರೆಸ್, ಇದು ಮೋದಿ ಸರ್ಕಾರದ 'ಜುಮ್ಲಾ ಪ್ಯಾಕೇಜ್' ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ