ಆ್ಯಪ್ನಗರ

ಪಿಎಂ ಕಿಸಾನ್ ಯೋಜನೆ ವಿಸ್ತರಣೆ: 15 ಕೋಟಿ ಕುಟುಂಬಗಳಿಗೆ ಲಾಭ

ಸಂಪೂರ್ಣ ಕೇಂದ್ರ ಸರಕಾರದ್ದೇ ಯೋಜನೆಯಾಗಿರುವ ಪಿಎಂ-ಕಿಸಾನ್‌ ಪೆನ್ಷನ್‌ ಯೋಜನೆಯನ್ನು (ಎಸ್‌ಎಂಎಫ್‌) ಸಚಿವ ಸಂಪುಟ ಮೊದಲ ಸಭೆಯಲ್ಲೇ ಅನುಮೋದಿಸಿದೆ. ಈ ಯೋಜನೆ ಸಂಪೂರ್ಣ ಐಚ್ಛಿಕವಾಗಿದ್ದು, ದೇಶದ ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಂಚಣಿ ನೀಡುವ ಯೋಜನೆ ಇದಾಗಿದೆ. ಈ ವರ್ಗದ 18ರಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದ್ದು, ದೇಣಿಗೆ ಸಲ್ಲಿಸಬಹುದಾಗಿದೆ. ಆ ಮೂಲಕ 60 ವರ್ಷ ವಯಸ್ಸಿನ ಬಳಿಕ ಮಾಸಿಕ ಕನಿಷ್ಠ 3,000 ರೂ.ಗಳ ಪಿಂಚಣಿ ಪಡೆಯಲಿದ್ದಾರೆ.

Times Now 31 May 2019, 9:16 pm
ಹೊಸದಿಲ್ಲಿ: ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯನ್ನು ಭೂಮಿಯ ಮಿತಿಯನ್ನು ಪರಿಗಣಿಸದೆ ಎಲ್ಲ ರೈತರಿಗೂ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
Vijaya Karnataka Web Kisan Samman Yojana


ಎರಡನೇ ಅವಧಿಗೆ ಪ್ರಧಾನಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಶುಕ್ರವಾರ ಖಾತೆಗಳ ಹಂಚಿಕೆ ಮಾಡಿದ್ದಾರೆ. ಅಮಿತ್ ಶಾ ಅವರಿಗೆ ಗೃಹ ಖಾತೆ, ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು ಖಾತೆಯಂತಹ ಅಚ್ಚರಿಯನ್ನೂ ನೀಡಿರುವ ಪ್ರಧಾನಿ, ಮೊದಲ ದಿನವೇ ಸಂಪುಟ ಸಭೆ ನಡೆಸಿ ಮಹತ್ವದ ನಿರ್ಧಾರಗಳನ್ನು ಕೈಗೊಂಡರು.

ಪಿಎಂ-ಕಿಸಾನ್ ಯೋಜನೆ ಅಡಿಯಲ್ಲಿ ಇನ್ನು ದೇಶದ ಎಲ್ಲ ರೈತರೂ ವಾರ್ಷಿಕ 6,000 ರೂ.ಗಳ ಕೊಡುಗೆಯನ್ನು ಪಡೆಯಲಿದ್ದಾರೆ.

2019-20ನೇ ಸಾಲಿನ ಸಂಸತ್ತಿನ ಬಜೆಟ್ ಅಧಿವೇಶನ ಜೂನ್ 17ರಿಂದ ಜುಲೈ 26ರ ವರೆಗೆ ನಡೆಯಲಿದ್ದು, ಜೂನ್ 19ರಂದು ಲೋಕಸಭಾ ಸ್ಪೀಕರ್ ಆಯ್ಕೆ ಮಾಡಲಾಗುತ್ತದೆ.

ಸಂಪೂರ್ಣ ಕೇಂದ್ರ ಸರಕಾರದ್ದೇ ಯೋಜನೆಯಾಗಿರುವ ಪಿಎಂ-ಕಿಸಾನ್‌ ಪೆನ್ಷನ್‌ ಯೋಜನೆಯನ್ನು (ಎಸ್‌ಎಂಎಫ್‌) ಸಚಿವ ಸಂಪುಟ ಮೊದಲ ಸಭೆಯಲ್ಲೇ ಅನುಮೋದಿಸಿದೆ. ಈ ಯೋಜನೆ ಸಂಪೂರ್ಣ ಐಚ್ಛಿಕವಾಗಿದ್ದು, ದೇಶದ ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಂಚಣಿ ನೀಡುವ ಯೋಜನೆ ಇದಾಗಿದೆ. ಈ ವರ್ಗದ 18ರಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದ್ದು, ದೇಣಿಗೆ ಸಲ್ಲಿಸಬಹುದಾಗಿದೆ. ಆ ಮೂಲಕ 60 ವರ್ಷ ವಯಸ್ಸಿನ ಬಳಿಕ ಮಾಸಿಕ ಕನಿಷ್ಠ 3,000 ರೂ.ಗಳ ಪಿಂಚಣಿ ಪಡೆಯಲಿದ್ದಾರೆ.

ಅರ್ಹ ರೈತರು ನೀಡುವಷ್ಟೇ ಪ್ರಮಾಣದ ದೇಣಿಗೆಯನ್ನು ಕೇಂದ್ರ ಸರಕಾರವೂ ಈ ಪಿಂಚಣಿ ನಿಧಿಗೆ ನೀಡಲಿದೆ. ಪಿಂಚಣಿ ಪಡೆಯುತ್ತಿದ್ದ ಚಂದಾದಾರರ ಮರಣದ ಬಳಿಕ ಆ ಫಲಾನುಭವಿಯ ಪತ್ನಿ/ಪತಿಗೆ ಆ ಮೊತ್ತದ ಅರ್ಧದಷ್ಟು (ಎಸ್‌ಎಂಎಫ್‌ ಯೋಜನೆಯ ಚಂದಾದಾರಿಕೆ ಪಡೆದಿರದಿದ್ದರೆ) ಪಿಂಚಣಿ ದೊರೆಯುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್‌ ನಿಧಿಯಡಿ ತನ್ನ ಖಾತೆಗೆ ಬರುವ ಮೊತ್ತವನ್ನೇ (ಪಿಎಂ-ಕಿಸಾನ್) ನೇರವಾಗಿ ತನ್ನ ಪಾಲಿನ ಮಾಸಿಕ ದೇಣಿಗೆಯಾಗಿ ಪಾವತಿಸುವ ಸೌಲಭ್ಯವನ್ನು ರೈತರು ಪಡೆದುಕೊಳ್ಳಲಿದ್ದಾರೆ. ಕನಿಷ್ಠ 5 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೊದಲ ಮೂರು ವರ್ಷಗಳಲ್ಲಿ ಈ ಯೋಜನೆಯ ಫಲ ದೊರೆಯಲಿದೆ.

2019-20ರ ಮಧ್ಯಾವಧಿ ಬಜೆಟ್‌ನಲ್ಲಿ ಪಿಎಂ ಕಿಸಾನ್‌ ಸಮ್ಮಾನ್ ನಿಧಿಗಾಗಿ 75,000 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿತ್ತು. ಆ ಮೊತ್ತದಿಂದಲೇ ಪ್ರತಿ ರೈತರ ಕುಟುಂಬಕ್ಕೆ ತಲಾ 6,000 ರೂ.ಗಳನ್ನು (ಮೂರು ಕಂತಿನಲ್ಲಿ) ನೀಡಲು ನಿರ್ಧರಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ