ಆ್ಯಪ್ನಗರ

ಎನ್‌ಜಿಒ ಹೆಸರಲ್ಲಿ ಮತಾಂತರ!: 18 ಸಾವಿರ ಸಂಸ್ಥೆಗಳ ಬಾಲ ಕತ್ತರಿಸಿದ ಮೋದಿ ಸರ್ಕಾರ

ಹೆಸರಿಗೆ ಮಾತ್ರ ಎನ್‌ಜಿಒಗಳು. ಆದ್ರೆ, ಮಾಡುತ್ತಿದ್ದ ಕೆಲಸ ಮಾತ್ರ ಮತಾಂತರ! ವಿದೇಶೀ ದೇಣಿಗೆ ಸಂಗ್ರಹಿಸಿ, ಅದೇ ಹಣದಿಂದ ಮತಾಂತರದಲ್ಲಿ ತೊಡಗಿದ್ದ 18 ಸಾವಿರ ಎನ್‌ಜಿಒಗಳ ಬಾಲ ಕತ್ತರಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಆರೋಪಿ ಸಂಸ್ಥೆಗಳು ವಿದೇಶೀ ದೇಣಿಗೆ ಸ್ವೀಕರಿಸುವ ಅನುಮತಿಯನ್ನೇ ರದ್ದು ಮಾಡಲಾಗಿದೆ.

Vijaya Karnataka 17 Sep 2019, 7:50 pm
ಹೊಸ ದಿಲ್ಲಿ: ಸರಕಾರೇತರ ಸಂಸ್ಥೆಗಳು ವಿದೇಶಗಳಿಂದ ದೇಣಿಗೆ ಪಡೆಯವುದಕ್ಕೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಕೆಲವು ಎನ್‌ಜಿಒಗಳು ವಿದೇಶಿ ನೆರವನ್ನು ಬಳಸಿಕೊಂಡು ಮತಾಂತರದಲ್ಲಿ ತೊಡಗಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಈ ಕ್ರಮ ಕೈಗೊಳ್ಳಲಾಗಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಹೊಸ ನಿಯಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಅಧಿಸೂಚನೆ ಹೊರಡಿಸಿದೆ.
Vijaya Karnataka Web modi with specs


‘ಕಾವಿಧಾರಿಗಳು ಅತ್ಯಾಚಾರಿಗಳು’: ಮತ್ತೆ ನಾಲಗೆ ಹರಿಬಿಟ್ಟ ದಿಗ್ವಿಜಯ್ ಸಿಂಗ್

ದೇಶದಲ್ಲಿಎನ್‌ಜಿಒಗಳ ಮೂಲಕ ವಿದೇಶಿ ದೇಣಿಗೆ ಹರಿದುಬಂದು, ಮತಾಂತರಕ್ಕೆ ಭಾರಿ ಕುಮ್ಮಕ್ಕು ಸಿಗುತ್ತಿದೆ ಎಂದು ಗುಪ್ತಚರ ದಳ ಹಾಗೂ ಭದ್ರತಾ ಪಡೆ ಸರಕಾರವನ್ನು ಎಚ್ಚರಿಸಿದ್ದವು. ಸ್ಟೂಡೆಂಟ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ, ಜಮಾತ್‌-ಎ-ಇಸ್ಲಾಮಿ ಹಿಂದ್‌ ಸಂಘಟನೆಗಳು ವಿದೇಶಿ ದೇಣಿಗೆ ಬಳಸಿ ಮತಾಂತರ ಮಾಡುತ್ತಿರುವ ಆರೋಪ ವ್ಯಾಪಕವಾಗಿ ಕೇಳಿಬಂದಿತ್ತು. ಅದರಂತೆ ಹಲವು ಎನ್‌ಜಿಒಗಳ ಮೇಲೆ ನಿಗಾ ಇರಿಸಿದ್ದ ಸರಕಾರ ನಿಯಮಾವಳಿಗಳ ಕಡ್ಡಾಯ ಪಾಲನೆ, ಆಡಿಟ್‌ ವರದಿ ಮತ್ತು ವಿಸ್ತೃತ ಮಾಹಿತಿಯೊಂದಿಗೆ ಪರವಾನಗಿ ನವೀಕರಣ ಮಾಡಿಕೊಳ್ಳುವಂತೆ ಸೂಚಿಸಿತ್ತು. ದೇಶದಲ್ಲಿನ 18 ಸಾವಿರಕ್ಕೂ ಅಧಿಕ ಎನ್‌ಜಿಒಗಳು ಎಫ್‌ಸಿಆರ್‌ಎ ನಿಯಮ ಉಲ್ಲಂಘಿಸಿರುವುದು ದೃಢಪಟ್ಟ ಬಳಿಕ, 2014ರಿಂದ ಅವುಗಳ ವಿದೇಶಿ ದೇಣಿಗೆ ಸ್ವೀಕಾರ ಅನುಮತಿಯನ್ನು ಸರಕಾರ ರದ್ದುಗೊಳಿಸಿದೆ.

ಭಾರತದೊಳಗೆ ಉಗ್ರರ ನುಗ್ಗಿಸಲು ಕಳ್ಳದಾರಿ!: ಪಾಕಿಸ್ತಾನ ಸೇನೆಯ ಹೊಸ ಕುತಂತ್ರ ಬಯಲು

ಪರಿಷ್ಕೃತ ನಿಯಮದಲ್ಲಿ ಏನಿದೆ?

1. ಎನ್‌ಜಿಒದ ಪ್ರತಿಯೊಬ್ಬ ಪದಾಧಿಕಾರಿ ಅಥವಾ ನಿರ್ದೇಶಕರು ತಾವು ಮತಾಂತರ, ಕೋಮು ಸೌಹಾರ್ದಕ್ಕೆ ಧಕ್ಕೆ ತಂದ ಪ್ರಕರಣಗಳಲ್ಲಿಆರೋಪಿಯೂ ಅಲ್ಲ, ಶಿಕ್ಷೆಯೂ ಆಗಿಲ್ಲಎಂಬ ಪ್ರಮಾಣಪತ್ರ ನೀಡುವುದು ಕಡ್ಡಾಯ.

2. ಎನ್‌ಜಿಒದ ಪದಾಧಿಕಾರಿ ಅಥವಾ ನಿರ್ದೇಶಕರು ಈ ಹಿಂದೆ ಮತ್ತು ಪ್ರಸ್ತುತ ವಿದೇಶಿ ದೇಣಿಗೆ ಹರಿವು ಬದಲಾವಣೆ ಆಗಿಲ್ಲ/ ವಿದೇಶಿ ದೇಣಿಗೆಯಿಂದ ಹಿಂಸಾಚಾರಕ್ಕೆ ಸಂಚು ಹೆಣೆದ ಆರೋಪಕ್ಕೆ ಗುರಿಯಾಗಿಲ್ಲ ಎಂಬ ಪ್ರಮಾಣಪತ್ರವನ್ನೂ ನೀಡಬೇಕು.

3. ಎನ್‌ಜಿಒ ಸದಸ್ಯರು ವಿದೇಶ ಭೇಟಿ ವೇಳೆ ತುರ್ತು ವೈದ್ಯಕೀಯ ಚಿಕಿತ್ಸೆ ಪಡೆದರೆ ಒಂದು ತಿಂಗಳೊಳಗಾಗಿ ಆ ಕುರಿತು ಸರಕಾರಕ್ಕೆ ರಸೀದಿ ಸಹಿತ ವಿವರಗಳನ್ನು ಸಲ್ಲಿಸಬೇಕು.

ನೆರೆರಾಷ್ಟ್ರ ‘ನಾರ್ಮಲ್’ ಆಗಿದ್ದರೆ ಒಳ್ಳೆಯದು: ಪಾಕ್‌ ಹೆಸರೇಳದೆ ಜಾಡಿಸಿದ ಜೈಶಂಕರ್!

ಹಳೆಯ ನಿಯಮ ಏನಿತ್ತು?

1. ಸರಕಾರೇತರ ಸಂಸ್ಥೆ ಮುಖ್ಯಸ್ಥರು ಅಥವಾ ಯಾರಾದರೂ ಒಬ್ಬ ಪದಾಧಿಕಾರಿ/ನಿರ್ದೇಶಕ ಪ್ರಮಾಣಪತ್ರ ನೀಡಿದ್ದರೆ ಸಾಕಿತ್ತು.

2. ಸಂಸ್ಥೆ ಪರವಾಗಿ ಯಾರಾದರೂ ಒಬ್ಬ ಪದಾಧಿಕಾರಿ ಅಥವಾ ನಿರ್ದೇಶಕ ಈ ಪ್ರಮಾಣಪತ್ರ ನೀಡಿದ್ದರೆ ಸಾಕಿತ್ತು.

3. ಈ ಹಿಂದೆ ವಿದೇಶಗಳಲ್ಲಿ ಪಡೆದ ಚಿಕಿತ್ಸೆಯ ವೆಚ್ಚದ ಕುರಿತು ರಸೀದಿ ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿತ್ತು.

ಇವೆಲ್ಲದರ ನಡುವೆ, ಎನ್‌ಜಿಒಗಳಿಗೆ ಒಂದು ಸಮಾಧಾನದ ಸುದ್ದಿಯೂ ಇದೆ. ಸರಕಾರದ ಅನುಮತಿ ಇಲ್ಲದೇ ವಿದೇಶಗಳಿಂದ ಖಾಸಗಿ ಉಡುಗೊರೆ ಸ್ವೀಕಾರಕ್ಕೆ ಈ ಹಿಂದೆ ವಿಧಿಸಲಾಗಿದ್ದ ಮೌಲ್ಯದ ಮಿತಿಯನ್ನು 25 ಸಾವಿರ ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ವಾಯುಪಡೆಗೆ ಸಿಕ್ತು ಹೊಸ ‘ಅಸ್ತ್ರ’!: ಶತ್ರು 70 ಕಿ.ಮೀ ದೂರದಲ್ಲಿದ್ರೂ ಉಡೀಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ