ಆ್ಯಪ್ನಗರ

ಮೋದಿ ಸರಕಾರದಿಂದ ಭ್ರಷ್ಟ ತೆರಿಗೆ ಅಧಿಕಾರಿಗಳ ಬುಡಕ್ಕೇ ಬೆಂಕಿ!: 22 ನುಂಗುಬಾಕರು ಮನೆಗೆ

ತೆರಿಗೆ ಇಲಾಖೆಯಲ್ಲಿದ್ದ 22 ಭ್ರಷ್ಟ ಅಧಿಕಾರಿಗಳಿಗೆ ಮೋದಿ ಸರ್ಕಾರ ಗೇಟ್ ಪಾಸ್ ಕೊಟ್ಟಿದೆ. ಭ್ರಷ್ಟ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ತಾಕೀತು ಮಾಡಲಾಗಿದೆ. ಇತ್ತೀಚೆಗಷ್ಟೇ ತೆರಿಗೆ ಇಲಾಖೆಯ ೨೭ ಹಿರಿಯ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಲಾಗಿತ್ತು.

TIMESOFINDIA.COM 26 Aug 2019, 4:43 pm
ಹೊಸದಿಲ್ಲಿ: ಭ್ರಷ್ಟರ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ, ಲಂಚ ಪಡೆದ ಆರೋಪ ಹೊತ್ತಿದ್ದ ತೆರಿಗೆ ಇಲಾಖೆಯ 22 ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿದೆ. ನೇರ ತೆರಿಗೆ ವಿಭಾಗದಲ್ಲಿ ಬರುವ ಜಿಎಸ್ ಟಿ ಮತ್ತು ಆಮದು ತೆರಿಗೆ ವಿಭಾಗದ ಅಧಿಕಾರಿಗಳನ್ನು ಭ್ರಷ್ಟಾಚಾರದ ಆರೋಪದಡಿ ಸೇವೆಯಿಂದ ಮುಕ್ತಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ.
Vijaya Karnataka Web curruption


ಜೂನ್ ನಿಂದ ಈವರೆಗೆ ಮೂರು ಬಾರಿ ಭ್ರಷ್ಟ ಅಧಿಕಾರಿಗಳನ್ನು ಸಾಮೂಹಿಕವಾಗಿ ಸೇವೆಯಿಂದಲೇ ನಿವೃತ್ತಿಗೊಳಿಸಲಾಗುತ್ತಿದೆ. ಇತ್ತೀಚೆಗಷ್ಟೇ 27 ಹಿರಿಯ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು

ತೆರಿಗೆ ಇಲಾಖೆಯಲ್ಲಿ ಕೆಲವು ಕಪ್ಪು ಕುರಿಗಳಿವೆ ಎಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿಯವರು ಹೇಳಿದ್ದನ್ನು ಸ್ಮರಿಸಬಹುದಾಗಿದೆ. ಇದೀಗ ಸೇವೆಯಿಂದ ಕಡ್ಡಾಯ ನಿವೃತ್ತರಾಗಿರುವ ಅಧಿಕಾರಿಗಳು, ತಮ್ಮ ಅಧಿಕಾರವನ್ನು ಬಳಸಿ ತೆರಿಗೆದಾರರಿಗೆ ಕಿರುಕುಳ ನೀಡೋದ್ರ ಜೊತೆಗೆ ಪ್ರಾಮಾಣಿಕ ತೆರಿಗೆದಾರರಿಗೂ ಹಿಂಸೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ