ಆ್ಯಪ್ನಗರ

ಸುಗಮ ಕಲಾಪಕ್ಕೆ ಸಹಕಾರ ಕೋರಿ ಜ.30ರಂದು ಮೋದಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ

ಜನವರಿ 29ರಿಂದ ಫೆಬ್ರವರಿ 15ರವರೆಗೆ ಮೊದಲ ಹಂತದ ಅಧಿವೇಶನ ನಡೆಯಲಿದೆ. ಎರಡನೇ ಅವಧಿಯ ಅಧಿವೇಶನವು ಮಾರ್ಚ್ 8ರಿಂದ ಏಪ್ರಿಲ್‌ 8ರವರೆಗೆ ನಡೆಯಲಿದೆ. ಸಂಸತ್‌ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸತ್‌ ಸದಸ್ಯರಿಗೆ ಕೊರೊನಾ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ.

Vijaya Karnataka Web 21 Jan 2021, 7:40 am
ಹೊಸದಿಲ್ಲಿ: ಜನವರಿ 29ರಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭಗೊಳ್ಳಲಿದೆ. ಸುಗಮ ಕಲಾಪಕ್ಕೆ ಪ್ರತಿಪಕ್ಷಗಳ ಸಹಕಾರ ಕೋರಿ, ಪ್ರಧಾನಿ ನರೇಂದ್ರ ಮೋದಿ ಅವರು ಜ.30ರಂದು ಸರ್ವಪಕ್ಷ ನಾಯಕರ ಸಭೆ ಕರೆದಿದ್ದಾರೆ.
Vijaya Karnataka Web PM Modi
ಸಂಗ್ರಹ ಚಿತ್ರ


ಈ ವಿಷಯವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಬುಧವಾರ ತಿಳಿಸಿದ್ದಾರೆ. ಪ್ರತಿ ಬಾರಿಯೂ ಸಂಸತ್‌ ಅಧಿವೇಶನ ಆರಂಭಗೊಳ್ಳುವ ಮುನ್ನ ಕಲಾಪಗಳ ಯಶಸ್ಸಿಗೆ ಪ್ರತಿಪಕ್ಷಗಳ ಬೆಂಬಲ ಕೋರಿ ಸರ್ವಪಕ್ಷ ಸಭೆ ನಡೆಸುವುದು ಪದ್ಧತಿಯಾಗಿದೆ. ಆದರೆ ಈ ಬಾರಿ ಅಧಿವೇಶನ ಆರಂಭಗೊಂಡು ಒಂದು ದಿನದ ತರುವಾಯ ನಡೆಯಲಿದೆ.
‘ಕೊರೊನಾ ಲಸಿಕೆ ಬಗ್ಗೆ ಭಯ ಬೇಡ, ಸಂಪೂರ್ಣ ಸುರಕ್ಷಿತವಾಗಿವೆ’; ಕೇಂದ್ರ ಸರಕಾರ
ಪ್ರಧಾನಿ ಅಧ್ಯಕ್ಷತೆಯಲ್ಲಿ ಜ.30ರಂದು ಸರ್ವಪಕ್ಷ ನಾಯಕರ ಸಭೆ ನಡೆಯಲಿದೆ. ನಾಯಕರ ಸಲಹೆ ಸೂಚನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಕೊರೊನಾ ಬಿಕ್ಕಟ್ಟಿನ ನಡುವೆಯೂ ಕಲಾಪ ಯಶಸ್ವಿಯಾಗಲಿದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೈತರ ಪ್ರತಿಭಟನೆ, ಭಾರತ-ಚೀನಾ ಗಡಿ ಬಿಕ್ಕಟ್ಟಿನ ಪರಿಸ್ಥಿತಿ, ಪೆಟ್ರೋಲ್‌ ಮತ್ತು ಡೀಸೆಲ್‌, ಅಡುಗೆ ಅನಿಲ ಸಿಲಿಂಡರ್‌ಗಳ ದರ ಏರಿಕೆಗೆ ನಿಯಂತ್ರಣ ಹಾಕುವಂತೆ ಪ್ರತಿಪಕ್ಷಗಳು ಸರಕಾರದ ಮೇಲೆ ಒತ್ತಡ ಹಾಕಲು ಸಜ್ಜಾಗಿವೆ.
ನೂತನ ಪ್ರೈವಸಿ ನೀತಿಗಳನ್ನು ಹಿಂಪಡೆಯುವಂತೆ ವಾಟ್ಸ್‌ಆಪ್‌ಗೆ ಕೇಂದ್ರ ಸರ್ಕಾರ ಎಚ್ಚರಿಕೆ..!
ಜನವರಿ 29ರಿಂದ ಫೆಬ್ರವರಿ 15ರವರೆಗೆ ಮೊದಲ ಹಂತದ ಅಧಿವೇಶನ ನಡೆಯಲಿದೆ. ಎರಡನೇ ಅವಧಿಯ ಅಧಿವೇಶನವು ಮಾರ್ಚ್ 8ರಿಂದ ಏಪ್ರಿಲ್‌ 8ರವರೆಗೆ ನಡೆಯಲಿದೆ. ಸಂಸತ್‌ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸತ್‌ ಸದಸ್ಯರಿಗೆ ಕೊರೊನಾ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ