ಆ್ಯಪ್ನಗರ

ರದ್ದಿ ಮಹಿಳೆಯರೊಟ್ಟಿಗೆ ಪ್ಲಾಸ್ಟಿಕ್‌ ಬೇರ್ಪಡಿಸಿದ ಪ್ರಧಾನಿ ಮೋದಿ

ಪ್ಲಾಸ್ಟಿಕ್‌ ಮುಕ್ತ ಭಾರತದ ಕನಸು ಕಂಡಿರುವ ಕೇಂದ್ರ ಸರ್ಕಾರ, ಅಕ್ಟೋಬರ್‌ 2ರ ಬಳಿಕ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಅನ್ನು ಪೂರ್ಣವಾಗಿ ನಿಷೇಧಿಸಿದೆ. ಇದೀಗ ಪ್ಲಾಸ್ಟಿಕ್‌ ಬಳಕೆ ವಿರುದ್ಧ ಜಾಗೃತಿ ಮೂಡಿಸಲು ಸ್ವತಃ ಪ್ರಧಾನಿ ಮೋದಿಯೇ ಕಸದಿಂದ ಪ್ಲಾಸ್ಟಿಕ್‌ ಕವರ್‌ಗಳನ್ನು ಬೇರ್ಪಡಿಸಿದ್ದಾರೆ.

TIMESOFINDIA.COM 11 Sep 2019, 2:33 pm
ಹೊಸದಿಲ್ಲಿ: ಪ್ಲಾಸ್ಟಿಕ್‌ ಬಳಕೆ ವಿರುದ್ಧ ಸಮರ ಸಾರಿರುವ ಪ್ರಧಾನಿ ಮೋದಿ, ಪ್ಲಾಸ್ಟಿಕ್‌ ಬಳಕೆ ವಿರುದ್ಧ ಜಾಗೃತಿ ಮೂಡಿಸಲು ರದ್ದಿ ಮಹಿಳೆಯರೊಟ್ಟಿಗೆ ಸೇರಿ ಕಸದಿಂದ ಪ್ಲಾಸ್ಟಿಕ್‌ ಕವರ್‌ ಹಾಗೂ ವಸ್ತುಗಳನ್ನು ಬೇರ್ಪಡಿಸಿದ್ದಾರೆ. ಆಶ್ಚರ್ಯ ಎನಿಸಿದರೂ ಇದು ಸತ್ಯ. ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಉತ್ತರ ಪ್ರದೇಶದ ಮಥರಾಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಥುರಾ ನಗರದಲ್ಲಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಓಡಾಡಿ, ಸ್ವಚ್ಛತೆಯನ್ನು ಗಮನಿಸಿದ್ದಾರೆ. ಈ ಸಂದರ್ಭದಲ್ಲಿ ರದ್ದಿ ಪೇಪರ್‌ ಹೆಕ್ಕುವ 25 ಮಹಿಳೆಯರಿಗೆ ಕಸದಿಂದ ಪ್ಲಾಸ್ಟಿಕ್‌ ಕವರ್‌ ಮತ್ತು ವಸ್ತುಗಳನ್ನು ಆರಿಸಲು ಸಹಾಯ ಮಾಡಿದ್ದಾರೆ. ನಂತರ ಆ 25 ಮಹಿಳೆಯರನ್ನೂ ಪುರಸ್ಕರಿಸಿದ್ದಾರೆ.
Vijaya Karnataka Web modi raddi


ಇನ್ನು ಕೆಲವೇ ದಿನಗಳಲ್ಲಿ ಭಾರತ ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನೋತ್ಸವ ಆಚರಿಸಲಿದೆ. ಗಾಂಧಿ ಅವರ ನಿರ್ಮಲ ಭಾರತದ ಕನಸಿನಿಂದ ನಾವು ಬೆಳಕು ಪಡೆಯಬೇಕು. ನಮ್ಮ ಮನೆ, ಕಚೇರಿ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿ ಸಿಂಗಲ್‌ ಯೂಸ್‌ ಪ್ಲಾಸ್ಟ್‌ಕ್‌ಬಳಕೆಯಿಂದ ಹೊರಬರಲು ಶ್ರಮಿಸಬೇಕು. ಈ ಪ್ಲಾಸ್ಟಿಕ್‌ ವಿರೋಧಿ ಆಂದೋಲನದಲ್ಲಿ ಸ್ವಸಹಾಯ ಗುಂಪುಗಳು, ನಾಗರಿಕ ಸಮಾಜ ಹಾಗೂ ವೈಯಕ್ತಿಕವಾಗಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ಮೋದಿ ದೇಶದ ಪ್ರಜೆಗಳಲ್ಲಿ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಮೋದಿ ಚಾಲನೆ

2022ರ ವೇಳೆಗೆ ಪ್ಲಾಸ್ಟಿಕ್‌ ಮುಕ್ತ ಭಾರತ: ಕಳೆದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಮೋದಿ 2020ರ ವೇಳೆಗೆ ಭಾರತ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ನಿಂದ ಬಳಕೆಯಿಂದ ಪೂರ್ಣ ಮುಕ್ತವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು. ಇದೀಗ ಈ ಆಶಯದ ಮೊದಲ ಹೆಜ್ಜೆಯಾಗಿ ಅಕ್ಟೋಬರ್‌ 2ರಿಂದ ಒಟ್ಟು 6 ವಿಧದ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ (ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‌) ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ. ವಿಶ್ವದ ಒಟ್ಟು 127 ರಾಷ್ಟ್ರಗಳು ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಿವೆ.

ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಎಂದರೆ?
ಸಿಂಗಲ್‌ ಅಥವಾ ಕೇವಲ ಒಂದೇ ಬಾರಿ ಬಳಕೆ ಮಾಡಿ ಬಳಿಕ ಎಸೆಯುವ, ತ್ಯಾಜ್ಯವಾಗುವ ಪ್ಲಾಸ್ಟಿಕ್‌. ಇಂತಹ ಪ್ಲಾಸ್ಟಿಕ್‌ಅನ್ನು ಒಮ್ಮೆ ಬಳಸಿದರೆ ಮತ್ತೆ ಪುನರ್ಬಳಕೆ ಸಾಧ್ಯವಿಲ್ಲ. ಹೀಗಾಗಿ ಬಳಕೆಯಾದ ಪ್ಲಾಸ್ಟಿಕ್‌ ಎಲ್ಲವೂ ಪರಿಸರಕ್ಕೆ ತ್ಯಾಜ್ಯವಾಗಿ ಸೇರುತ್ತಲೇ ಇದೆ. ಈಗಾಗಲೇ ವಿಶ್ವಾದ್ಯಂತ ಸುಮಾರು 4 ಹಿಮಾಲಯ ಪರ್ವತಗಳಷ್ಟು ಬೃಹತ್‌ ಪ್ರಮಾಣದ ಪ್ಲಾಸ್ಟಿಕ್‌ ತ್ಯಾಜ್ಯ ಪರಿಸರ ಸೇರಿರುವ ಅಂದಾಜಿದೆ. ಪ್ರತಿ ವರ್ಷವೂ ಸುಮಾರು 1 ಕೋಟಿ ಟನ್‌ ಪ್ಲಾಸ್ಟಿಕ್‌ ಸಮುದ್ರ ಸೇರುತ್ತಿದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
ದೀಪಾವಳಿಯೊಳಗೆ ಪ್ಲಾಸ್ಟಿಕ್‌ ಮುಕ್ತ ಮಹಾನಗರಕ್ಕೆ ನಿರ್ಧಾರ

ದಿನನಿತ್ಯ ಬಳಸುವ ಪ್ಯಾಕೇಜ್ಡ್‌ ಆಹಾರ, ದಿನಸಿ ಸಾಮಗ್ರಿ. ಜ್ಯೂಸ್‌, ದಿನಸಿ ಎಣ್ಣೆ, ಬಾಟಲಿಗಳು. ಸ್ಟ್ರಾಗಳು, ಪ್ಲಾಸ್ಟಿಕ್‌ ಪಾತ್ರೆಗಳು, ಕಪ್‌, ಆಹಾರದ ಡಬ್ಬಗಳು ಸೇರಿದಂತೆ ಹಲವಾರು ದಿನಬಳಕೆ ವಸ್ತುಗಳು ಸಿಂಗಲ್‌ ಯೂಸ್ ಪ್ಲಾಸ್ಟಿಕ್‌ ನಿಂದಲೇ ತಯಾರಾಗಿರುತ್ತವೆ. ಇದನ್ನು ಬಳಸಿದಂತೆಲ್ಲ ಪರಿಸರದಲ್ಲಿ ತ್ಯಾಜ್ಯ ಹೆಚ್ಚುತ್ತಲೇ ಹೋಗುತ್ತದೆ. ಇನ್ನು ಮುಂದಾದರೂ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಬಳಸದಿರುವಂತೆ ಬದ್ಧರಾಗಿರೋಣ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ