ಆ್ಯಪ್ನಗರ

‘ಬಿಮ್‌ಸ್ಟೆಕ್‌’ ನಾಯಕರ ಆಹ್ವಾನದ ಮೂಲಕ ಪಾಕ್‌, ಚೀನಾಗೆ ಭಾರತ ‘ಚೆಕ್‌ಮೇಟ್‌’

ಮೋದಿ ಅವರು, ಈ ಬಾರಿ 'ಬಿಮ್‌ಸ್ಟೆಕ್‌' ದೇಶಗಳ ಮುಖ್ಯಸ್ಥರಿಗೆ ಆಹ್ವಾನ ಕಳುಹಿಸಿದ್ದಾರೆ. ಈ ಮೂಲಕ ಪುಂಡಾಟ ಮೆರೆಯುವ ಪಾಕಿಸ್ತಾನ ಮತ್ತು ಕಮ್ಯುನಿಸ್ಟ್‌ ಚೀನಾಕ್ಕೆ ಭಿನ್ನ ಸಂದೇಶ ರವಾನಿಸಿದ್ದಾರೆ.

PTI 29 May 2019, 5:00 am
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವಲ್ಲಿ ನಿಸ್ಸೀಮರು. ಲೋಕಸಭೆ ಸಮರದಲ್ಲಿ ಪ್ರಚಂಡ ಜಯದ ಬಳಿಕ ಈಗ ಪ್ರಧಾನಿ ಪ್ರಮಾಣವಚನ ಸಮಾರಂಭಕ್ಕೆ ಗಣ್ಯರ ಆಹ್ವಾನದ ವಿಚಾರದಲ್ಲೂ ತಮ್ಮ ವಿದೇಶಾಂಗ ನೀತಿಯ ಪ್ರಖರ ಅಸ್ತ್ರ ಬಳಸಿ ಗಮನ ಸೆಳೆದಿದ್ದಾರೆ.
Vijaya Karnataka Web bimstec-explainer-1558967100


2014ರ ಸಮಾರಂಭಕ್ಕೆ 'ಸಾರ್ಕ್‌' ದೇಶಗಳ ಗಣ್ಯರನ್ನು ಆಹ್ವಾನಿಸಿದ್ದ ಮೋದಿ ಅವರು, ಈ ಬಾರಿ 'ಬಿಮ್‌ಸ್ಟೆಕ್‌' (ಬಹು ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳಕೊಲ್ಲಿ ರಾಷ್ಟ್ರಗಳ ಒಕ್ಕೂಟ) ದೇಶಗಳ ಮುಖ್ಯಸ್ಥರಿಗೆ ಆಹ್ವಾನ ಕಳುಹಿಸಿದ್ದಾರೆ.

ಈ ಮೂಲಕ ಪುಂಡಾಟ ಮೆರೆಯುವ ಪಾಕಿಸ್ತಾನ ಮತ್ತು ಕಮ್ಯುನಿಸ್ಟ್‌ ಚೀನಾಕ್ಕೆ ಭಿನ್ನ ಸಂದೇಶ ರವಾನಿಸಿದ್ದಾರೆ.

ನೇಪಾಳ, ಭೂತಾನ್‌, ಮ್ಯಾನ್ಮಾರ್‌, ಶ್ರೀಲಂಕಾ, ಥಾಯ್ಲೆಂಡ್‌ ಮತ್ತು ಭಾರತವನ್ನು ಒಳಗೊಂಡ 'ಬಿಮ್‌ಸ್ಟೆಕ್‌'ಗೆ ಮಹತ್ವ ನೀಡುವ ಮೂಲಕ ಮೋದಿ ಅವರು 'ನೆರೆಹೊರೆ ದೇಶಗಳಿಗೆ ಮೊದಲ ಆದ್ಯತೆ' ಹಾಗೂ 'ಈಶಾನ್ಯಕ್ಕೆ ಆದ್ಯತೆ' ನೀತಿಯನ್ನು ಮುನ್ನೆಲೆಗೆ ತಂದಿದ್ದಾರೆ. 'ಬಿಮ್‌ಸ್ಟೆಕ್‌'ಗೆ ಆದ್ಯತೆ ನೀಡುವ ಮೂಲಕ ಬಂಗಾಳ ಕೊಲ್ಲಿಗೆ ಹೊಂದಿಕೊಂಡಿರುವ ಪೂರ್ವ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ದೇಶಗಳ ನಡುವೆ ಭಾರತದ ಸಹಕಾರ, ಸಂಬಂಧ ಉತ್ತಮಗೊಳಿಸುವುದು ಮೋದಿ ಕಾರ್ಯತಂತ್ರದ ಒಂದು ಭಾಗವಾಗಿದೆ.

ಮತ್ತಷ್ಟು ಏಕಾಂಗಿ: ಮತ್ತೊಂದೆಡೆ ಪಾಕಿಸ್ತಾನವನ್ನು ಏಕಾಂಗಿಯಾಗಿಸಲು ಈ ದೇಶಗಳ ನೆರವು ಪಡೆಯುವುದು ಮೋದಿ ಅವರ ಕಾರ್ಯತಂತ್ರದ ಮತ್ತೊಂದು ಉದ್ದೇಶವಾಗಿದೆ. ಪಾಕಿಸ್ತಾನವೂ ಸದಸ್ಯತ್ವ ಹೊಂದಿರುವ 'ಸಾರ್ಕ್‌' ಒಕ್ಕೂಟ ಭಾರತ-ಪಾಕ್‌ ನಡುವೆ ವೈಮನಸ್ಯದಿಂದ ಪ್ರಸ್ತುತತೆ ಕಳೆದುಕೊಂಡಿದೆ. ಕಳೆದ ವರ್ಷ ಮೋದಿ ಅವರು ''ಪಾಕಿಸ್ತಾನದ ಜತೆ ಯಾವ ಹಂತದಲ್ಲೂ ಮಾತುಕತೆ ನಡೆಸುವುದಿಲ್ಲ,'' ಎಂದು ಸ್ಪಷ್ಟಪಡಿಸಿದ್ದರು. ಉರಿ ದಾಳಿಯ ಬಳಿಕ ಪಾಕ್‌ ಸಹ ಸದಸ್ಯತ್ವ ಹೊಂದಿರುವ 'ಸಾರ್ಕ್‌' ದೇಶಗಳ ಒಕ್ಕೂಟವನ್ನೂ ಭಾರತ ಬಹಿಷ್ಕರಿಸಿದೆ. ಇಂತಹ ಸಂದರ್ಭದಲ್ಲಿ ಇದಕ್ಕೆ ಪರ್ಯಾಯವಾಗಿ ಮೋದಿ ಸುಮಾರು 20 ವರ್ಷ ಹಳೆಯ 'ಬಿಮ್‌ಸ್ಟೆಕ್‌'ಗೆ ಮಣೆ ಹಾಕಿದ್ದಾರೆ.

ಚೀನಾಕ್ಕೆ ಮೂಗುದಾರ: ಮತ್ತೊಂದೆಡೆ, ಭಾರತದ ನಡೆಯು ಚೀನಾದ ಮಹತ್ವಾಕಾಂಕ್ಷೆಯ 'ಬೆಲ್ಟ್‌ ಮತ್ತು ರೋಡ್‌' ಯೋಜನೆಗೆ ಭಾರಿ ಹೊಡೆತ ಎಂದು ವಿಶ್ಲೇಷಿಸಲಾಗಿದೆ. ಚೀನಾ ತನ್ನ 'ಬೆಲ್ಟ್‌ ಮತ್ತು ರೋಡ್‌' ಯೋಜನೆ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಸರಕು ಸಾಗಣೆಗೆ ಹಾದಿಯಾಗಿರುವ ಬಂಗಾಳ ಕೊಲ್ಲಿಯಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ನೋಡುತ್ತಿದೆ. ಈ ಯೋಜನೆ ವಿಸ್ತರಣೆ ಬಹುತೇಕ ಎಲ್ಲಾ 'ಬಿಮ್‌ಸ್ಟೆಕ್‌' ದೇಶಗಳ ನಡುವೆಯೂ ಸಂಪರ್ಕ ಸಾಧಿಸಲು ನೋಡುತ್ತಿದೆ. ಆದರೆ, ಇದಕ್ಕೆ ಪರ್ಯಾಯವಾಗಿ ಭಾರತವೂ ಈ ದೇಶಗಳ ನಡುವೆ ಸಂಪರ್ಕ ಸೇತುವೆ ನಿರ್ಮಿಸಿಕೊಳ್ಳಲು ಮೋದಿ ಅವರ ನಡೆಯಿಂದ ಸಹಾಯಕವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ