ಜೈಪುರ: ಕೊಲೆ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಲು ಕೊಲೆಗಾರರು ಮತ್ತು ಅವರ ಬೆಂಬಲಿಗರು ಪ್ರಯತ್ನಿಸುವುದು ಸಾಮಾನ್ಯ ಸಂಗತಿ. ಆದರೆ ಪುರಾವೆಗಳನ್ನು ಕೋತಿ ಹೊತ್ತು ಪರಾರಿಯಾದರೆ ಯಾರನ್ನು ದೂಷಿಸುವುದು? ಇಂತಹ ವಿಚಿತ್ರ ಪ್ರಕರಣ ರಾಜಸ್ಥಾನದಲ್ಲಿ ವರದಿಯಾಗಿದೆ. ಕೊಲೆ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ಕೆಳ ನ್ಯಾಯಾಲಯಕ್ಕೆ ರಾಜಸ್ಥಾನ ಪೊಲೀಸರು ನೀಡಿರುವ ವಿವರಣೆ ನಗೆಪಾಟಲಿಗೀಡಾಗಿದೆ. ಕೊಲೆ ಪ್ರಕರಣದಲ್ಲಿ ತಾವು ಸಂಗ್ರಹಿಸಿದ್ದ ಸಾಕ್ಷ್ಯಗಳನ್ನು ಮಂಗವೊಂದು ಹೊತ್ತುಕೊಂಡು ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಶಿಕಾಂತ್ ಶರ್ಮಾ ಎಂಬ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಂದ್ವಾಜಿ ಠಾಣೆ ಪೊಲೀಸರು ಈ ಹೇಳಿಕೆ ನೀಡಿದ್ದಾರೆ. ಕಾನ್ಸ್ಟೆಬಲ್ ಒಬ್ಬರ ನಿರ್ಲಕ್ಷ್ಯದಿಂದ ಈ ಲೋಪ ಉಂಟಾಗಿದೆ. ಸಾಕ್ಷ್ಯಗಳಿದ್ದ ಚೀಲವನ್ನು ಭದ್ರವಾಗಿ ಇರಿಸಲು ಸಾಗಿಸುವಾಗ ಕೋತಿಗಳು ಕಸಿದುಕೊಂಡು ಪರಾರಿಯಾಗಿವೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ. ಈ ಸಂಬಂಧ ನ್ಯಾಯಾಲಯವು ಹಿರಿಯ ಪೊಲೀಸರಿಗೆ ನೋಟಿಸ್ ನೀಡಿದೆ.
ಕೊಲೆಯಲ್ಲಿ ಬಳಸಿದ್ದ ಚಾಕು ಸೇರಿದಂತೆ 15 ಸಾಕ್ಷ್ಯ ತುಣುಕುಗಳು ಚೀಲದಲ್ಲಿದ್ದವು. ಕೋರ್ಟ್ಗೆ ಅವುಗಳನ್ನು ಹಾಜರುಪಡಿಸಲು ಸೂಚಿಸಿದ್ದಾಗ ಕೋತಿಗಳು ಅದನ್ನು ಎಳೆದೊಯ್ದಿವೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.
ರಾಜಸ್ಥಾನ ರಾಜಧಾನಿ ಜೈಪುರದ ಚಾಂದ್ವಾಜಿ ಪ್ರದೇಶದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2016ರ ಸೆಪ್ಟೆಂಬರ್ನಲ್ಲಿ ಶಶಿಕಾಂತ್ ಶರ್ಮಾ ಎಂಬಾತ ಶವವಾಗಿ ಪತ್ತೆಯಾಗಿದ್ದ. ಆತ ನಾಪತ್ತೆಯಾಗಿ ಮೂರು ದಿನಗಳ ಬಳಿಕ ಶವ ಸಿಕ್ಕಿತ್ತು. ಆತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದ ಕುಟುಂಬದವರು, ಮೃತದೇಹ ದೊರಕಿದ ಬಳಿಕ ದಿಲ್ಲಿ- ಜೈಪುರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.
ಐದು ದಿನಗಳ ಬಳಿಕ ಪೊಲೀಸರು ಚಾಂದ್ವಾಜಿ ನಿವಾಸಿಗಳಾದ ರಾಹುಲ್ ಮತ್ತು ಮೋಹನ್ಲಾಲ್ ಖಂಡೇರಾ ಎಂಬುವವರನ್ನು ಬಂಧಿಸಿದ್ದರು. ಅವರನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಕೊಲೆಗೆ ಬಳಸಿದ್ದ ಆಯುಧ ಸೇರಿದಂತೆ ಎಲ್ಲ ಪುರಾವೆಗಳು ಇದ್ದ ಚೀಲವನ್ನು ಸ್ಥಳಾವಕಾಶದ ಕೊರತೆಯಿಂದ ಪೊಲೀಸ್ ಠಾಣೆಯ ಮರವೊಂದರ ಅಡಿ ಇರಿಸಲಾಗಿತ್ತು ಎಂದು ಪೊಲೀಸರು ಈಗ ಸ್ಪಷ್ಟನೆ ನೀಡಿದ್ದಾರೆ.
2016ರಲ್ಲಿ ನಡೆದ ಕೊಲೆ ಪ್ರಕರಣದ ವಿಚಾರಣೆ ಆರು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಪುರಾವೆಗಳನ್ನು ಹಾಜರುಪಡಿಸುವಂತೆ ಪೊಲೀಸರಿಗೆ ಕೋರ್ಟ್ ಇತ್ತೀಚೆಗೆ ಸೂಚನೆ ನೀಡಿದಾಗ ಕೋತಿಯೊಂದು ಅದನ್ನು ಕಳವು ಮಾಡಿದೆ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಹತ್ವದ ಪುರಾವೆಗಳು ಕೂಡ ನಾಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ತಮ್ಮ ಬಳಿ ಇದ್ದ ಪುರಾವೆಗಳು ಕಳುವಾಗಿವೆ ಎಂದು ಅಧೀನ ನ್ಯಾಯಾಲಯದಲ್ಲಿ ಪೊಲೀಸರು ಲಿಖಿತ ಹೇಳಿಕೆ ಕೊಟ್ಟಿದ್ದಾರೆ. ಇದರಿಂದ ಕೋಪಗೊಂಡ ನ್ಯಾಯಾಲಯ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಕಾನ್ಸ್ಟೆಬಲ್ ಒಬ್ಬರ ಅಜಾಗರೂಕತೆ ಇದಕ್ಕೆ ಕಾರಣ ಎಂದು ಇಲಾಖೆ ದೂಷಿಸಿದೆ. ಈ ಘಟನೆ ಬಳಿಕ ಕಾನ್ಸ್ಟೆಬಲ್ನನ್ನು ಅಮಾನತು ಮಾಡಲಾಗಿತ್ತು. ಅವರು ನಿವೃತ್ತರಾಗಿ, ನಿಧನರಾಗಿದ್ದಾರೆ ಎಂದು ಹೇಳಿದ್ದಾರೆ. ಸಾಕ್ಷ್ಯಗಳೇ ಇಲ್ಲದಿರುವಾಗ ಆರೋಪಿಗಳನ್ನು ಅಪರಾಧಿಗಳು ಎಂದು ಸಾಬೀತುಪಡಿಸುವುದು ಹೇಗೆ? ಪ್ರಕರಣ ಇನ್ನೂ ಕೋರ್ಟ್ ಮುಂದೆ ಇದೆ.
ಶಶಿಕಾಂತ್ ಶರ್ಮಾ ಎಂಬ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಂದ್ವಾಜಿ ಠಾಣೆ ಪೊಲೀಸರು ಈ ಹೇಳಿಕೆ ನೀಡಿದ್ದಾರೆ. ಕಾನ್ಸ್ಟೆಬಲ್ ಒಬ್ಬರ ನಿರ್ಲಕ್ಷ್ಯದಿಂದ ಈ ಲೋಪ ಉಂಟಾಗಿದೆ. ಸಾಕ್ಷ್ಯಗಳಿದ್ದ ಚೀಲವನ್ನು ಭದ್ರವಾಗಿ ಇರಿಸಲು ಸಾಗಿಸುವಾಗ ಕೋತಿಗಳು ಕಸಿದುಕೊಂಡು ಪರಾರಿಯಾಗಿವೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ. ಈ ಸಂಬಂಧ ನ್ಯಾಯಾಲಯವು ಹಿರಿಯ ಪೊಲೀಸರಿಗೆ ನೋಟಿಸ್ ನೀಡಿದೆ.
ಕೊಲೆಯಲ್ಲಿ ಬಳಸಿದ್ದ ಚಾಕು ಸೇರಿದಂತೆ 15 ಸಾಕ್ಷ್ಯ ತುಣುಕುಗಳು ಚೀಲದಲ್ಲಿದ್ದವು. ಕೋರ್ಟ್ಗೆ ಅವುಗಳನ್ನು ಹಾಜರುಪಡಿಸಲು ಸೂಚಿಸಿದ್ದಾಗ ಕೋತಿಗಳು ಅದನ್ನು ಎಳೆದೊಯ್ದಿವೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ.
ರಾಜಸ್ಥಾನ ರಾಜಧಾನಿ ಜೈಪುರದ ಚಾಂದ್ವಾಜಿ ಪ್ರದೇಶದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2016ರ ಸೆಪ್ಟೆಂಬರ್ನಲ್ಲಿ ಶಶಿಕಾಂತ್ ಶರ್ಮಾ ಎಂಬಾತ ಶವವಾಗಿ ಪತ್ತೆಯಾಗಿದ್ದ. ಆತ ನಾಪತ್ತೆಯಾಗಿ ಮೂರು ದಿನಗಳ ಬಳಿಕ ಶವ ಸಿಕ್ಕಿತ್ತು. ಆತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದ ಕುಟುಂಬದವರು, ಮೃತದೇಹ ದೊರಕಿದ ಬಳಿಕ ದಿಲ್ಲಿ- ಜೈಪುರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.
ಐದು ದಿನಗಳ ಬಳಿಕ ಪೊಲೀಸರು ಚಾಂದ್ವಾಜಿ ನಿವಾಸಿಗಳಾದ ರಾಹುಲ್ ಮತ್ತು ಮೋಹನ್ಲಾಲ್ ಖಂಡೇರಾ ಎಂಬುವವರನ್ನು ಬಂಧಿಸಿದ್ದರು. ಅವರನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಕೊಲೆಗೆ ಬಳಸಿದ್ದ ಆಯುಧ ಸೇರಿದಂತೆ ಎಲ್ಲ ಪುರಾವೆಗಳು ಇದ್ದ ಚೀಲವನ್ನು ಸ್ಥಳಾವಕಾಶದ ಕೊರತೆಯಿಂದ ಪೊಲೀಸ್ ಠಾಣೆಯ ಮರವೊಂದರ ಅಡಿ ಇರಿಸಲಾಗಿತ್ತು ಎಂದು ಪೊಲೀಸರು ಈಗ ಸ್ಪಷ್ಟನೆ ನೀಡಿದ್ದಾರೆ.
2016ರಲ್ಲಿ ನಡೆದ ಕೊಲೆ ಪ್ರಕರಣದ ವಿಚಾರಣೆ ಆರು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಪುರಾವೆಗಳನ್ನು ಹಾಜರುಪಡಿಸುವಂತೆ ಪೊಲೀಸರಿಗೆ ಕೋರ್ಟ್ ಇತ್ತೀಚೆಗೆ ಸೂಚನೆ ನೀಡಿದಾಗ ಕೋತಿಯೊಂದು ಅದನ್ನು ಕಳವು ಮಾಡಿದೆ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಹತ್ವದ ಪುರಾವೆಗಳು ಕೂಡ ನಾಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ತಮ್ಮ ಬಳಿ ಇದ್ದ ಪುರಾವೆಗಳು ಕಳುವಾಗಿವೆ ಎಂದು ಅಧೀನ ನ್ಯಾಯಾಲಯದಲ್ಲಿ ಪೊಲೀಸರು ಲಿಖಿತ ಹೇಳಿಕೆ ಕೊಟ್ಟಿದ್ದಾರೆ. ಇದರಿಂದ ಕೋಪಗೊಂಡ ನ್ಯಾಯಾಲಯ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಕಾನ್ಸ್ಟೆಬಲ್ ಒಬ್ಬರ ಅಜಾಗರೂಕತೆ ಇದಕ್ಕೆ ಕಾರಣ ಎಂದು ಇಲಾಖೆ ದೂಷಿಸಿದೆ. ಈ ಘಟನೆ ಬಳಿಕ ಕಾನ್ಸ್ಟೆಬಲ್ನನ್ನು ಅಮಾನತು ಮಾಡಲಾಗಿತ್ತು. ಅವರು ನಿವೃತ್ತರಾಗಿ, ನಿಧನರಾಗಿದ್ದಾರೆ ಎಂದು ಹೇಳಿದ್ದಾರೆ. ಸಾಕ್ಷ್ಯಗಳೇ ಇಲ್ಲದಿರುವಾಗ ಆರೋಪಿಗಳನ್ನು ಅಪರಾಧಿಗಳು ಎಂದು ಸಾಬೀತುಪಡಿಸುವುದು ಹೇಗೆ? ಪ್ರಕರಣ ಇನ್ನೂ ಕೋರ್ಟ್ ಮುಂದೆ ಇದೆ.