ಆ್ಯಪ್ನಗರ

ಈ ವರ್ಷ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ: ಅಮೆರಿಕ ಮೂಲದ ಹವಾಮಾನ ಕಂಪನಿ ಭವಿಷ್ಯ

ದೇಶದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಹೆಚ್ಚು ಮಳೆಯಾಗಲಿದೆ ಎಂದು ಅಮೆರಿಕ ಮೂಲದ ದಿ ವೆದರ್‌ ಕಂಪನಿ ಹೇಳಿದೆ. ಜತೆಗೆ ವಾಡಿಕೆಗೂ ಮುನ್ನವೇ ಮೇ 31ರಂದೇ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಈ ಹವಾಮಾನ ಕಂಪನಿ ಹೇಳಿದೆ.

Vijaya Karnataka Web 5 Apr 2020, 10:13 am
ಹೊಸದಿಲ್ಲಿ: ಕೊರೊನಾ ಹಾವಳಿಯಿಂದ ಕಂಗಾಲಾಗಿರುವ ದೇಶದ ಜನತೆಗೆ ಕೊಂಚ ನಿಟ್ಟುಸಿರು ಬಿಡಬಹುದಾದ ಸುದ್ದಿಯೊಂದು ಇಲ್ಲಿದೆ. ಪ್ರಸಕ್ತ ವರ್ಷ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ ಬೀಳಲಿದೆ. ಅಲ್ಲದೇ, ಬಹುಬೇಗ ಅಂದರೆ ಮೇ 31ರಂದೇ ನೈಋತ್ಯ ಮುಂಗಾರು ಆಗಮನದ ಸಾಧ್ಯತೆ ಇದೆ ಎಂದು ಅಮೆರಿಕ ಮೂಲದ ಐಬಿಎಂ ಬಿಸಿನೆಸ್‌ನ ಅಂಗಸಂಸ್ಥೆ ‘ದಿ ವೆದರ್‌ ಕಂಪನಿ’ ಭವಿಷ್ಯ ನುಡಿದಿದೆ.
Vijaya Karnataka Web waiting for rain


ಈ ಹವಾಮಾನ ಕಂಪನಿಯ ಪ್ರಕಾರ, ಮೇ 31ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ವಾಡಿಕೆ ಸಾಮಾನ್ಯ ಮಳೆಗಿಂತಲೂ (105%) ಹೆಚ್ಚಿನದಾಗಿರುತ್ತದೆ. ಪಶ್ಚಿಮ ಕರಾವಳಿಯಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಅಮೆರಿಕದ ವೆದರ್‌ ಕಂಪನಿಯ ಮುಖ್ಯ ಹವಾಮಾನ ತಜ್ಞ ಟಾಡ್‌ ಕ್ರೌಫೋರ್ಡ್‌ ಹೇಳಿದ್ದಾರೆ. ಕೇರಳ ಮತ್ತು ಕರಾವಳಿ ಕರ್ನಾಟಕವು ಹೆಚ್ಚಿನ ಮಳೆಯನ್ನು ಈ ವರ್ಷ ಕಾಣಲಿವೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

ಸಾಮಾನ್ಯವಾಗಿ ಜೂನ್‌ 1ರಂದು ಮುಂಗಾರು ಕೇರಳಕ್ಕೆ ಕಾಲಿಡುತ್ತದೆ. ನಾಲ್ಕು ದಿನಗಳ ಬಳಿಕ ಕರ್ನಾಟಕ ಪ್ರವೇಶಿಸಿ ಮಾಸಾಂತ್ಯದ ವೇಳೆಗೆ ಇಡೀ ದೇಶವನ್ನು ವ್ಯಾಪಿಸುತ್ತದೆ. ದೇಶದ ವಾರ್ಷಿಕ ಮಳೆ ಪ್ರಮಾಣದಲ್ಲಿ ಶೇ.90ರಷ್ಟು ಮುಂಗಾರು ಅವಧಿಯಲ್ಲಿಯೇ ಸುರಿಯುತ್ತದೆ. ಅದರಲ್ಲಿಯೂ ಜುಲೈ, ಆಗಸ್ಟ್‌ನಲ್ಲಿ ದೇಶಾದ್ಯಂತ ಉತ್ತಮ ಮಳೆಯಾಗುತ್ತದೆ. ಕಳೆದ ವರ್ಷ ತಡವಾಗಿ ಜೂನ್‌ 8ರಂದು ನೈಋತ್ಯ ಕೇರಳ ಪ್ರವೇಶಿಸಿದ್ದರೂ, ದೇಶಾದ್ಯಂತ ವಾಡಿಕೆಗಿಂತಲೂ ಅಧಿಕ (110%) ಮಳೆಯಾಗಿತ್ತು. ಬಹುತೇಕ ಎಲ್ಲ ಪ್ರದೇಶಗಳಲ್ಲಿಯೂ ಉತ್ತಮ ಮಳೆಯಾಗಿತ್ತು.

ತಡೆಗೋಡೆ, ಅಕಾಲಿಕ ಮಳೆಯಿಂದ ಅಂತರ್ಜಲ ಹೆಚ್ಚಳ
ಭಾರತೀಯ ಹವಾಮಾನ ಇಲಾಖೆ ಇದುವರೆಗೆ ಮುಂಗಾರು ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಸಾಮಾನ್ಯವಾಗಿ ಇಲಾಖೆಯು ಏಪ್ರಿಲ್‌ ಅಂತ್ಯದಲ್ಲಿ ಮುಂಗಾರು ಕುರಿತು
ಮುನ್ಸೂಚನೆ ನೀಡುತ್ತದೆ.

ಮತ್ತೆ ವಾಯುಭಾರ ಕುಸಿತ: ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ

ಉತ್ತರದಲ್ಲಿ ಕಡಿಮೆ
ದೇಶದ ವಾಯುವ್ಯ, ಈಶಾನ್ಯ ಮತ್ತು ಪೂರ್ವ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಬಹುದು. ಆದರೆ ಅದರ ಅರ್ಥ ಬರಗಾಲ ಎದುರಾಗುತ್ತದೆ ಎಂದಲ್ಲ ಎಂಬುದಾಗಿಯೂ ‘ದಿ ವೆದರ್‌ ಕಂಪನಿ’ ಸ್ಪಷ್ಟಪಡಿಸಿದೆ.

ಬೆಳೆಯುವ ಹಂತಕ್ಕೆ ಹೊಡೆತ
ಮತ್ತೆ ಪ್ರವಾಹ ಭೀತಿ?

ಕಳೆದ ವರ್ಷ ಅತಿವೃಷ್ಟಿ, ಪ್ರವಾಹ ಭೀತಿಗೆ ತತ್ತರಿಸಿದ್ದ ಕರಾವಳಿ ಭಾಗದಲ್ಲಿ ಈ ವರ್ಷವೂ ಅಸಹಜ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಸಂಸ್ಥೆ ಎಚ್ಚರಿಸಿದೆ. ಪಶ್ಚಿಮ ಕರಾವಳಿಯಲ್ಲಿ ಅದರಲ್ಲೂ ಈಶಾನ್ಯ ಭಾಗದಲ್ಲಿ ಅಸಹಜ ರೀತಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಕರ್ನಾಟಕ ಮತ್ತು ಕೇರಳದ ಕರಾವಳಿ ಜಿಲ್ಲೆಗಳು ಮತ್ತೊಂದು ಸುತ್ತಿನ ಪ್ರವಾಹ ಸವಾಲು ಎದುರಿಸಲು ಸನ್ನದ್ಧವಾಗಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ