ಆ್ಯಪ್ನಗರ

ಡಿಕೆ ಶಿವಕುಮಾರ್ ವಿರುದ್ಧ ‘ಇಡಿ’ಗೆ 200ಕ್ಕೂ ಹೆಚ್ಚು ದೂರು

ಹಣಕಾಸು ಅಕ್ರಮಗಳಲ್ಲಿ ಶಿವಕುಮಾರ್‌ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಲಾದ 200ಕ್ಕೂ ಹೆಚ್ಚು ವೈಯಕ್ತಿಕ ದೂರುಗಳು ನಮಗೆ ಬಂದಿವೆ. ಇವುಗಳ ಸತ್ಯಾಸತ್ಯತೆಯನ್ನು ತನಿಖಾ ಸಂಸ್ಥೆ ಪರಿಶೀಲಿಸುತ್ತಿದೆ ಎಂಬುದಾಗಿ ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Agencies 19 Sep 2019, 2:37 pm
ಹೊಸದಿಲ್ಲಿ: ಅಕ್ರಮ ಹಣಕಾಸು ವಹಿವಾಟು ಪ್ರಕರಣದಲ್ಲಿ ಈಗಾಗಲೇ ತನಿಖೆ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ವಿರುದ್ಧ 200ಕ್ಕೂ ಹೆಚ್ಚು ದೂರುಗಳು ಜಾರಿ ನಿರ್ದೇಶನಾಲಯ (ಇಡಿ) ಕ್ಕೆ ಸಲ್ಲಿಕೆಯಾಗಿವೆ.
Vijaya Karnataka Web Karnataka Congress leader DK Shivakumar


ಹಣಕಾಸು ಅಕ್ರಮಗಳಲ್ಲಿ ಶಿವಕುಮಾರ್‌ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಲಾದ 200ಕ್ಕೂ ಹೆಚ್ಚು ವೈಯಕ್ತಿಕ ದೂರುಗಳು ನಮಗೆ ಬಂದಿವೆ. ಇವುಗಳ ಸತ್ಯಾಸತ್ಯತೆಯನ್ನು ತನಿಖಾ ಸಂಸ್ಥೆ ಪರಿಶೀಲಿಸುತ್ತಿದೆ ಎಂಬುದಾಗಿ ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇವರಲ್ಲಿ ಹೆಚ್ಚಿನ ದೂರುದಾರರು ಗೃಹ ಯೋಜನೆಗಳಲ್ಲಿ ಹಣ ಹೂಡಿದವರಾಗಿದ್ದಾರೆ. ಅವರೆಲ್ಲ ತಮ್ಮ ಹಣವನ್ನು ಕಳೆದುಕೊಂಡಿದ್ದು, ಇದರಲ್ಲಿ ನಿರ್ಧಿಷ್ಟ ಆರೋಪಗಳಿವೆ ಎಂಬುದಾಗಿ ಅವರು ತಿಳಿಸಿದ್ದಾರೆ.

ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ತೆರಿಗೆ ವಂಚನೆ ಮತ್ತು ಹವಾಲ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸಲ್ಲಿಸಿದ ಚಾರ್ಜ್‌ಶೀಟ್‌ ಆಧರಿಸಿ ಜಾರಿ ನಿರ್ದೇಶನಾಲಯ ಅಕ್ರಮ ಹಣಕಾಸು ವ್ಯವಹಾರ ಸಂಬಂಧ ತನಿಖೆ ಆರಂಭಿಸಿತ್ತು. ಈ ಸಂಬಂಧ ಹೇಳಿಕೆ ದಾಖಲಿಸಲು ಇಡಿ ಕರ್ನಾಟಕದ ಶಾಸಕರೊಬ್ಬರಿಗೆ ಸಮನ್ಸ್‌ ನೀಡಿತ್ತು.

ಡಿ.ಕೆ. ಶಿವಕುಮಾರ್‌ಗೆ ಆಪ್ತರಾಗಿದ್ದ ಇವರು ತನಿಖಾ ಸಂಸ್ಥೆ ಮುಂದೆ ಹಾಜರಾಗದೆ ರದ್ದತಿ ಕೋರಿದ್ದರು. ಈ ಸಂದರ್ಭದಲ್ಲಿ ತನಿಖೆಗೆ ಸಹಕರಿಸುವಂತೆ ಎರಡನೇ ಸಮನ್ಸ್‌ ಜಾರಿಗೊಳಿಸಲಾಯಿತು ಎಂಬುದಾಗಿ ಅಧಿಕಾರಿ ವಿವರಿಸಿದ್ದಾರೆ.

ಇಡಿ ಕಸ್ಟಡಿ ಕೊನೆಗೊಂಡ ಬಳಿಕ ಡಿಕೆ ಶಿವಕುಮಾರ್‌ರನ್ನು ನ್ಯಾಯಾಲಯದ ಮುಂದೆ ಮಂಗಳವಾರ ಹಾಜರುಪಡಿಸಲಾಗಿತ್ತು ಮತ್ತು ನ್ಯಾಯಾಲಯ ಅವರಿಗೆ ಮುಂದಿನ ಗುರುವಾರದವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇದಕ್ಕೂ ಮೊದಲು ತನಿಖಾ ಸಂಸ್ಥೆ, ಶಿವಕುಮಾರ್‌, ಅವರ ಆಪ್ತರು ಮತ್ತು ಸಂಬಂಧಿಗಳು 317 ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದಾರೆ ಎಂಬುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ಅಲ್ಲದೆ 200 ಕೋಟಿ ರೂಪಾಯಿಗಳ ಅಕ್ರಮ ವಹಿವಾಟನ್ನು ಮತ್ತು 800 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಗಳನ್ನು ಪತ್ತೆ ಹಚ್ಚಿದ್ದಾಗಿ ಹೇಳಿತ್ತು. ಆದರೆ ಈ ಆರೋಪವನ್ನು ಡಿ.ಕೆ. ಶಿವಕುಮಾರ್‌ ಅಲ್ಲಗಳೆದಿದ್ದಾರೆ.

ಈ 317 ಬ್ಯಾಂಕ್‌ ಖಾತೆಗಳು 46 ಜನರಿಗೆ ಸೇರಿದ್ದು, ಹಣಕಾಸು ವರ್ಗಾವಣೆಗಳನ್ನು ಲೆಕ್ಕ ಹಾಕಲು ಇವರ ಖಾತೆಗಳನ್ನೀಗ ಪರಿಶೀಲನೆ ನಡೆಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ