ಆ್ಯಪ್ನಗರ

ರೋಹಿಂಗ್ಯಾಗಳಿಗೆ ಆಶ್ರಯ ನೀಡಬೇಕು ಎಂದ ವರುಣ್‌ ಗಾಂಧಿಗೆ ತರಾಟೆ

ರೋಹಿಂಗ್ಯಾಗಳಿಗೆ ಆಶ್ರಯ ನೀಡಬೇಕೇ ಬೇಡವೇ ಎನ್ನುವ ವಿವಾದ ಈಗ ಭುಗಿಲೆದ್ದಿದೆ.

TNN 26 Sep 2017, 5:27 pm
ಹೊಸದಿಲ್ಲಿ: ಮ್ಯಾನ್ಮಾರ್‌ನ ರೋಹಿಂಗ್ಯಾ ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ನೀಡಬೇಕೇ ಬೇಡವೇ ಎಂಬ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ಸಂಸದ ವರುಣ್ ಗಾಂಧಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
Vijaya Karnataka Web mos home hansraj ahir slams varun gandhi for comments on rohingyas
ರೋಹಿಂಗ್ಯಾಗಳಿಗೆ ಆಶ್ರಯ ನೀಡಬೇಕು ಎಂದ ವರುಣ್‌ ಗಾಂಧಿಗೆ ತರಾಟೆ


ರೋಹಿಂಗ್ಯಾಗಳಿಗೆ ಆಶ್ರಯ ನೀಡಬೇಕು ಎಂದು ವರುಣ್‌ ಗಾಂಧಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನವಭಾರತ್‌ ಟೈಮ್ಸ್‌ನಲ್ಲಿ ಅಂಕಣ ಬರೆದಿರುವ ವರುಣ್‌ ಗಾಂಧಿ, ಅಂತಾರಾಷ್ಟ್ರೀಯ ಒಪ್ಪಂದಗಳಿಗೆಗನುಗುಣವಾಗಿ ಸಹಾಯ ನೀಡುವ ಮನೋಭಾವವುಳ್ಳ ಭಾರತೀಯರಾದ ನಾವು ನಿರಾಶ್ರಿತರಿಗೆ ಆಶ್ರಯ ನೀಡಬೇಕು ಎಂದು ವರುಣ್‌ ಗಾಂಧಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ರಾಷ್ಟ್ರೀಯ ನಿರಾಶ್ರಿತರ ನೀತಿ ರೂಪಿಸಬೇಕು ಎಂದು ಸುಲ್ತಾನ್‌ಪುರದ ಸಂಸದರೂ ಆಗಿರುವ ವರುಣ್‌ ಗಾಂಧಿ ಲೇಖನದಲ್ಲಿ ವಿವರಿಸಿದ್ದಾರೆ.

ಆದರೆ ಈ ಲೇಖನ ವರುಣ್‌ ಗಾಂಧಿಗೆ ತಿರುಗುಬಾಣವಾಗಿದೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹನ್ಸ್‌ರಾಜ್‌ ಅಹಿರ್‌ ಅವರು ವರುಣ್‌ ಗಾಂಧಿಯನ್ನು ಟೀಕಿಸಿದ್ದಾರೆ.

ಈ ರೀತಿಯ ಹೇಳಿಕೆಗಳನ್ನುನೀಡುವುದು ನಿಜಕ್ಕೂ ಬೇಜವಾಬ್ದಾರಿತನದ್ದಾಗಿದೆ. ರೋಹಿಂಗ್ಯಾಗಳಿಗೆ ಆಶ್ರಯ ನೀಡಬೇಕೇ ಎನ್ನುವುದು ದೇಶದ ಭದ್ರತೆಯ ಮೇಲೆ ಆಧರಿಸಿದೆ. ಈ ರೀತಿಯ ಹೇಳಿಕೆಗಳು ದೇಶದ ಹಿತಾಸಕ್ತಿಗೆ ವಿರುದ್ಧವಾದುದಾಗಿದೆ ಎಂದು ಹೇಳಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಸರಕಾರಕ್ಕೆ ರೋಹಿಂಗ್ಯಾಗಳು ತೀವ್ರ ತೊಂದರೆ ನೀಡಿದ್ದಾರೆ. ಆ ದೇಶದಲ್ಲಿ ಅರಾಜಕತೆ ಸೃಷ್ಟಿಸಿದ್ದಾರೆ. ಮ್ಯಾನ್ಮಾರ್‌ ಅವರನ್ನು ತಿರಸ್ಕರಿಸಿದೆ, ಅಂಥವರನ್ನು ನಾವು ಪುರಸ್ಕರಿಸುವುದು ಎಷ್ಟು ಸರಿ ಎಂದು ವರುಣ್‌ಗೆ ತಿರುಗೇಟು ನೀಡಿದ್ದಾರೆ.

ಸುಮಾರು 40 ಸಾವಿರಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

MoS Home Hansraj Ahir slams Varun Gandhi for comments on Rohingyas

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ