ಆ್ಯಪ್ನಗರ

ರೈತರ ಬಗ್ಗೆ ನಮ್ಮ ಸಂಸದರ ಕಾಳಜಿ ಇದೇನಾ?

ರೈತರ ಬಗ್ಗೆ ನಮ್ಮ ರಾಜಕೀಯ ಪಕ್ಷಗಳ ಮುಖಂಡರು ಹಲವು ಬಾರಿ ಸಾರ್ವಜನಿಕ ಭಾಷಣದ ವೇಳೆ ಮಾತನಾಡುತ್ತಿರುತ್ತಾರೆ. ಆದರೆ, ಲೋಕಸಭೆಯಲ್ಲಿ ಪ್ರವಾಹ ಹಾಗೂ ಬರಗಾಲದ ಬಗ್ಗೆ ಚರ್ಚೆ ನಡೆಯುವಾಗ ಮಾತ್ರ ಬಹುತೇಕ ಸಂಸದರ ಗೈರುಹಾಜರಿ ಎದ್ದು ಕಾಣುತ್ತಿತ್ತು.

TIMESOFINDIA.COM 26 Jul 2018, 2:43 pm
ಹೊಸದಿಲ್ಲಿ: ರೈತರ ಬಗ್ಗೆ ನಮ್ಮ ರಾಜಕೀಯ ಪಕ್ಷಗಳ ಮುಖಂಡರು ಹಲವು ಬಾರಿ ಸಾರ್ವಜನಿಕ ಭಾಷಣದ ವೇಳೆ ಮಾತನಾಡುತ್ತಿರುತ್ತಾರೆ. ಆದರೆ, ಲೋಕಸಭೆಯಲ್ಲಿ ಪ್ರವಾಹ ಹಾಗೂ ಬರಗಾಲದ ಬಗ್ಗೆ ಚರ್ಚೆ ನಡೆಯುವಾಗ ಮಾತ್ರ ಬಹುತೇಕ ಸಂಸದರ ಗೈರುಹಾಜರಿ ಎದ್ದು ಕಾಣುತ್ತಿತ್ತು.
Vijaya Karnataka Web farmer woes


ದೇಶದ ಬರಗಾಲ ಹಾಗೂ ಪ್ರವಾಹ ಪೀಡಿತ ರಾಜ್ಯಗಳಲ್ಲಿ ಕೇಂದ್ರ ಸರಕಾರ ಏನು ಮಾಡುತ್ತಿದೆ. ಎಷ್ಟು ಪರಿಹಾರ ನೀಡಿದೆ ಎಂಬ ವಿಚಾರದ ಬಗ್ಗೆ ಸುಮಾರು 5 ಗಂಟೆಗಳ ಕಾಲ ಚರ್ಚೆ ನಡೆದಿದ್ದು, ಈ ವೇಳೆ ಕೇವಲ ಶೇ. 10 ರಿಂದ ಶೇ. 15 ರಷ್ಟು ಸಂಸದರು ಮುಂಗಾರು ಅಧಿವೇಶನದಲ್ಲಿ ಭಾಗಿಯಾಗಿದ್ದರು. ಮಳೆಯಿಂದ ರೈತರಿಗೆ ಆಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಲೋಕಸಭೆ ಸದಸ್ಯರು ಇದನ್ನು ಪ್ರಮುಖ ವಿಷಯವಾಗಿ ನಿರ್ಧರಿಸಿದರೂ ಸಹ ಸಂಸದರ ಗೈರುಹಾಜರಿಯಿಂದ ಗಂಭೀರ ಚರ್ಚೆ ನಡೆಯಲಿಲ್ಲ.

ಲೋಕಸಭೆ ಸ್ಪೀಕರ್ ಹೊರತುಪಡಿಸಿ ಸದ್ಯ 533 ಸಂಸದರು ಇದ್ದು, ಈ ಪೈಕಿ ಮಧ್ಯಾಹ್ನ 2.25ರ ವೇಳೆ ಚರ್ಚೆ ಆರಂಭವಾದಾಗ ಕೇವಲ 61 ಸಂಸದರು ( ಆಡಳಿತ ಪಕ್ಷದ 37 ಹಾಗೂ ವಿಪಕ್ಷದ ಕೇವಲ 24 ಸಂಸದರು ಭಾಗಿಯಾಗಿದ್ದರು. ನಂತರ, ಎರಡು ಗಂಟೆಗಳ ಬಳಿಕ ಇದು 54ಕ್ಕೆ ಇಳಿದಿದೆ. ಸಂಜೆಯ ವೇಳೆಗೆ 79 ಸಂಸದರು ಭಾಗಿಯಾಗಿದ್ದರೂ, ವಿಪಕ್ಷಗಳ ಸಂಸದರ ಪೈಕಿ ಕೇವಲ 10 ಮಂದಿ ಮಾತ್ರ ಹಾಜರಿದ್ದ ಕಾರಣ ಗಂಭೀರ ಚರ್ಚೆ ನಡೆಯಲಿಲ್ಲ.

ಪ್ರವಾಹ ಹಾಗೂ ಬರ ಪೀಡಿತ ರಾಜ್ಯಗಳಿಗೆ ಕೇಂದ್ರ ಸರಕಾರ ಸಾಕಷ್ಟು ಅನುದಾನ ನೀಡಬೇಕು. ಇದರಿಂದ ರಾಜ್ಯ ಸರಕಾರಗಳು ತೊಂದರೆ ಪೀಡಿತ ವ್ಯಕ್ತಿಗಳಿಗೆ ತುರ್ತಾಗಿ ಪರಿಹಾರ ನೀಡಲು ಸಾಧ್ಯವಾಗುತ್ತದೆ ಎಂದು ಬಹುತೇಕ ವಿಪಕ್ಷಗಳ ಸದಸ್ಯರು ಆಗ್ರಹಿಸಿದ್ದಾರೆ.

ಇನ್ನು, ಚರ್ಚೆ ವೇಳೆ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್, ಶೇಖಾವತ್ ಹಾಗೂ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಸಂಸರ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೇಂದ್ರ ಸರಕಾರ ಸೂಚಿಸಿತ್ತು. ಅಲ್ಲದೆ, ಪರಿಹಾರದ ವಿಚಾರದಲ್ಲಿ ಯಾವುದೇ ರಾಜ್ಯಗಳಿಗೂ ತಾರತಮ್ಯ ಮಾಡುವುದಿಲ್ಲ ಎಂದು ಮೋದಿ ಸರಕಾರ ಭರವಸೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ