ಆ್ಯಪ್ನಗರ

ಜೈಲಿನಿಂದ ತಪ್ಪಿಸಿಕೊಂಡ ಕೈದಿ ಮಗನನ್ನು ಪೊಲೀಸರಿಗೆ ಒಪ್ಪಿಸಿದ ತಾಯಿ

ಜೈಲಿನಿಂದ ತಪ್ಪಿಸಿಕೊಂಡ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿಯೊಬ್ಬನನ್ನು ಖುದ್ದು ಆತನ ಅಮ್ಮನೇ ಮರಳಿ ಜೈಲಾಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾಳೆ.

ನವ ಗುಜರಾತ್ ಸಮಯ್ 28 Jul 2016, 4:30 pm
ಅಹ್ಮದಾಬಾದ್: ಜೈಲಿನಿಂದ ತಪ್ಪಿಸಿಕೊಂಡ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿಯೊಬ್ಬನನ್ನು ಖುದ್ದು ಆತನ ಅಮ್ಮನೇ ಮರಳಿ ಜೈಲಾಧಿಕಾರಿಗಳ ವಶಕ್ಕೆ ಒಪ್ಪಿಸಿ, ಪುತ್ರ ಮೋಹಕ್ಕಿಂತ ಕಾನೂನು ದೊಡ್ಡದೆಂದು ತೋರಿಸಿಕೊಟ್ಟಿದ್ದಾಳೆ.
Vijaya Karnataka Web mother hands over his escaped under trail son to police
ಜೈಲಿನಿಂದ ತಪ್ಪಿಸಿಕೊಂಡ ಕೈದಿ ಮಗನನ್ನು ಪೊಲೀಸರಿಗೆ ಒಪ್ಪಿಸಿದ ತಾಯಿ


ಪ್ರವೀಣ್ ಅಲಿಯಾಸ್ ಭೊಲಾ ಇಲ್ಲಿನ ಸಾಬರಮತಿ ಜೈಲಿನಿಂದ ಭಾನುವಾರ ತಪ್ಪಿಸಿಕೊಂಡಿದ್ದ. ಇಲ್ಲಿಂದ ಸುಮಾರು 30 ಕಿ.ಮೀ. ದೂರವಿರುವ ಕಲೋಲ್‌ನಿಂದ ಪ್ರವೀಣ್ ತಾಯಿ ಆಶಾಬೇನ್ ಪೊಲೀಸರಿಗೆ ಕರೆ ಮಾಡಿ ಮಗ ಬಂದಿರುವುದಾಗಿ ಹೇಳಿದ್ದಾಳೆ. ಅಷ್ಟೇ ಅಲ್ಲ, ಪೊಲೀಸರಿಗೆ ಕಲೋಲ್ ತನಕ ಬರುವ ಅಗತ್ಯವಿಲ್ಲವೆಂದು ಹೇಳಿ, 'ಮಧ್ಯರಾತ್ರಿ 12ಕ್ಕೆ ಠಾಣೆಗೆ ಕರೆದುಕೊಂಡು ಬರುವೆ. ಗೇಟಿನ ಬಳಿ ನಿಂತಿರಿ,' ಎಂದಿದ್ದಳು.

ಹೇಳಿದ್ದಷ್ಟೇ ಅಲ್ಲ, ತನ್ನ ಮಾತ ಉಳಿಸಿಕೊಂಡ ತಾಯಿ ಮಗನನ್ನು ಹೇಳಿದ ಸಮಯಕ್ಕೆ ಸರಿಯಾಗಿ ಅಪರಾಧ ವಿಭಾಗಕ್ಕೆ ಒಪ್ಪಿಸಿದ್ದಾಳೆ.

ಪ್ರವೀಣ್ 7 ಕೆವಿ ವಿದ್ಯುತ್ ತಂತಿ ಸ್ಪರ್ಶವಿದ್ದ, ಸುಮಾರು 15 ಅಡಿ ಎತ್ತರದ ಗೋಡೆ ಹಾರಿ ಜೈಲಿನಿಂದ ತಪ್ಪಿಸಿಕೊಂಡಿದ್ದ. ಜೈಲಿನಲ್ಲಿ 500 ಸಿಸಿಟಿವಿಗಳಿದ್ದು, ಹಲವು ವಾಚ್ ಟವರ್ ಸಹ ಇವೆ. ಪ್ರವೀಣ್ ತಪ್ಪಿಸಿಕೊಳ್ಳುವಾಗ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕರ್ತವ್ಯದಲ್ಲಿದ್ದವರು ನಿದ್ರಿಸುತ್ತಿದ್ದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಇನ್ನೂ ಕೇವಲ 20 ವರ್ಷದನವಾದ ಪ್ರವೀಣ್ ಒಂದು ಮಗುವಿನ ತಂದೆಯೂ ಹೌದು. ಮಗನನ್ನು ಬಿಡಲು ಅಪರಾಧ ವಿಭಾಗಕ್ಕೆ ತಾಯಿ ಬಂದಾಗ, ಜತೆಯಲ್ಲಿ ಆತನ ಪತ್ನಿಯೂ ಇದ್ದಳು.

ಜೈಲಿನಿಂದ ತಪ್ಪಿಸಿಕೊಳ್ಳುವ ಯೋಜನೆ ಬಗ್ಗೆ ಸಹ ಕೈದಿಗಳಿಗೆ ಮೊದಲೇ ತಿಳಿಸಿದ್ದ ಪ್ರವೀಣ್, ಜತೆಗೂಡುವಂತೆಯೂ ಕೇಳಿಕೊಂಡಿದ್ದ. ಆದರೆ, ಸುಮಾರು 15 ಅಡಿ ಎತ್ತರದ ಗೋಡೆ ಹಾರುವುದು ಸುಲಭದ ವಿಷಯವಾಗಿರದ ಕಾರಣ, ಯಾರೂ ಆತನ ಮಾತನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ