ಆ್ಯಪ್ನಗರ

ಬಿಜೆಪಿಯ 'ರಾಮ್‌ಪಥ್‌ ಗಮನ್‌' ಯಾತ್ರೆಯನ್ನು ಎಗರಿಸಿದ ಕಾಂಗ್ರೆಸ್‌

ಮಧ್ಯಪ್ರದೇಶದಲ್ಲಿ 2007ರಲ್ಲಿ ಬಿಜೆಪಿಯು ಶ್ರೀ ರಾಮ ಕೈಗೊಂಡಿದ್ದ ವನವಾಸ ಯಾತ್ರೆಯ ಹೆಜ್ಜೆಗಳ ಹಾದಿಯನ್ನು ಮರು ಅನ್ವೇಷಿಸುವುದಾಗಿ ಭರವಸೆ ನೀಡಿತ್ತು. ಆದರೆ ಆ ಭರವಸೆಯನ್ನು ಬಿಜೆಪಿ ಇನ್ನೂ ಕಾರ್ಯರೂಪಕ್ಕೆ ತಂದಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಗೆ ಮೊದಲು ಇದನ್ನು ಕಾರ್ಯಗತಗೊಳಿಸುವುದಾಗಿ ಕಾಂಗ್ರೆಸ್‌ ಘೋಷಿಸಿದೆ.

TIMESOFINDIA.COM 12 Sep 2018, 3:15 pm
ಭೋಪಾಲ್‌: ಮಧ್ಯಪ್ರದೇಶದಲ್ಲಿ 2007ರಲ್ಲಿ ಬಿಜೆಪಿಯು ಶ್ರೀ ರಾಮ ಕೈಗೊಂಡಿದ್ದ ವನವಾಸ ಯಾತ್ರೆಯ ಹೆಜ್ಜೆಗಳ ಹಾದಿಯನ್ನು ಮರು ಅನ್ವೇಷಿಸುವುದಾಗಿ ಭರವಸೆ ನೀಡಿತ್ತು. ಆದರೆ ಆ ಭರವಸೆಯನ್ನು ಬಿಜೆಪಿ ಇನ್ನೂ ಕಾರ್ಯರೂಪಕ್ಕೆ ತಂದಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಗೆ ಮೊದಲು ಇದನ್ನು ಕಾರ್ಯಗತಗೊಳಿಸುವುದಾಗಿ ಕಾಂಗ್ರೆಸ್‌ ಘೋಷಿಸಿದೆ.
Vijaya Karnataka Web 1


ಶ್ರೀ ರಾಮ ಯಾತ್ರೆಯ ಹೆಜ್ಜೆಗಳ ಮರು ಅನ್ವೇಷಣೆಯು ಅಧಿಕಾರದಿಂದ ದೂರವಾಗಿರುವ ತಮ್ಮನ್ನು ಮತ್ತೆ ಅಧಿಕಾರದತ್ತ ತರಲಿದೆ ಎಂಬುದು ಕಾಂಗ್ರೆಸ್‌ನ ನಿರೀಕ್ಷೆಯಾಗಿದೆ.

ಸೆ. 21ರಂದು ಕಾಂಗ್ರೆಸ್‌ 'ರಾಮ್‌ ಗಮನ್‌' ಹೆಸರಿನಲ್ಲಿ ಯಾತ್ರೆ ಆರಂಭಿಸಲಿದೆ. ಪಕ್ಷದ ಮುಖಂಡರಾದ ಕಮಲ್‌ನಾಥ್‌ , ದಿಗ್ವಿಜಯ್‌ ಸಿಂಗ್‌, ಜ್ಯೋತಿರಾದಿತ್ಯ ಸಿಂಧಿಯಾ, ಸುರೇಶ್‌ ಪಚೌರಿ, ಅಜಯ್‌ ಸಿಂಗ್‌ ಅವರನ್ನೊಳಗೊಂಡ ತಂಡ ಐದು ಜಿಲ್ಲೆಗಳಲ್ಲಿ ಮತ್ತು 35 ಅಸೆಂಬ್ಲಿ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಜಬಲ್ಪುರದ ರಾಮಗಢಕ್ಕೆ ತೆರಳುವಾಗ ಸೀತೆ ಮತ್ತು ರಾಮ ವಿಶ್ರಾಂತಿ ಪಡೆದರೆನ್ನಲಾದ ಚಿತ್ರಕೂಟದ ಸ್ಪತಿಕ್‌ ಶಿಲಾದಿಂದ ಯಾತ್ರೆ ಆರಂಭಗೊಳ್ಳಲಿದ್ದು, ಗುಪ್ತ್‌ ಗೋದಾವರಿ, ಸತಿ ಅನಸೂಯ ದೇಗುಲ, ಸತ್ನಾದ ಮೈಹರ್‌ ದೇಗುಲಗಳನ್ನು ಹಾದು ಯಾತ್ರೆ ಸಾಗಲಿದೆ. ಒಟ್ಟು ಹತ್ತೊಂಬತ್ತು ದಿನಗಳ ಈ ಯಾತ್ರೆಯಲ್ಲಿ ರಾಮ ಸಂಚರಿಸಿದ್ದ, ಭೇಟಿ ನೀಡಿದ್ದ, ವಿಶ್ರಾಂತಿ ಪಡೆದಿದ್ದ ಸ್ಥಳಗಳಿಗೆ ತಂಡವು ಭೇಟಿ ನೀಡಲಿದೆ.

ಇಂಥದ್ದೊಂದು ಕಾರ್ಯಯೋಜನೆಯನ್ನು ಪರಿಚಯಿಸಿದ್ದು ಆರೆಸ್ಸೆಸ್‌ ಮುಖಂಡ, ಕೇಂದ್ರ ಸಚಿವರಾಗಿದ್ದ ಅನಿಲ್‌ ಮಾಧವ್‌ ದವೆ. ಸಿಎಂ ಆಗಿದ್ದ ಉಮಾ ಭಾರತಿ ಅವರು ಶ್ರೀ ರಾಮ ಯಾತ್ರೆ ಪಥ ಮರು ಅನ್ವೇಷಣೆ ಯೋಜನೆಯನ್ನು ಪ್ರಸ್ತಾಪಿಸಿದ್ದು, ಶಿವರಾಜ್‌ ಸಿಂಗ್‌ ಔಹಾಣ್‌ ಪ್ರಕಟಿಸಿದ್ದರು. ಆದರೆ ಅನಿಲ್‌ ಮಾಧವ್‌ ದವೆ ಅವರು 2017ರ ಮೇನಲ್ಲಿ ತೀರಿಕೊಂಡ ಬಳಿಕ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಪ್ರಗತಿಯಾಗಿಲ್ಲ. ಈಗ ಚುನಾವಣೆ ಹತ್ತಿರ ಬರುತ್ತಿರುವಂತೆ ಬಿಜೆಪಿ ಕಾರ್ಯಗತಗೊಳಿಸದೆ ಬಿಟ್ಟಿರುವ ಶ್ರೀ ರಾಮ ಯಾತ್ರೆಯ ಹೆಜ್ಜೆಗಳನ್ನು ಮರು ಅನ್ವೇಷಿಸುವುದಾಗಿ ಕಾಂಗ್ರೆಸ್‌ ಘೋಷಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ