ಆ್ಯಪ್ನಗರ

ಗಾಯಾಳುವನ್ನು ಹೊತ್ತು ಹಳಿ ಮೇಲೆ ಸಾಗಿದ ಪೇದೆ

ಗಾಯಾಳುವನ್ನು 20 ವರ್ಷದ ಅಜಿತ್‌ ಎಂದು ಗುರುತಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಭೋಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Vijaya Karnataka 24 Feb 2019, 7:17 am
ಭೋಪಾಲ್‌: ಚಲಿಸುವ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ಒಂದು ಕಿ.ಮೀ ದೂರ ರೈಲು ಹಳಿಯ ಮೇಲೆಯೇ ಸಾಗಿದ ಪೊಲೀಸ್‌ ಪೇದೆಯ ಮಾನವೀಯತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Vijaya Karnataka Web track


ಯುವಕನೊಬ್ಬ ರೈಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ ಎಂಬ ಮಾಹಿತಿ ಶನಿವಾರ ಬೆಳಗ್ಗೆ ಹೊಶಂಗಾಬಾದ್‌ ಠಾಣೆಗೆ ತಲುಪಿತು. ತಕ್ಷಣವೇ ಪೇದೆ ಪೂನಮ್‌ ಬಿಲ್ಲೋರ್‌ ಅವರು ಚಾಲಕ ರಾಹುಲ್‌ ಸಕಾಳೆ ಜತೆ ತೆರಳಿದರು. ರಸ್ತೆ ಇಲ್ಲದ ಕಾರಣ ಘಟನಾ ಸ್ಥಳದಿಂದ ಒಂದು ಕಿ.ಮೀ ಹಿಂದೆಯೇ ಅವರು ವಾಹನ ನಿಲ್ಲಿಸಬೇಕಾಯಿತು. ಹಿಂದೆಮುಂದೆ ಯೋಚಿಸದ ಪೇದೆ ಪೂನಮ್‌, ಗಾಯಾಳುವನ್ನು ಹೊತ್ತು ವಾಹನ ನಿಲ್ಲಿಸಿದ್ದ ಸ್ಥಳದತ್ತ ದೌಡಾಯಿಸಿದರು.

ಪೊಲೀಸರಿಗೆ ಮಾಹಿತಿ ನೀಡಿದ್ದ ವ್ಯಕ್ತಿ ಇದನ್ನು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಗಾಯಾಳುವನ್ನು 20 ವರ್ಷದ ಅಜಿತ್‌ ಎಂದು ಗುರುತಿಸಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಭೋಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ