ಆ್ಯಪ್ನಗರ

ಬಿಳಿಯಾಗಲೆಂದು ಮಗುವನ್ನು ಕಲ್ಲಿನಿಂದ ತಿಕ್ಕಿದ ತಾಯಿ

ಮಗುವಿನ ಮೈಬಣ್ಣ ಬಿಳಿಯಾಗುತ್ತದೆಂದು ನಂಬಿಕೊಂಡು ತಾಯಿಯೊಬ್ಬರು ಐದು ವರ್ಷದ ಮಗುವನ್ನು ಕಪ್ಪು ಕಲ್ಲಿನಿಂದ ತಿಕ್ಕಿ ಹಿಂಸಿಸುತ್ತಿರುವುದು ನಿಶಾಂತ್‌ಪುರದಲ್ಲಿ ಬೆಳಕಿಗೆ ಬಂದಿದೆ.

Vijaya Karnataka Web 2 Apr 2018, 5:31 pm
ಭೋಪಾಲ್‌: ಮಗುವಿನ ಮೈಬಣ್ಣ ಬಿಳಿಯಾಗುತ್ತದೆಂದು ನಂಬಿಕೊಂಡು ತಾಯಿಯೊಬ್ಬರು ಐದು ವರ್ಷದ ಮಗುವನ್ನು ಕಪ್ಪು ಕಲ್ಲಿನಿಂದ ತಿಕ್ಕಿ ಹಿಂಸಿಸುತ್ತಿರುವುದು ನಿಶಾಂತ್‌ಪುರದಲ್ಲಿ ಬೆಳಕಿಗೆ ಬಂದಿದೆ.
Vijaya Karnataka Web mp mother scrubs 5 year old with stone to make him fair
ಬಿಳಿಯಾಗಲೆಂದು ಮಗುವನ್ನು ಕಲ್ಲಿನಿಂದ ತಿಕ್ಕಿದ ತಾಯಿ


ಈ ಮಹಾತಾಯಿ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಮಗುವೊಂದನ್ನು ದತ್ತು ಪಡೆದುಕೊಂಡಿದ್ದಾರೆ ಎಂಬುದು ಗಮನಾರ್ಹ. ಆಕೆಯ ಹಿರಿಯ ಸೋದರಿಯ ಮಗಳು ಶೋಭಾ ಶರ್ಮಾ ಅವರು ಚಿಕ್ಕಮ್ಮನ ಈ ವರ್ತನೆಯಿಂದ ಮಗುವಿಗೆ ಆಗುತ್ತಿರುವ ಹಿಂಸೆಗೆ ಬೇಸತ್ತು ಚೈಲ್ಡ್‌ ಲೈನ್‌ಗೆ ವಿಷಯ ತಿಳಿಸಿದ್ದಾರೆ. ಹೀಗಾಗಿ ಸಹಾಯವಾಣಿಯ ಸಿಬ್ಬಂದಿ ಮತ್ತು ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ.

ಆರೋಪಿ ಮಹಿಳೆ ಸುಧಾ ತಿವಾರಿ ಉತ್ತರಾಖಂಡ್‌ನ ಮಾತೃಛಾಯಾ ಸಂಸ್ಥೆಯಿಂದ ಒಂದೂವರೆ ವರ್ಷದ ಮಗುವನ್ನು ದತ್ತು ಪಡೆದಿದ್ದರು. ಸುಧಾ ತಿವಾರಿ ಅವರ ಪತಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಆ ಮಗುವನ್ನು ತಂದಂದಿನಿಂದ ಆಕೆಯ ಅತ್ತೆ ಮೈ ಬಣ್ಣದ ಬಗ್ಗೆ ಅಸಮಾಧಾನ ಹೊಂದಿದ್ದು, ನಾನಾ ರೀತಿ ಮಗುವನ್ನು ಬೆದರಿಸುತ್ತಿದ್ದರು. ಮಗುವಿನ ಮೈ ಬಣ್ಣ ಬಳಿಯಾಗಿಸಲು ಆಕೆ ಹಲವು ರೀತಿ ಪ್ರಯತ್ನಿಸಿದ್ದರು. ವರ್ಷದ ಹಿಂದೆ ಯಾರೋ ಕಲ್ಲಿನಿಂದ ಮಗುವಿನ ಮೈ ತಿಕ್ಕುವಂತೆ ಸಲಹೆ ನೀಡಿದ್ದರು. ಅದರಂತೆ ಆಕೆ ಮಗು ಬಣ್ಣ ಬಿಳಿಯಾಗಲೆಂದು ಕಲ್ಲಿನಿಂದ ಉಜ್ಜುತ್ತಿದ್ದರು. ಇದರಿಂದಾಗಿ ಮಗುವಿನ ದೇಹದ ಮೇಲೆಲ್ಲ ಗಾಯವಾಗಿತ್ತು. ಚೈಲ್ಡ್‌ ಹೆಲ್ಫ್‌ ಲೈನ್‌ನವರು ಮಗುವನ್ನು ಹಮಿದಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮಗುವನ್ನು ಮಕ್ಕಳ ಕಲ್ಯಾಣ ಆಯೋಗದ ವಶಕ್ಕೆ ನೀಡಲಾಗಿದೆ.

ಮಗುವನ್ನು ದತ್ತು ನೀಡಿದ ಸಂಸ್ಥೆ ಬಳಿಕ ನಿಗಾ ವಹಿಸಬೇಕಿತ್ತು. ಆದರೆ ನಿಗಾ ವಹಿಸಿಲ್ಲ. ಮಗುವಿಗೆ ಈ ರೀತಿ ಹಿಂಸೆ ನೀಡುವುದನ್ನು ತಡೆಯಲು ನಾನು ಯತ್ನಿಸಿದರೂ ಆಕೆ ಕೇಳುತ್ತಿರಲಿಲ್ಲ. ಹೀಗಾಗಿ ದೂರು ನೀಡಬೇಕಾಯಿತು ಎಂದು ಶೋಭಾ ಶರ್ಮಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ