ಆ್ಯಪ್ನಗರ

ಸಾಮೂಹಿಕ ಮದ್ವೆ ಊಟ ಬಡಿಸೋಕು ಶಿಕ್ಷಕರು ಬೇಕು!

ಒತ್ತಾಯದಿಂದ ಸುಮಾರು 400 ಶಿಕ್ಷಕರನ್ನು ಊಟ ಬಡಿಸುವ ಕೆಲಸ ಮಾಡಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 23 May 2017, 1:01 pm
ಭೋಪಾಲ್: ಸರಕಾರಿ ಶಾಲಾ ಶಿಕ್ಷಕರಿಗೆ ಪಾಠ ಮಾಡುವುದಕ್ಕಿಂತ ಇತರೆ ಚಟುವಟಿಕೆಗಳೇ ಹೆಚ್ಚು ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿರುವ ಸಂದರ್ಭದಲ್ಲೇ ಸರಕಾರಿ ಪ್ರಾಯೋಜಿತ ಸಾಮೂಹಿಕ ವಿವಾಹದಲ್ಲಿ ಊಟ ಬಡಿಸಲು ಶಿಕ್ಷಕರನ್ನು ಬಳಸಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
Vijaya Karnataka Web mp teachers made to serve food at mass wedding
ಸಾಮೂಹಿಕ ಮದ್ವೆ ಊಟ ಬಡಿಸೋಕು ಶಿಕ್ಷಕರು ಬೇಕು!


ಒತ್ತಾಯದಿಂದ ಸುಮಾರು 400 ಶಿಕ್ಷಕರನ್ನು ಊಟ ಬಡಿಸುವ ಕೆಲಸ ಮಾಡಿಸಲಾಗಿದೆ.

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಸೋಮವಾರ ನಡೆದ ಮುಖ್ಯಮಂತ್ರಿ ಕನ್ಯಾದಾನ ಯೋಜನೆ ಕಾರ್ಯಕ್ರಮದಡಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಯ ಶಿಕ್ಷಕರನ್ನು ಊಟ ಬಡಿಸಲು ನಿಯೋಜಿಸಲಾಗಿತ್ತು. ಆದರೆ, ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಂತೆ, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕಾರ್ಯಕ್ರಮಕ್ಕೆ ಆಗಮಿಸುವ ಮುನ್ನವೇ ಶಿಕ್ಷಕರಿಗೆ ಊಟ ಬಡಿಸುವ ಕೆಲಸದಿಂದ ಮುಕ್ತಿ ನೀಡಿದ್ದಾರೆ. ಈ ಬಗ್ಗೆ ವಿಸ್ತೃತ ವರದಿ ನೀಡುವಂತೆ ಜಿಲ್ಲಾ ಶಿಕ್ಷಣ ಅಧಿಕಾರಿ(ಡಿಇಒ)ಗೆ ರಾಜ್ಯ ಶಿಕ್ಷಣ ಸಚಿವ ದೀಪಕ್ ಜೋಶಿ ಆದೇಶಿಸಿದ್ದಾರೆ.

ಸುಮಾರು 400 ಶಿಕ್ಷಕರಿಗೆ ಊಟ ಬಡಿಸುವ ಸಂದರ್ಭ ಯಾವ ಯಾವ ತಿನಿಸುಗಳನ್ನು ಬಡಿಸಬೇಕು ಎಂಬುದನ್ನು ಡಿಇಒ ಲಿಖಿತವಾಗಿ ಆದೇಶಿಸಿದ್ದರು. ಮೇ 20ಕ್ಕೆ ಈ ಆದೇಶ ಜಾರಿಯಾಗಿದ್ದು, 2,390 ಜೋಡಿಗೆ ಊಟ ಬಡಿಸುವಂತೆ ತಿಳಿಸಲಾಗಿತ್ತು ಎನ್ನಲಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುವ ನಮ್ಮನ್ನು ಮದುವೆ ಊಟ ಬಡಿಸುವವರನ್ನಾಗಿಸುವ ಮೂಲಕ ನಮ್ಮ ಘನತೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಶಿಕ್ಷಕರು ನೋವು ತೋಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ