ಆ್ಯಪ್ನಗರ

ಎಂಜಿನಿಯರ್‌ನನ್ನು ಕಟ್ಟಿ ಹಾಕಿ ಕೆಸರು ಸುರಿದ ಶಾಸಕ

ಮಹಾರಾಷ್ಟ್ರದ ಮಾಜಿ ಸಿಎಂ, ಕಾಂಗ್ರೆಸ್‌ ನಾಯಕ ನಾರಾಯಣ ರಾಣೆ ಪುತ್ರ ನಿತೀಶ್‌ ರಾಣೆಯೇ ಹಲ್ಲೆಕೋರ. ಮುಂಬಯಿ-ಗೋವಾ ಹೆದ್ದಾರಿಯಲ್ಲಿರುವ ಕಂಕಾವಳಿಯ ಸೇತುವೆ ಸಮೀಪ ಪ್ರಕಾಶ್‌ ಶೆಡೇಕರ್‌ ಎಂಬವರನ್ನು ಕಟ್ಟಿ ಹಾಕಿ ರಾಣೆ ಮತ್ತು ಹಿಂಬಾಲಕರು ದೌರ್ಜನ್ಯ ನಡೆಸಿದ್ದಾರೆ.

PTI 5 Jul 2019, 5:00 am
ಮುಂಬಯಿ: ಮಧ್ಯಪ್ರದೇಶದ ಬಿಜೆಪಿ ಶಾಸಕ ಆಕಾಶ್‌ ವಿಜಯ ವರ್ಗೀಯ ಅವರು ಸರಕಾರಿ ಅಧಿಕಾರಿಯೊಬ್ಬರಿಗೆ ಬ್ಯಾಟ್‌ನಿಂದ ಹೊಡೆದ ಘಟನೆಯ ಬೆನ್ನಿಗೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಶಾಸಕರೊಬ್ಬರು ದುಂಡಾವರ್ತನೆ ತೋರಿದ್ದಾರೆ.
Vijaya Karnataka Web rane

ಮಹಾರಾಷ್ಟ್ರದ ಮಾಜಿ ಸಿಎಂ, ಕಾಂಗ್ರೆಸ್‌ ನಾಯಕ ನಾರಾಯಣ ರಾಣೆ ಪುತ್ರ ನಿತೀಶ್‌ ರಾಣೆಯೇ ಹಲ್ಲೆಕೋರ. ಮುಂಬಯಿ-ಗೋವಾ ಹೆದ್ದಾರಿಯಲ್ಲಿರುವ ಕಂಕಾವಳಿಯ ಸೇತುವೆ ಸಮೀಪ ಪ್ರಕಾಶ್‌ ಶೆಡೇಕರ್‌ ಎಂಬವರನ್ನು ಕಟ್ಟಿ ಹಾಕಿ ರಾಣೆ ಮತ್ತು ಹಿಂಬಾಲಕರು ದೌರ್ಜನ್ಯ ನಡೆಸಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.
.............
ಆಗಿದ್ದೇನು?
ನಿತೀಶ್‌ ರಾಣೆ ಮತ್ತು ಬೆಂಬಲಿಗರು ರಸ್ತೆ ಗುಂಡಿಗಳ ತಪಾಸಣೆಗಾಗಿ ಆ ಭಾಗಕ್ಕೆ ಹೋಗಿದ್ದರು. ಆಗ ಪ್ರಕಾಶ್‌ ಅದೇ ಜಾಗದಲ್ಲಿದ್ದರು. ಈ ಭಾಗದಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸಿಲ್ಲ ಎಂಬ ಕಾರಣವನ್ನು ಇಟ್ಟುಕೊಂಡು ನಿತೀಶ್‌ ಜಗಳಕ್ಕಿಳಿದಿದ್ದಾರೆ. ''ನಿಮಗೆ ಇಲ್ಲಿನ ಜನರ ಕಷ್ಟ ಅರ್ಥವಾಗುವುದಿಲ್ಲ. ನೀವು ಕೇವಲ ಪಿಲ್ಲರ್‌ ನಿರ್ಮಾಣ ಮಾಡ್ತೀರಿ. ಚರಂಡಿ ಯಾರು ಮಾಡ್ತಾರೆ? ನೀರು ಹರಿದು ಹೋಗೋದು ಹೇಗೆ? ನೀವು ಇಷ್ಟು ನಿರ್ಲಕ್ಷ್ಯ ವಹಿಸಿದರೆ ಹೇಗೆ? ಈ ರಸ್ತೆಯಲ್ಲಿ ಜನ ಹೇಗೆ ಓಡಾಡಬೇಕು,'' ಎಂದು ನಿತೀಶ್‌ ರಾಣೆ ಗದರಿದ್ದಾರೆ.

''ನನ್ನ ಜಾಗದಲ್ಲಿ ನಿಂತು ಯೋಚಿಸಿ. ನನ್ನೊಂದಿಗೆ ಬನ್ನಿ ನಾನು ತೋರಿಸ್ತೇನೆ. ಸರ್ವಿಸ್‌ ರೋಡ್‌ ಯಾವಾಗ ನಿರ್ಮಿಸ್ತೀರಿ? ಗೋವಾದಲ್ಲಿ ಸರ್ವಿಸ್‌ ರೋಡ್‌ ಮಾಡ್ತೀರಲ್ಲಾ... ಇಲ್ಲಿ ಯಾಕೆ ಮಾಡೊಲ್ಲ? ಕಂಕಾವಳಿ ನಿಮಗೇನು ಅನನ್ಯಾಯ ಮಾಡಿದೆ,'' ಎಂದು ಪ್ರಶ್ನಿಸಿದ್ದಾರೆ. ''ಮಣ್ಣು ಎಷ್ಟು ಕೊಳಕಾಗಿದೆ ಅಂತ ನಾನು ನಿಮಗೆ ತೋರಿಸ್ಲಾ? ನೀವು ಸ್ವಚ್ಛ ಬಟ್ಟೆ ಧರಿಸಿದ್ದೀರಿ. ಏರ್‌ ಕಂಡೀಷನ್ಡ್‌ ಕಾರಲ್ಲಿ ಬರ್ತೀರಿ, ನಾವಿಲ್ಲಿ ಮಣ್ಣಲ್ಲಿ ಬಿದ್ದಿದ್ದೇವೆ'' ಎಂದು ಹೇಳುವ ರಾಣೆ ಪಕ್ಕದಲ್ಲಿರುವ ಕೆಸರನ್ನು ತೋರಿಸಿ, ''ಇದನ್ನು ಸುರಿಯಿರಿ ಅವರ ತಲೆಗೆ'' ತಮ್ಮ ಬೆಂಬಲಿಗರಿಗೆ ಆದೇಶ ನೀಡುತ್ತಾರೆ. ಆಗ ಬೆಂಬಲಿಗರು ಎಂಜಿನಿಯರ್‌ ಅವರನ್ನು ಹಿಡಿದು ಮಣ್ಣು ಸುರಿಯುವ ದೃಶ್ಯಗಳು ವಿಡಿಯೊದಲ್ಲಿವೆ.
ದೌರ್ಜನ್ಯ ನಡೆಸಿದ ನಿತೀಶ್‌ ರಾಣೆ ಮತ್ತು ಬೆಂಬಲಿಗರ ಮೇಲೆ ದೂರು ನೀಡಲಾಗಿದ್ದು, ಎಫ್‌ಐಆರ್‌ ದಾಖಲಾಗಿದೆ.
......
ವಿಜಯವರ್ಗೀಯಗೆ ಬಿಜೆಪಿ ನೋಟಿಸ್‌

ಇಂದೋರ್‌ನಲ್ಲಿ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಪೌರಾಡಳಿತದ ಅಧಿಕಾರಿ ಮೇಲೆ ಕ್ರಿಕೆಟ್‌ ಬ್ಯಾಟ್‌ನಿಂದ ಹಲ್ಲೆ ನಡೆಸಿ ಬಂಧನಕಕೆ ಒಳಗಾಗಿದ್ದ ಶಾಸಕ ಆಕಾಶ್‌ ವಿಜಯವರ್ಗೀಯ ಅವರಿಗೆ ಬಿಜೆಪಿ ನೋಟಿಸ್‌ ಜಾರಿ ಮಾಡಿದೆ. ಆಕಾಶ್‌ ಅವರ ಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಖಂಡಿಸಿದ್ದು, ಇಂಥ ಉದ್ಧಟತನಗಳನ್ನು ಪಕ್ಷ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ