ಆ್ಯಪ್ನಗರ

ಮುಘಲ್‌ಸರಾಯ್‌ ಸ್ಟೇಷನ್‌ ಇನ್ನು ದೀನ್‌ ದಯಾಳ್‌ ಜಂಕ್ಷನ್‌

ಉತ್ತರ ಪ್ರದೇಶದ ಮುಘಲ್‌ಸರಾಯ್‌ ರೈಲು ನಿಲ್ದಾಣಕ್ಕೆ ಭಾನುವಾರ ಆರೆಸ್ಸೆಸ್‌ ಚಿಂತಕ ದೀನ್‌ ದಯಾಳ್‌ ಉಪಾಧ್ಯಾಯ ಅವರ ಹೆಸರು ಇಡಲಾಗುತ್ತಿದೆ.

Vijaya Karnataka 5 Aug 2018, 9:22 am
ಲಖನೌ: ಉತ್ತರ ಪ್ರದೇಶದ ಮುಘಲ್‌ಸರಾಯ್‌ ರೈಲು ನಿಲ್ದಾಣಕ್ಕೆ ಭಾನುವಾರ ಆರೆಸ್ಸೆಸ್‌ ಚಿಂತಕ ದೀನ್‌ ದಯಾಳ್‌ ಉಪಾಧ್ಯಾಯ ಅವರ ಹೆಸರು ಇಡಲಾಗುತ್ತಿದೆ.
Vijaya Karnataka Web Railway Station


ದಿಲ್ಲಿ-ಹೌರಾ ಮಾರ್ಗದಲ್ಲಿರುವ ಶತಮಾನಗಳಷ್ಟು ಹಳೆಯ ಸ್ಟೇಷನ್‌ಗೆ ಮರುನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ರೈಲ್ವೆ ಸಚಿವ ಪಿಯೂಷ್‌ ಗೋಯಲ್‌, ಸಿಎಂ ಆದಿತ್ಯನಾಥ್‌ ಅವರು ಪ್ರಯಾಣಿಕ ರೈಲು ಮತ್ತು ಮಹಿಳಾ ಸಿಬ್ಬಂದಿಯೇ ಇರುವ ಗೂಡ್ಸ್‌ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಉಪಾಧ್ಯಾಯ ಅವರು 1968ರ ಫೆಬ್ರವರಿಯಲ್ಲಿ ಮುಘಲ್‌ಸರಾಯ್‌ ಸ್ಟೇಷನ್‌ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಮುಘಲ್‌ ಸರಾಯ್‌ ಮಾಜಿ ಪ್ರಧಾನಿ ಲಾಲ್‌ ಬಹಾದೂರ್‌ ಶಾಸ್ತ್ರಿ ಅವರ ಹುಟ್ಟೂರೂ ಹೌದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ