ಆ್ಯಪ್ನಗರ

ಮಗನ ಮದುವೆಗೆ ಮುನ್ನ 50ಸಾವಿರ ಪೊಲೀಸರ ಬಾಯಿ ಸಿಹಿ ಮಾಡಿದ ಅಂಬಾನಿ

ಮುಂಬಯಿಯ ಪ್ರತಿಯೊಂದು ಪೊಲೀಸ್ ಠಾಣೆಗೆ ಸಿಹಿ ತಿಂಡಿ ಡಬ್ಬವನ್ನು ಕಳುಹಿಸಲಾಗಿದ್ದು, ಅದರಲ್ಲಿ ಮದುವೆಯ ಆಮಂತ್ರಣ ಪತ್ರವನ್ನು ಸಹ ಇಡಲಾಗಿದೆ.

Times Now 9 Mar 2019, 12:56 pm
ಮುಂಬಯಿ: ಉದ್ಯೋಗಪತಿ ಮುಖೇಶ್ ಅಂಬಾನಿ ತಮ್ಮ ಪುತ್ರ ಆಕಾಶ್ ಅಂಬಾನಿ ವಿವಾಹಕ್ಕೂ ಮುನ್ನ ಪೊಲೀಸರಿಗೆ ಸಿಹಿ ಕಳುಹಿಸಿ ಅಚ್ಚರಿ ಮೂಡಿಸಿದ್ದಾರೆ. ನಗರದಲ್ಲಿ ಕಾರ್ಯ ನಿರ್ವಹಿಸುವ ಸುಮಾರು 50ಸಾವಿರ ಪೊಲೀಸರಿಗೆ ಅವರು ಸಿಹಿ ತಿಂಡಿ ಡಬ್ಬವನ್ನು ಕಳುಹಿಸಿದ್ದಾರೆ.
Vijaya Karnataka Web Wedding Card


9 ಮಾರ್ಚ್ 2019ರಂದು ( ಇಂದು) ಮುಖೇಶ್ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ, ಉದ್ಯಮಿ ರಸೆಲ್ ಮೆಹ್ತಾ- ಮೋನಾ ಮೆಹ್ತಾ ಪುತ್ರಿ ಶ್ಲೋಕಾ ಮೆಹ್ತಾ ಅವರನ್ನು ವರಿಸಲಿದ್ದಾರೆ.


ಮೂಲಗಳ ಪ್ರಕಾರ ಮುಂಬಯಿಯ ಪ್ರತಿಯೊಂದು ಪೊಲೀಸ್ ಠಾಣೆಗೆ ಸಿಹಿ ತಿಂಡಿ ಡಬ್ಬವನ್ನು ಕಳುಹಿಸಲಾಗಿದ್ದು, ಅದರಲ್ಲಿ ಮದುವೆಯ ಆಮಂತ್ರಣ ಪತ್ರವನ್ನು ಸಹ ಇಡಲಾಗಿದೆ.

ಠಾಣೆಯಲ್ಲಿ ನನಗೊಂದು ಡಬ್ಬ ನೀಡಲಾಯಿತು. ಮಗನ ಮದುವೆ ಹಿನ್ನೆಲೆಯಲ್ಲಿ ನಮಗೆಲ್ಲ ಸಿಹಿ ಕಳುಹಿಸಿದ್ದಾರೆ ಎಂದು ತಿಳಿದು ಬಂತು ಎಂದು ಸಿಹಿ ಪಡೆದುಕೊಂಡಿರುವ ಪೊಲೀಸರೊಬ್ಬರು ಹೇಳಿದ್ದಾರೆ.


ಸಿಹಿ ತಿಂಡಿ ಪೆಟ್ಟಿಗೆಯ ಮೇಲೆ , ಶ್ಲೋಕಾ -ಆಕಾಶ್ ವಿವಾಹದ ಸಂತೋಷದ ಗಳಿಗೆಯಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಅಪೇಕ್ಷಿಸುತ್ತೇವೆ- ನೀತಾ, ಮುಕೇಶ್ ಅಂಬಾನಿ, ಇಶಾ, ಆನಂದ್, ಅನಂತ್ ಎಂದು ಬರೆಯಲಾಗಿದೆ.

ಅಧಿಕೃತ ವಿವಾಹ ಆಮಂತ್ರಣ ಪತ್ರಿಕೆಯ ಅನುಸಾರ 9 ಮಾರ್ಚ್‌ನಿಂದ 11 ಮಾರ್ಚ್‌ವರೆಗೆ ಮೂರು ದಿನಗಳ ಕಾಲ ವಿವಾಹ ಸಮಾರಂಭ ನಡೆಯಲಿದೆ.

ಇಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ವಿವಾಹ ನಿಗದಿಯಾಗಿದ್ದು , ಸೋಮವಾರ ರಿಸೆಪ್ಶನ್ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ